ದಾವಣಗೆರೆ: ಪ್ರೀತಿಗೆ ಕಣ್ಣಿಲ್ಲ ನಿಜ, ಆದರೆ ಪ್ರೀತಿಸೋರಿಗೆ ಬುದ್ದಿ ಇಲ್ವಾ? ಎಂಬ ಪ್ರಶ್ನೆ ಆಗಾಗ್ಗೆ ಮೂಡುತ್ತಿರುತ್ತದೆ. ಅದರಲ್ಲೂ ಕೆಲ ಪ್ರಕರಣಗಳಲ್ಲಿ ಹೀಗೂ ಇರುತ್ತಾರಾ ಎಂದೆನಿಸಿಬಿಡುತ್ತೆ. ಅಂತಹದೊಂದು ವಿಚಿತ್ರ ಪ್ರಕರಣವೊಂದು ನಮ್ಮ ರಾಜ್ಯದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಅತ್ತೆ ಮತ್ತು ಅಳಿಯನೇ ಪ್ರಮುಖ ಪಾತ್ರಧಾರಿಗಳು.
ಹೌದು ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಅತ್ತೆಯೊಂದಿಗೆ ಅಳಿಯ ಪರಾರಿಯಾಗಿರುವ ಘಟನೆ ನಡೆದಿದೆ. ಮುದ್ದೇನಹಳ್ಳಿಯ ಶಾಂತ (55) ಮತ್ತು ಮರವಂಜಿ ಗ್ರಾಮದ ಗಣೇಶ್ (25) ಇವರಿಬ್ಬರು ಅತ್ತೆ ಮತ್ತು ಅಳಿಯ ಆಗಿದ್ದಾರೆ. ಶಾಂತಾ ಎನ್ನುವವರು ಮುದ್ದೇನಹಳ್ಳಿ ಗ್ರಾಮದ ನಾಗರಾಜ್ ಎಂಬುವರ ಎರಡನೇ ಪತ್ನಿ. 13 ವರ್ಷದ ಹಿಂದೆ ಮುದ್ದೇನಹಳ್ಳಿ ನಾಗರಾಜ್, ಶಾಂತಾಳನ್ನ ಮದ್ವೆಯಾಗಿದ್ದ.
ಡ್ರೈ ಫ್ರೂಟ್ಸ್ ಒಳ್ಳೆಯದು ಆದರೆ ಇಂಥವರು ಯಾವುದೇ ಕಾರಣಕ್ಕೂ ತಿನ್ನಬಾರದು..!
ಇನ್ನು ನಾಗರಾಜ್ ಮೊದಲ ಪತ್ನಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಮಗ. ನಾಗರಾಜ್ ಜೊತೆ ವಾಸವಿದ್ದ ಹಿರಿಯ ಮಗಳು ಹೇಮಾಳನ್ನ, ಎರಡು ತಿಂಗಳ ಹಿಂದೆ ಅಷ್ಟೇ ಮದುವೆ ಮಾಡಿಕೊಟ್ಟಿದ್ದರು. ಆದ್ರೆ, ಇದೀಗ ಹೆಂಡ್ತಿಯನ್ನು ಬಿಟ್ಟು ಆಕೆಯ ತಾಯಿಯೊಂದಿಗೆ ಪರಾರಿಯಾಗಿದ್ದಾನೆ. ಇನ್ನು ಮದುವೆಗೂ ಮುನ್ನ ಎರಡು ವರ್ಷಗಳ ಹಿಂದೆ ಗಣೇಶನನ್ನು ಮನೆಗೆ ಕರೆದುಕೊಂಡು ಬಂದಿದ್ದ ಶಾಂತಾ, ಮಗಳನ್ನು ಮದುವೆ ಮಾಡಿಕೊಡೋಣ ಮನೆ ಅಳಿಯ ಆಗಿ ಇರ್ತಾನೆ ಎಂದು ನಂಬಿಸಿದ್ದರು.
ಅದರಂತೆ ಎರಡು ತಿಂಗಳ ಹಿಂದೆ ಅದ್ದೂರಿಯಾಗಿ ಗಣೇಶನ ಜೊತೆ ಹಿರಿಯ ಮಗಳು ಹೇಮಾಳನ್ನು ಅದ್ಧೂರಿಯಾಗಿ ಮದುವೆ ಮಾಡಲಾಗಿತ್ತು. ಆದ್ರೆ, ಮದುವೆ ಮಾಡಿಕೊಟ್ಟ15 ದಿನಕ್ಕೆ ಗಣೇಶ್ ತನ್ನ ಅತ್ತೆ ಅಂದರೆ ಹೆಂಡ್ತಿಯ(ಹೇಮಾ) ಮಲ ತಾಯಿ ಶಾಂತಾಳೊಂದಿಗೆ ಅಕ್ರಮ ಸಂಬಂಧ ಹೊಂದಿರೋದು ಬೆಳಕಿಗೆ ಬಂದಿದೆ. ಗಣೇಶ್ ಮೊಬೈಲ್ನಲ್ಲಿ ಶಾಂತಾ ಜೊತೆ ಅಶ್ಲೀವಾಗಿ ಮಸೇಜ್ ಮಾಡಿರುವುದನ್ನು ಹೇಮಾ ನೋಡಿದ್ದಾಳೆ.
ತಕ್ಷಣ ಮೆಸೇಜ್ಗಳನ್ನು ತನ್ನ ತಂದೆ ನಾಗರಾಜ್ಗೆ ಹೇಮಾ ಫಾರ್ವರ್ಡ್ ಮಾಡಿದ್ದಾಳೆ. ಗಣೇಶ್ ಹಾಗೂ ಶಾಂತಾಳ ಸರಸ ಕಂಡು ಶಾಕ್ ಆಗಿದ್ದಾರೆ. ಬಳಿಕ ಇವರಿಬ್ಬರ ಬಣ್ಣ ಬಯಲಾಗುತ್ತಿದ್ದಂತೆ ಶಾಂತಾ ಹಣ, ಆಭರಣ ಕದ್ದು ಗಣೇಶ್ ಜೊತೆ ಪರಾರಿಯಾಗಿದ್ದಾಳೆ. ಈ ಬಗ್ಗೆ ಪತಿ ಹಾಗೂ ತಾಯಿ ಹುಡುಕಿಕೊಂಡುವಂತೆ ಮಗಳು ಚನ್ನಗಿರಿ ಪೊಲೀಸರಿಗೆ ದೂರು ನಿಡಿದ್ದು, ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.