Close Menu
Ain Live News
    Facebook X (Twitter) Instagram YouTube
    Saturday, June 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Uses Of Ginger: ಶುಂಠಿ ಚಹಾ ಕುಡಿಯೋದರ ಪ್ರಯೋಜನ ತಿಳಿದ್ರೆ ಶಾಕ್ ಆಗ್ತೀರಾ..!?

    By AIN AuthorNovember 6, 2023
    Share
    Facebook Twitter LinkedIn Pinterest Email
    Demo

    ಹಿಂದಿನ ಕಾಲದಿಂದಲೂ ಭಾರತೀಯ ಅಡುಗೆಗಳಲ್ಲಿ ಅಷ್ಟೇ ಏಕೆ ಇಡೀ ವಿಶ್ವದ ತುಂಬೆಲ್ಲಾ ಅಡುಗೆಗಳಲ್ಲಿ ಒಗ್ಗರಣೆಯ ಜೊತೆಗೆ ತನ್ನ ಸ್ನೇಹಿತ ಬೆಳ್ಳುಳ್ಳಿಯ ಜೊತೆಗೆ ರುಚಿಯ ಸಾಮ್ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಭಾರತದ ಏಕೈಕ ತರಕಾರಿ ಈ ಶುಂಠಿ. ಸಾಮಾನ್ಯವಾಗಿ ನಮ್ಮ ಮನೆಯಲ್ಲಿರುವ ಹಿರಿಯರು ಈಗಲೂ ಸಹ ತಲೆನೋವು ಬಂದರೆ ಶುಂಠಿ ಚಹಾ ಕೇಳುವುದು ರೂಢಿಯಲ್ಲಿದೆ.

    ಇದಕ್ಕೆ ಕಾರಣ ಶುಂಠಿಯಲ್ಲಿರುವ ಅದ್ಭುತ ಮತ್ತು ಚಮತ್ಕಾರಿ ಗುಣಲಕ್ಷಣಗಳು. ಮನುಷ್ಯ ಶುಂಠಿಯನ್ನು ಎಷ್ಟರ ಮಟ್ಟಿಗೆ ಹಚ್ಚಿಕೊಂಡಿದ್ದಾನೆ ಎಂದರೆ ಇಂದಿಗೂ ಸಹ ಬೆಳಗಿನ ಸಮಯದಲ್ಲಿ ಪತ್ರಿಕೆಗಳನ್ನು ತಿರುವಿ ಹಾಕುವ ಮೊದಲು ಶುಂಠಿ ಚಹಾ ಕುಡಿದರೆ ಮಾತ್ರ ಅಂದಿನ ಎಲ್ಲಾ ಕೆಲಸಗಳು ಸರಾಗವಾಗಿ ನಡೆಯುತ್ತವೆ ಎಂಬ ನಂಬಿಕೆ ಹೊಂದಿರುವಷ್ಟು.ಅಂತಹವರಿಗೆ ಈಗಲೂ ಶುಂಠಿ ಚಹಾ ಕೂಡಿಯೇ ಹೋದರೆ ಏನನ್ನೂ ಕಳೆದುಕೊಂಡ ಭಾವನೆ.

    ಶುಂಠಿ ಟೀ ತನ್ನ ಘಮಗುಡುವ ಪರಿಮಳದೊಂದಿಗೆ ಕುಡಿಯಲು ಸಹ ನಾಲಿಗೆಗೆ ರುಚಿ ಕೊಡುತ್ತದೆ. ಇನ್ನು ಆರೋಗ್ಯದ ವಿಷಯಕ್ಕೆ ಸಂಬಂಧ ಪಟ್ಟರಂತೂ, ಇದರಲ್ಲಿ ಬಹಳಷ್ಟು ಖನಿಜಾಂಶಗಳು ಸೇರಿರುವುದರಿಂದ ಬೆಳಗಿನ ಸಮಯದಲ್ಲಿ ಅದರಲ್ಲೂ ಖಾಲಿಹೊಟ್ಟೆಯಲ್ಲಿ ಶುಂಠಿ ಚಹಾ ಕುಡಿದರೆ ಬಹಳ ಬೇಗನೆ ಈ ಖನಿಜಾಂಶಗಳು ನಿಮ್ಮ ದೇಹಕ್ಕೆ ಹೀರಿಕೊಂಡು ದೇಹಕ್ಕೆ ಅಗತ್ಯವಿರುವ ತಮ್ಮ ಕೆಲಸಗಳನ್ನು ಪ್ರಾರಂಭ ಮಾಡುತ್ತವೆ.

