ಜೈಲಿನಿಂದ ಬಿಡುಗಡೆಯಾದ ದಿನವೇ ಯುವಕನ ಕೊಲೆ: ಹಳೇ ದ್ವೇಷಕ್ಕೆ ಹರಿದ ನೆತ್ತರು!

ಬೆಂಗಳೂರು:- ಬೆಂಗಳೂರಿನ ಜೆಜೆನಗರ ಜನತಾ ಕಾಲೋನಿಯಲ್ಲಿ ಶನಿವಾರವಷ್ಟೇ ಜೈಲಿನಿಂದ ಬಿಡುಗಡೆಯಾದ ಯುವಕನನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಜರುಗಿದೆ. 26 ವರ್ಷದ ವಿಜಯ್ ಕೊಲೆಯಾದ ಯುವಕ. Satish Jarakiholi: ದಲಿತ ಸಿಎಂ ಬಗ್ಗೆ ಮುಂದಿನ ಎಲೆಕ್ಷನ್ ನಲ್ಲಿ ನೋಡೋಣ: ಸತೀಶ್ ಜಾರಕಿಹೊಳಿ! ಶನಿವಾರವಷ್ಟೇ ವಿಜಯ್ ಜೈಲಿನಿಂದ ಬಿಡುಗಡೆಯಾಗಿ ಹೊರಬಂದಿದ್ದ. ಜೈಲಿನಿಂದ ಹೊರಬಂದಿದ್ದ ವಿಜಯ್‌ನನ್ನು ಹಳೇ ದ್ವೇಷ ಹಿನ್ನೆಲೆ ಮಾತುಕತೆಗೆ ಕರೆಸಿ ದುಷ್ಕರ್ಮಿಗಳು ಶನಿವಾರ ರಾತ್ರಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