ಬೆಂಗಳೂರು:- ಇಸ್ರೇಲ್ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ಸೇಫ್ ಆಗಿ ವಾಪಸ್ ಆಗಿದ್ದಾರೆ. ಇಸ್ರೇಲ್ ಹಾಗೂ ಇರಾನ್ ನಡುವೆ ಸಂಘರ್ಷ ನಡೆಯುತ್ತಿದ್ದು, ಇದರ ಮಧ್ಯೆ ಇಸ್ರೇಲ್ ನಲ್ಲಿ ಸಿಲುಕಿದ್ದ 18 ಕನ್ನಡಿಗರು ತಾಯ್ನಾಡಿಗೆ ಸೇಫ್ ಆಗಿ ವಾಪಸ್ ಆಗಿದ್ದಾರೆ.
ಇಸ್ರೇಲ್ ನಲ್ಲಿ ಸಿಲುಕಿದ್ದ 18 ಕನ್ನಡಿಗರು ಕುವೈತ್ ನಿಂದ ಮುಂಬೈಗೆ ಬಂದು ಅಲ್ಲಿಂದ ಇಂದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇನ್ನು ಇಸ್ರೇಲ್ ನಲ್ಲಿ ಯುದ್ಧದ ವಾತಾವರಣ ಹೇಗಿತ್ತು? ಅಲ್ಲಿನ ಪರಿಸ್ಥಿತಿಯಲ್ಲಿ ಹೇಗಿದ್ದರು ಎನ್ನುವ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಎಸ್, ಅಧ್ಯಯನ ಮಾಡಲು ಇಸ್ರೇಲ್ ಗೆ ತೆರಳಿದ್ದ ಬಿ ಪ್ಯಾಕ್ ತಂಡ ಸುರಕ್ಷೀತವಾಗಿ ತಾಯ್ನಾಡಿಗೆ ವಾಪಸ್ ಆಗಿದೆ. ಇದೇ ತಿಂಗಳ 7 ರಂದು ರಾಜ್ಯದ 18 ಜನರ ತಂಡ ಇಸ್ರೇಲ್ ಗೆ ತೆರಳಿತ್ತು, ಈ ವೇಳೆ ಬಿ ಪ್ಯಾಕ್ ತಂಡದ ಸದಸ್ಯರು ಯುದ್ದದ ಸಂದಿಗ್ಧ ಪರಿಸ್ಥಿತಿ ಎದುರಿಸಿದ್ದರು. ಇದೀಗ ಅವರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.
ನಟರಾಜ್ ಗೌಡ ಹೇಳಿಕೆ:
ಅಧ್ಯಯನಕ್ಕೆ ಎಂದು 7 ರಂದು ತೆರಳಿದ್ದೆವು. ಅಧ್ಯಯನ ಎಲ್ಲಾ ಮುಗಿಸಿ ವಾಪಸ್ ನಾಳೆ ಹೋಗಬೇಕು ಎಂದುಕೊಂಡಾಗ ಯುದ್ದ ಪ್ರಾರಂಭವಾಯಿತು. ಯುದ್ದದ ಭೀಕರ ಬಹಳ ಜೋರಾಗಿತ್ತು. ಭಂಕರ್ ನಲ್ಲಿ ಬಿಸ್ಕತ್ತು, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿನ ಸರಕಾರ ಸೂಕ್ತ ವ್ಯವಸ್ಥೆ ಮಾಡಿತ್ತು.
ನಮ್ಮ ಜೊತೆಯಲ್ಲಿ ಅಲ್ಲಿನ ಜನಪ್ರತಿನಿಧಿ ಇದ್ದರು. ರಾತ್ರಿ ಯುದ್ದ ನಡೆದು, ಬೆಳಗ್ಗೆ ಎದ್ದು ನೋಡಿದರೆ ಸ್ಥಳ ಗುರುತು ಸಿಗುತ್ತಿರಲಿಲ್ಲ. ಕೊನೆಗೆ ಸರಕಾರದ ಶ್ರಮದಿಂದ ನಮಗೆ ಯಾವುದೇ ತೊಂದರೆ ಆಗದಂತೆ ವಾಪಸ್ ಆಗಿದ್ದೇವೆ. ವಾಪಸ್ ಬೆಂಗಳೂರಿಗೆ ಬಂದಿದ್ದು ಬಹಳ ಸಂತೋಷವಾಯಿತು ಎಂದರು.
ಕನ್ನಡತಿ ಮಾಧುರಿ ಹೇಳಿಕೆ:
ಅಲ್ಲಿ ಅಧ್ಯನ ಮಾಡಲಿಕ್ಕೆ ಹೋಗಿದ್ದು ಬಹಳ ಸಂತೋಷವಾಯಿತು. ನನಗೆ ನೀರಾವರಿಯಲ್ಲಿ ಹೆಚ್ಚು ಆಸಕ್ತಿ ಇದ್ದ ಕಾರಣ ಬಹಳ ಕಲಿಕೆ ಆಯಿತು. ಟ್ರಾಫಿಕ್ ಕುರಿತು ಬಹಳ ಅಧ್ಯಯನ ಮಾಡಲಾಯಿತು. ಇದು ಬೆಂಗಳೂರಿನ ಟ್ರಾಫಿಕ್ ಅಧ್ಯಯನ ಕುರಿತು ಅನುಕೂಲ ಆಗುತ್ತದೆ. ಯುದ್ದದ ಭೀಕರತೆಯಿಂದ ಸಾಕಷ್ಟು ಭಯವಾಗಿತ್ತು. ನಾವು 15 ನೇ ಮಹಡಿಯಲ್ಲಿದ್ದೆವು. ಸೈರನ್ ಆದಾಗ ಕೆಳ ಮಹಡಿಗೆ ಬರಬೇಕಿತ್ತು. ಇಸ್ರೆಲ್ ಸರಕಾರ ಜನರ ಸಹಾಯಕ್ಕೆ ಸಾಕಷ್ಟು ಶ್ರಮಿಸುತ್ತಿದೆ .
ಅಲ್ಲಿನ ಜನರನ್ನು ನೋಡಿದರೆ ಸಾಕಷ್ಟು ಹೆಮ್ಮೆಯಾಗುತ್ತದೆ. ಯುದ್ದದ ದಿನಗಳು ನಮ್ಮ ಜೀವನದಲ್ಲಿ ಮರೆಯಲಾಗದ ಕ್ಷಣಗಳು. ಯುದ್ದದ ನಾಡಿನಿಂದ ತಾಯ್ನಾಡಿಗೆ ವಾಪಸ್ ಆಗಿದ್ದು ಬಹಳ ಸಂತೋಷವಾಯಿತು ಎಂದರು.