Close Menu
Ain Live News
    Facebook X (Twitter) Instagram YouTube
    Thursday, June 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಡಿಜಿಟಲ್ ಅರೆಸ್ಟ್ ಮಾಡಿ ವೃದ್ಧರಿಗೆ ವಂಚನೆ ಪ್ರಕರಣ: ಪೊಲೀಸರಿಗೆ ತಲೆನೋವಾದ ಕೇಸ್, ಪ್ರಮುಖ ಆರೋಪಿಗಾಗಿ ಹುಡುಕಾಟ!

    By AIN AuthorJune 11, 2025
    Share
    Facebook Twitter LinkedIn Pinterest Email
    Demo

    ಬೆಂಗಳೂರು:- ಡಿಜಿಟಲ್ ಅರೆಸ್ಟ್ ಹೆಸರಲ್ಲಿ ವೃದ್ಧ ದಂಪತಿಯಿಂದ ಸೈಬರ್ ಕಳ್ಳರು 4.79 ಕೋಟಿ ರೂ. ಹಣ ವಂಚಿಸಿದ ಪ್ರಕರಣದ ತನಿಖೆ ಪೊಲೀಸರಿಗೆ ತಲೆನೋವಾಗಿದೆ. ಅಷ್ಟಕ್ಕೂ ವೃದ್ಧರಿಗೆ ಡಿಜಿಟಲ್ ಅರೆಸ್ಟ್ ಮಾಡಿದ್ದು ಯಾರು ಎಂಬುವ ಪ್ರಶ್ನೆ ಇದೀಗ ಉದ್ಭವಿಸಿದೆ.

    ಜಾಮೀನು ಅರ್ಜಿ ವಜಾ: ಇನ್ನೆರಡು ದಿನಗಳಲ್ಲಿ ಶಾಸಕ ವಿನಯ್ ಕುಲಕರ್ಣಿ ಅರೆಸ್ಟ್!?

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರನ್ನು ಅರೆಸ್ಟ್ ಮಾಡಲಾಗಿತ್ತು. ದೂರುದಾರರಿಗೂ ಬಂಧಿತ ಆರೋಪಿಗಳಿಗೂ ಯವುದೇ ನೇರ ಸಂಪರ್ಕವಿಲ್ಲ. ಬಂಧಿತ ಈಶ್ವರ್ ಸಿಂಗ್ ಡ್ರೈವರ್ ಅಕೌಂಟ್ ಗೆ ಹಣ ವರ್ಗಾವಣೆ ಆಗಿತ್ತು.. ಆದರೆ ಈಶ್ವರ್ ಗೆ ಹಣ ಬಂದ ಹಿಂದಿದ್ದರ ಕಹಾನಿಯೇ ಬೇರೆ ಇದೆ.

    ಮಿನಿಸ್ಟರ್ ಸಂಬಂಧಿ ಆಗಿರುವ ಈಶ್ವರ್!

    ಇನ್ನೂ ತೆಲಂಗಾಣ ಕ್ಯಾಬಿನೆಟ್ ಮಿನಿಸ್ಟರ್ ಒಬ್ಬರ ಸಂಬಂಧಿಯಾಗಿರೋ ಈಶ್ವರ್, ಮುಂದೆ ಹೈದರಾಬಾದ್ ನ ಕಾರ್ಪೋರೇಟ್ ಸ್ಥಾನ ಒಂದಕ್ಕೆ ಪ್ರಯತ್ನಿಸುತ್ತಿದ್ದ. ಆದರೆ ಕೆಸಿನೋ ಆಡಿ ಲಕ್ಷಗಟ್ಟಲೆ ಕಳೆದುಕೊಂಡಿದ್ದ. ಮಿನಿಸ್ಟರ್ ಕೂಡ ಒಮ್ಮೆ ಕರೆದು ಈಶ್ವರ್ ಗೆ ಬುದ್ದಿವಾದ ಹೇಳಿದ್ದರಂತೆ. ಅದರಂತೆ 3 ವರ್ಷದಲ್ಲಿ 33 ಬಾರಿ ಶ್ರೀಲಂಕಾ ಪ್ರವಾಸ ಮಾಡಿದ್ದ. ಕೆಸಿನೋ ಆಟಕ್ಕೆ ಅಡಿಕ್ಟ್ ಆಗಿದ್ದ.