    ಶುಂಠಿ ಚಹಾದಲ್ಲಿ ವಿಟಮಿನ್ ‘ ಸಿ ‘, ಪೊಟ್ಯಾಶಿಯಂ, ಮೆಗ್ನೀಷಿಯಂ ಮತ್ತು ಕಬ್ಬಿಣದ ಅಂಶ ಇದೆ. ಶುಂಠಿ ಚಹಾ ಕುಡಿಯುವುದರಿಂದ ಮನುಷ್ಯನ ದೇಹಕ್ಕೆ ಈ ಎಲ್ಲಾ ಅಂಶಗಳು ಸೇರಿ ಅನೇಕ ರೀತಿಯ ಆರೋಗ್ಯ ಪೂರಕವಾದ ಲಾಭಗಳು ಲಭಿಸುತ್ತವೆ. ಅವುಗಳು ಯಾವುವೆಂದು ವಿವರಣಾತ್ಮಕವಾಗಿ ಒಂದೊಂದಾಗಿ ನೋಡೋಣ.

    ಶುಂಠಿ ಚಹಾ ದೇಹದ ತೂಕ ತಗ್ಗಿಸುವ ಪಾನೀಯ
    ಇತ್ತೀಚಿನ ದಿನಗಳಲ್ಲಿ ಮನುಷ್ಯನ ಬದಲಾದ ಜಡ ರೀತಿಯ ಜೀವನ ಶೈಲಿಯಿಂದ ಇನ್ನಿಲ್ಲದ ರೋಗಗಳನ್ನು ತನ್ನಲ್ಲಿ ಆಹ್ವಾನ ಮಾಡಿಕೊಳ್ಳುತ್ತಿದ್ದಾನೆ. ಇದರಲ್ಲಿ ದೇಹದ ಕೊಬ್ಬಿನಂಶ ಹೆಚ್ಚಾಗಿ ಬೇಡದ ಕಡೆಯೆಲ್ಲಾ ಬೊಜ್ಜು ಬೆಳೆದು ದೇಹದ ತೂಕ ಹೆಚ್ಚಾಗುತ್ತಿರುವುದು ಕೇವಲ ಒಂದು ಉದಾಹರಣೆಯಷ್ಟೇ. ಶುಂಠಿ ಚಹಾ ಇದಕ್ಕೊಂದು ಪರಿಹಾರ ಕೊಡುತ್ತದೆ.

    ಉತ್ತಮ ಜೀರ್ಣಕ್ರಿಯೆಗೆ ಶುಂಠಿ ಸಹಕಾರಿ
    ಗ್ಯಾಸ್ಟಿಕ್ ಸಮಸ್ಯೆ ಈಗಿನ ಕಾಲದಲ್ಲಿ ವ್ಯಾಯಾಮ ಮಾಡುವವರನ್ನು ಸಹ ಬಿಟ್ಟಿಲ್ಲ. ತುಂಬಾ ಜನರು ಅಷ್ಟೇ ಏಕೆ ನಾವೇ ಒಮ್ಮೊಮ್ಮೆ ಹೇಳುತ್ತಿರುತ್ತೇವೆ, ” ಬೆಳಗ್ಗೆ ತಿಂದ ಆಹಾರ ಜೀರ್ಣವೇ ಆಗಿಲ್ಲ. ಎದೆಯಲ್ಲೇ ಒತ್ತಿದಂತೆ ಆಗುತ್ತಿದೆ, ಸದ್ಯಕ್ಕೆ ಯಾವ ಆಹಾರವೂ ಬೇಡ ” ಎಂದು. ಇದಕ್ಕೆ ಕಾರಣ ದೇಹದ ಅಜೀರ್ಣತೆ. ಸರಿಯಾದ ರೀತಿಯಲ್ಲಿ ಆಹಾರ ಜೀರ್ಣವಾಗಿ ಅದರಲ್ಲಿರುವ ಪೋಷಕಾಂಶಗಳು ಹೀರಿಕೊಳ್ಳದೇ ಹೋದಾಗ ಇಂತಹ ಸಮಸ್ಯೆ ಎದುರಾಗುತ್ತದೆ. ಆದರೆ ಪ್ರತಿ ದಿನ ಬೆಳಗಿನ ಸಮಯದಲ್ಲಿ ಖಾಲಿಹೊಟ್ಟೆಯಲ್ಲಿ ಅಥವಾ ಮಧ್ಯಾಹ್ನದ ಸಮಯದಲ್ಲಿ ಶುಂಠಿ ಚಹಾವನ್ನು ಸೇವಿಸುವುದರಿಂದ ನೀವು ಈಗಾಗಲೇ ತಿಂದಿರುವ ಆಹಾರ ಮತ್ತು ತಿನ್ನಲು ಬಯಸುವ ಆಹಾರ ಎರಡನ್ನೂ ಸಹ ಚೆನ್ನಾಗಿ ಜೀರ್ಣ ಆಗುವಂತೆ ಮಾಡಿ ಹೊಟ್ಟೆಯ ಉಬ್ಬರ ಉಂಟಾಗದಂತೆ ನೋಡಿಕೊಳ್ಳುತ್ತದೆ. ಜೊತೆಗೆ ನೀವು ಸೇವಿಸಿದ ಆಹಾರದಲ್ಲಿ ಸೇರಿರುವ ವಿವಿಧ ಬಗೆಯ ಪೌಷ್ಟಿಕಾಂಶಗಳನ್ನು ದೇಹ ಹೀರಿಕೊಳ್ಳುವಂತೆ ಮಾಡುತ್ತದೆ.

