Close Menu
Ain Live News
    Facebook X (Twitter) Instagram YouTube
    Thursday, June 19
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ವಾಪಸ್: ಅಲ್ಲಿನ ಪರಿಸ್ಥಿತಿ ಬಗ್ಗೆ ಹೇಳಿದ್ದೇನು?

    By AIN AuthorJune 19, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:- ಇಸ್ರೇಲ್​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ಸೇಫ್ ಆಗಿ ವಾಪಸ್ ಆಗಿದ್ದಾರೆ. ಇಸ್ರೇಲ್ ಹಾಗೂ ಇರಾನ್ ನಡುವೆ ಸಂಘರ್ಷ ನಡೆಯುತ್ತಿದ್ದು, ಇದರ ಮಧ್ಯೆ ಇಸ್ರೇಲ್​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ಸೇಫ್ ಆಗಿ ವಾಪಸ್ ಆಗಿದ್ದಾರೆ.

    ಇಸ್ರೇಲ್​​ ನಲ್ಲಿ ಸಿಲುಕಿದ್ದ 18 ಕನ್ನಡಿಗರು ಕುವೈತ್​ ನಿಂದ ಮುಂಬೈಗೆ ಬಂದು ಅಲ್ಲಿಂದ ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇನ್ನು ಇಸ್ರೇಲ್​ ನಲ್ಲಿ ಯುದ್ಧದ ವಾತಾವರಣ ಹೇಗಿತ್ತು? ಅಲ್ಲಿನ ಪರಿಸ್ಥಿತಿಯಲ್ಲಿ ಹೇಗಿದ್ದರು ಎನ್ನುವ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

    ಎಸ್, ಅಧ್ಯಯನ ಮಾಡಲು ಇಸ್ರೇಲ್ ಗೆ ತೆರಳಿದ್ದ ಬಿ ಪ್ಯಾಕ್ ತಂಡ ಸುರಕ್ಷೀತವಾಗಿ ತಾಯ್ನಾಡಿಗೆ ವಾಪಸ್ ಆಗಿದೆ. ಇದೇ ತಿಂಗಳ 7 ರಂದು ರಾಜ್ಯದ 18 ಜನರ ತಂಡ ಇಸ್ರೇಲ್ ಗೆ ತೆರಳಿತ್ತು, ಈ ವೇಳೆ ಬಿ ಪ್ಯಾಕ್ ತಂಡದ ಸದಸ್ಯರು ಯುದ್ದದ ಸಂದಿಗ್ಧ ಪರಿಸ್ಥಿತಿ ಎದುರಿಸಿದ್ದರು. ಇದೀಗ ಅವರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.

    ನಟರಾಜ್ ಗೌಡ ಹೇಳಿಕೆ:

    ಅಧ್ಯಯನಕ್ಕೆ ಎಂದು 7 ರಂದು ತೆರಳಿದ್ದೆವು. ಅಧ್ಯಯನ ಎಲ್ಲಾ ಮುಗಿಸಿ ವಾಪಸ್ ನಾಳೆ ಹೋಗಬೇಕು ಎಂದುಕೊಂಡಾಗ ಯುದ್ದ ಪ್ರಾರಂಭವಾಯಿತು. ಯುದ್ದದ ಭೀಕರ ಬಹಳ ಜೋರಾಗಿತ್ತು. ಭಂಕರ್ ನಲ್ಲಿ ಬಿಸ್ಕತ್ತು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿನ ಸರಕಾರ ಸೂಕ್ತ ವ್ಯವಸ್ಥೆ ಮಾಡಿತ್ತು.

    ನಮ್ಮ ಜೊತೆಯಲ್ಲಿ ಅಲ್ಲಿನ ಜನಪ್ರತಿನಿಧಿ ಇದ್ದರು. ರಾತ್ರಿ ಯುದ್ದ ನಡೆದು, ಬೆಳಗ್ಗೆ ಎದ್ದು ನೋಡಿದರೆ ಸ್ಥಳ ಗುರುತು ಸಿಗುತ್ತಿರಲಿಲ್ಲ. ಕೊನೆಗೆ ಸರಕಾರದ ಶ್ರಮದಿಂದ ನಮಗೆ ಯಾವುದೇ ತೊಂದರೆ ಆಗದಂತೆ ವಾಪಸ್ ಆಗಿದ್ದೇವೆ. ವಾಪಸ್ ಬೆಂಗಳೂರಿಗೆ ಬಂದಿದ್ದು ಬಹಳ ಸಂತೋಷವಾಯಿತು ಎಂದರು.