    ಇತ್ತೀಚೆಗೆ 25 ಲಕ್ಷ ಹಣ ತೆಗೆದುಕೊಂಡು ಕೆಸಿನೋ ಆಟಕ್ಕೆ ಹೋಗಿದ್ದ. ಶ್ರೀಲಂಕಾದ ಮಾಜಿ ಪ್ರೆಸಿಡೆಂಟ್ ಸಂಬಂಧಿಕರೊಬ್ಬರ ಕೆಸಿನೋಗೆ ಭೇಟಿ ನೀಡಿದ್ದರು. ಈ ವೇಳೆ 15 ಲಕ್ಷ ಹಣವನ್ನು ಆರೋಪಿ ಈಶ್ವರ್ ಸಿಂಗ್ ಕಳೆದುಕೊಂಡಿದ್ದ. ಹಣ ಲಾಸ್ ಆಗಿದ್ದರಿಂದ 10ಲಕ್ಷ ಹಣ ವಾಪಾಸ್ ಕೇಳಿದ್ದ. ಹಣ ಟ್ರಾನ್ಸ್ ಫರ್ ಮಾಡಲು ತನ್ನ ಡ್ರೈವರ್ ಅಕೌಂಟ್ ನೀಡಿದ್ದ. ಕೆಸಿನೋದವರು ನಿಮ್ಮ ಹಣ ಟ್ರಾನ್ಸ್ ಫರ್ ಮಾಡೋದಾಗಿ ತಿಳಿಸಿದ್ದರು. ಈಶ್ವರ್ ನೀಡಿದ್ದ ಅಕೌಂಟ್ ಗೆ ಮಂಜುನಾಥ್ ಖಾತೆಯಿಂದ ಹಣ ಟ್ರಾನ್ಸ್ ಫರ್ ಆಗಿದೆ.

    ಮಂಜುನಾಥ್ ಡಿಜಿಟಲ್ ಅರೆಸ್ಟ್ ಆಗಿರೋದು ತಿಳಿದು ಬಂದಿದ್ಹೇಗೆ?

    ಇನ್ನೂ ಪೊಲೀಸ್ ಭೇಟಿ ತನಕ ದೂರುದಾರರಿಗೆ ಮೋಸ ಹೋಗಿರೋದು ತಿಳಿದಿರಲಿಲ್ಲ. ಚೆನ್ನೈ ಪೊಲೀಸರಿಂದ ಬೆಂಗಳೂರು ಪೊಲೀಸರಿಗೆ ಮಾಹಿತಿ ಬಂದಿತ್ತು. ಚೆನ್ಲೈ ನಲ್ಲಿ ವಿಕ್ಟಿಮ್ ಒಬ್ಬರು ಸುಮಾರು 56 ಲಕ್ಷ ಹಣ ಕಳೆದುಕೊಂಡಿದ್ದರು. ಚೆನ್ನೈ ವ್ಯಕ್ತಿ ಮತ್ತು ಮಂಜುನಾಥ್ ಇಬ್ಬರಿಂದಲೂ ಕೆಲ ಅಕೌಂಟ್ ಗೆ ಹಣ ಟ್ರಾನ್ಸ್ ಫರ್ ಆಗಿತ್ತು. ಈ ಹಿನ್ನೆಲೆ ಬೆಂಗಳೂರು ಪೊಲೀಸರಿಗೆ ಚೆನ್ನೈ ಪೊಲೀಸರು ಮಾಹಿತಿ ನೀಡಿದ್ದರು.ಚೆನ್ನೈ ಪೊಲೀಸರ ಮಾಹಿತಿ ಮೇಲೆ ಆಗ್ನೇಯ ಪೊಲೀಸರು ಅಪಾರ್ಟ್ಮೆಂಟ್ ತೆರಳಿದ್ದರು. ಈ ವೇಳೆ ಮಂಜುನಾಥ್ ಬಳಿ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಗಿತ್ತು. ಆಗ್ನೇಯ ವಿಭಾಗ ಪೊಲೀಸರಿಂದ ತನಿಖೆ ಮುಂದುವರೆದಿದ್ದು, ಪ್ರಮುಖ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ

    ಇನ್ನು ಬಂಧಿತ ಆರೋಪಿಗಳಲ್ಲೂ ಒಬ್ಬರಿಗೊಬ್ಬರು ಪರಿಚಯವಿಲ್ಲ. ನಾರಾಯಣ್ ಚೌಧರಿಗೆ ಅಪರಿಚಿತ ವ್ಯಕ್ತಿ ಭೇಟಿ ಮಾಡಿದ್ದರು. ನಿಮ್ಮ ಅಕೌಂಟ್ ಗೆ ಹಣ ಬರುತ್ತೆ ಅದನ್ನ ನಮಗೆ ಟ್ರಾನ್ಸ್ ಫರ್ ಮಾಡಿದ್ರೆ ಕಮೀಷನ್ ಕೊಡುವುದಾಗಿ ಹೇಳಿದ್ದರು. ಈ ಹಿನ್ನೆಲೆ ನಾರಾಯಣ ಚೌಧರಿ ಹಣ ಟ್ರಾನ್ಸ್ ಫರ್ ಮಾಡಿಕೊಂಡಿದ್ದ. ಹೈದರಾಬಾದ್ ನಲ್ಲಿ ಬ್ಯುಸಿನೆಸ್ ಮ್ಯಾನ್ ಆಗಿರೋ ನಾರಾಯಣ್, ಸದ್ಯ ನಾರಾಯಣ್ ಚೌಧರಿ ಮತ್ತು ಈಶ್ವರ್ ಸಿಂಗ್ ಇಬ್ಬರು ಬಂಧಿತರಾಗಿದ್ದು, ತನಿಖೆ ಮುಂದುವರೆದಿದೆ.