    ಕನ್ನಡತಿ ಮಾಧುರಿ ಹೇಳಿಕೆ:

    ಅಲ್ಲಿ ಅಧ್ಯನ ಮಾಡಲಿಕ್ಕೆ ಹೋಗಿದ್ದು ಬಹಳ ಸಂತೋಷವಾಯಿತು. ನನಗೆ ನೀರಾವರಿಯಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಬಹಳ‌ ಕಲಿಕೆ ಆಯಿತು. ಟ್ರಾಫಿಕ್ ಕುರಿತು ಬಹಳ ಅಧ್ಯಯನ ಮಾಡಲಾಯಿತು. ಇದು ಬೆಂಗಳೂರಿನ‌ ಟ್ರಾಫಿಕ್ ಅಧ್ಯಯನ ಕುರಿತು ಅನುಕೂಲ ಆಗುತ್ತದೆ. ಯುದ್ದದ ಭೀಕರತೆಯಿ‌ಂದ ಸಾಕಷ್ಟು ಭಯವಾಗಿತ್ತು. ನಾವು 15 ನೇ ಮಹಡಿಯಲ್ಲಿದ್ದೆವು. ಸೈರನ್ ಆದಾಗ ಕೆಳ‌ ಮಹಡಿಗೆ ಬರಬೇಕಿತ್ತು. ಇಸ್ರೆಲ್ ಸರಕಾರ ಜನರ ಸಹಾಯಕ್ಕೆ ಸಾಕಷ್ಟು ಶ್ರಮಿಸುತ್ತಿದೆ .

    ಅಲ್ಲಿನ ಜನರನ್ನು ನೋಡಿದರೆ ಸಾಕಷ್ಟು ಹೆಮ್ಮೆಯಾಗುತ್ತದೆ. ಯುದ್ದದ ದಿನಗಳು ನಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣಗಳು. ಯುದ್ದದ ನಾಡಿನಿಂದ ತಾಯ್ನಾಡಿಗೆ ವಾಪಸ್ ಆಗಿದ್ದು ಬಹಳ ಸಂತೋಷವಾಯಿತು ಎಂದರು.

    Demo
    Share. Facebook Twitter LinkedIn Email WhatsApp

    Related Posts

    Breaking News: ಬೆಂಗಳೂರಿನ Pixies Spa ಮೇಲೆ CCB ದಾಳಿ: ವೇಶ್ಯವಾಟಿಕೆ ಶಂಕೆ, ಬಾಂಗ್ಲಾದೇಶದ ಯುವತಿ ಪತ್ತೆ!

    June 19, 2025

    ರಸ್ತೆ ಬದಿಯ ಮರಗಳ ಸುತ್ತ ಹಾಕಲಾದ ಕಾಂಕ್ರೀಟ್, ಕಲ್ಲು ಮತ್ತು ಸಿಮೆಂಟ್ ಬ್ಲಾಕ್ ತೆರವಿಗೆ ಆದೇಶ: ಪ್ರೀತಿ ಗೆಹ್ಲೋಟ್!

    June 19, 2025

    ರಾಹುಲ್ ಗಾಂಧಿ ಜನ್ಮದಿನ: ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಂದ ನೇತ್ರದಾನ!

    June 19, 2025

    ರಾಜ್ಯಾದ್ಯಂತ ಪರಿಸರ ಸ್ನೇಹಿ ಹಾಲಿನ ಪ್ಯಾಕೇಟ್ ಪರಿಚಯಿಸುವ ಚಿಂತನೆ ಇದೆ: ಬಮೂಲ್ ನೂತನ ಅಧ್ಯಕ್ಷ ಡಿ ಕೆ ಸುರೇಶ್ ಹೇಳಿಕೆ !

    June 19, 2025

    Bengaluru Airport: ಲಗೇಜ್ ವಿಚಾರಕ್ಕೆ ವಿಮಾನದಲ್ಲಿ ಮಹಿಳೆಯ ಕಿರಿಕ್..! ವಿಡಿಯೋ ವೈರಲ್

    June 19, 2025

    ರಾಜ್ಯಾದ್ಯಂತ ಪರಿಸರ ಸ್ನೇಹಿ ಹಾಲಿನ ಪ್ಯಾಕೇಟ್ ಪರಿಚಯಿಸುವ ಚಿಂತನೆ ಇದೆ: ಡಿ.ಕೆ. ಸುರೇಶ್

    June 19, 2025

    ನಗರ ಪ್ರದೇಶ ವಸತಿ ಹಂಚಿಕೆಯಲ್ಲಿ ಅಲ್ಪಸಂಖ್ಯಾತರ ಮೀಸಲಾತಿ ಹೆಚ್ಚಳ: ಡಿ.ಕೆ. ಶಿವಕುಮಾರ್

    June 19, 2025

    ಮುಸ್ಲಿಂ ಸಮುದಾಯಕ್ಕೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್..! ಮತ್ತೊಂದು ಯೋಜನೆಯಲ್ಲಿ ಮೀಸಲಾತಿ ಹೆಚ್ಚಳ

    June 19, 2025

    Nandini ತನ್ನ ಕಡೆ ತಪ್ಪು ಇಟ್ಕೊಂಡು Amul ಮೇಲೆ ಆರೋಪ ಮಾಡೋದು ಸರಿ ಅಲ್ಲ: ಭೀಮಾ ನಾಯಕ್

    June 19, 2025

    Gruhalakshmi Scheme: ಗೃಹಲಕ್ಷ್ಮಿ ಹಣ ನಿಮಗೆ ಬಂದಿಲ್ಲವೇ..? ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದೇನು..?

    June 19, 2025

    Chicken Health Care: ಚಿಕನ್ ತಿಂದ್ರೆ ಬರುತ್ತಾ ಕ್ಯಾನ್ಸರ್? ಈ ಬಗ್ಗೆ ವೈದ್ಯರು ಹೇಳೋದೇನು..?

    June 19, 2025

    BREAKING.. ಮರದ ಕೊಂಬೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ನಿಧನ..!

    June 19, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.