    ಘಟನೆ ವಿವರ:

    ವೃದ್ಧ ದಂಪತಿಗೆ ಡಿಜಿಟಲ್ ಅರೆಸ್ಟ್ ಮೂಲಕ ವಂಚಿಸಿದ್ದ ಇಬ್ಬರು ಆರೋಪಿಗಳನ್ನು ಬೆಂಗಳೂರು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದರು. ನಾರಾಯಣ್ ಸಿಂಗ್ ಚೌಧರಿ ಹಾಗೂ ಈಶ್ವರ್ ಸಿಂಗ್ ಬಂಧಿತ ಆರೋಪಿಗಳು. ಮಂಜುನಾಥ್ ಎಂಬುವರು ನೀಡಿದ ದೂರಿನನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

    Demo
    Share. Facebook Twitter LinkedIn Email WhatsApp

    Related Posts

    BBMP ಅಧಿಕಾರಿಗಳ ನಿರ್ಲಕ್ಷ್ಯ: ಸಾವು ಬದುಕಿನ ಹೋರಾಟದಲ್ಲಿ ಯುವಕ- ಅಂತದ್ದೇನಾಯ್ತು?

    June 12, 2025

    ಕಾರು ಪಾರ್ಕಿಂಗ್ ವಿಚಾರಕ್ಕೆ ಗಲಾಟೆ: ಪ್ರಶ್ನಿಸಿದ ವೈದ್ಯೆಗೆ ಅವಾಚ್ಯ ಶಬ್ದಗಳಿಂದ ನಿಂದನೆ!

    June 12, 2025

    ಕರ್ನಾಟಕದಲ್ಲಿ ನಾಳೆಯಿಂದ ಜೋರು ಮಳೆ ಸಾಧ್ಯತೆ: ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ!

    June 12, 2025

    ಕರ್ತವ್ಯ ನಿರತ ಮಹಿಳಾ ಕಾನ್ಸ್ ಟೇಬಲ್ ಗೆ ಬೂಟ್ ಕಾಲಿಂದ ಒದ್ದ ಆರೋಪ: ಹೆಡ್ ಕಾನ್‌ಸ್ಟೇಬಲ್ ವಿರುದ್ಧ ಕೇಸ್ ದಾಖಲು!

    June 12, 2025

    ಕರುನಾಡಿಗೆ ಕೊರೊನಾ ಆತಂಕ: ಮೃತರ ಅಂಕಿ-ಸಂಖ್ಯೆಗಳ ಮಾಹಿತಿ ಪಡೆದ ಸಿದ್ದರಾಮಯ್ಯ – ಸಭೆಯಲ್ಲಿ ಏನೆಲ್ಲಾ ಚರ್ಚೆ ನಡೀತು!?

    June 11, 2025

    ಸರ್ಕಾರಿ ಶಾಲೆಗಳತ್ತ ಒಲವು: ಮಕ್ಕಳ ದಾಖಲಾತಿ ಹೆಚ್ಚಳ.. ಖಾಸಗಿ ಶಾಲೆಗಳಿಗೆ ಗುಡ್​ ಬೈ!

    June 11, 2025

    ರಾಜ್ಯದಲ್ಲಿ ಕೋವಿಡ್ ಕಾರಣದಿಂದಾಗಿ ಯಾವುದೇ ಸಾವುಗಳಾಗಿಲ್ಲ – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ

    June 11, 2025

    Rain News: ಕರ್ನಾಟಕದ ಈ ಜಿಲ್ಲೆಗಳಲ್ಲಿ ಮುಂದಿನ 5 ದಿನ ಭಾರೀ ಮಳೆ!

    June 11, 2025

    Heart Attack: ಹೃದಯಾಘಾತದಿಂದ 19 ವರ್ಷದ ಯುವಕ ಸಾವು!

    June 11, 2025

    ಕಾಂಗ್ರೆಸ್ ನಾಯಕರ ಮನೆ ಮೇಲೆ ED ರೇಡ್: ಬಿ.ಕೆ ಹರಿಪ್ರಸಾದ್ ಹೇಳಿದ್ದೇನು..?

    June 11, 2025

    ಭೀಕರ ಅಪಘಾತ: ಸಿಮೆಂಟ್ ಮಿಕ್ಸರ್ ಲಾರಿ ಹರಿದು ಮಹಿಳೆ ಸ್ಥಳದಲ್ಲೇ..!

    June 11, 2025

    RCB ಖರೀದಿ ಮಾಡ್ತಾರಾ ಡಿಕೆ ಶಿವಕುಮಾರ್? DCM ಉತ್ತರ ಕೇಳಿದ್ರೆ ಶಾಕ್ ಆಗ್ತೀರಾ!

    June 11, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.