    ನಮ್ಮ ದೇಹದ ರೋಗ ನಿರೋಧಕ ಶಕ್ತಿಗೆ ಪುಷ್ಟಿ ನೀಡುತ್ತದೆ ಈ ಶುಂಠಿ ಚಹಾ
    ಹೌದು. ಶುಂಠಿ ಚಹಾದಲ್ಲಿ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುವ ಅದ್ಭುತ ಗುಣ ಲಕ್ಷಣಗಳಿವೆ. ಅಂದರೆ ಶುಂಠಿಯಲ್ಲಿ ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳಾದ ವಿಟಮಿನ್ ‘ ಸಿ ‘ ಮತ್ತು ಆಂಟಿ – ಆಕ್ಸಿಡೆಂಟ್ ಗಳು ಅಡಗಿವೆ. ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿ ಬಲಗೊಂಡಷ್ಟೂ ತನಗೆ ಎದುರಾಗುವ ಅನೇಕ ರೀತಿಯ ಕಾಯಿಲೆಗಳ ವಿರುದ್ಧ ಹೋರಾಡುವ ಶಕ್ತಿ ಮನುಷ್ಯನಿಗೆ ಲಭ್ಯವಾಗುತ್ತದೆ. ಜೊತೆಗೆ ಯಾವುದೇ ರೀತಿಯ ಸೋಂಕುಗಳು ತಗುಲದಂತೆ ನೋಡಿಕೊಳ್ಳುತ್ತದೆ. ಇದಕ್ಕೆ ಕಾರಣ ಶುಂಠಿಯಲ್ಲಿರುವ ವಿಶೇಷ ರೀತಿಯ ಆಂಟಿ – ಆಕ್ಸಿಡೆಂಟ್ ಗಳು.

    ಉರಿಯೂತವನ್ನು ಶಮನ ಮಾಡುವ ಶಕ್ತಿಯನ್ನು ಶುಂಠಿ ಹೊಂದಿದೆ
    ಶುಂಠಿಯಲ್ಲಿ ಉರಿಯೂತವನ್ನು ನಿವಾರಣೆ ಮಾಡುವ ಗುಣ ಲಕ್ಷಣಗಳಿವೆ. ನಿಮಗೆ ಪೆಟ್ಟಾದಂತಹ ಸಂದರ್ಭದಲ್ಲಿ ಎದುರಾಗುವ ನೋವು, ಉರಿಯೂತ ಮತ್ತು ಸೆಳೆತದಂತಹ ಸಮಸ್ಯೆಗಳಿಗೆ ಶುಂಠಿ ರಾಮಬಾಣವಾಗಿ ಕೆಲಸ ಮಾಡುತ್ತದೆ. ಅದರಲ್ಲೂ ಮೂಳೆಗಳ ಸಮಸ್ಯೆಯಾದ ಆರ್ಥ್ರೈಟಿಸ್ ನಿಂದ ಬಳಲುತ್ತಿರುವ ರೋಗಿಗಳಿಗೆ ಶುಂಠಿ ಬಹಳ ಉಪಕಾರಿ. ಇದರಲ್ಲಿರುವ ಆಂಟಿ – ಇನ್ಫಾಮೇಟರಿ ಗುಣ ಲಕ್ಷಣಗಳು ಅನೇಕ ರೀತಿಯ ಮಾಂಸಖಂಡಗಳ ಮತ್ತು ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡಿ ಮನುಷ್ಯನಿಗೆ ಹಿತವಾದ ಮತ್ತು ವಿಶ್ರಾಂತಿದಾಯಕವಾದ ಅನುಭವವನ್ನು ಉಂಟುಮಾಡುತ್ತದೆ. ಶುಂಠಿ ಚಹಾ ಕುಡಿಯುವುದರ ಜೊತೆಗೆ ಶುಂಠಿ ರಸವನ್ನು ನಿಮ್ಮ ಊದಿ ಕೊಂಡಿರುವ ಕೀಲುಗಳ ಜಾಗದಲ್ಲಿ ಹಚ್ಚಿದ್ದೇ ಆದರೆ ಬಹಳ ಬೇಗ ಪ್ರತಿಫಲ ಕಾಣಬಹುದು.

    ವಾಕರಿಕೆ ಮತ್ತು ವಾಂತಿಗೆ ಚಿಕಿತ್ಸೆ ಕೊಡುವ ಫ್ಯಾಮಿಲಿ ಡಾಕ್ಟರ್ ಈ ಶುಂಠಿ
    ಇದು ಕೆಲವರು ಬೆಳಗಿನ ಸಮಯದಲ್ಲಿ ಸಹಜವಾಗಿಯೇ ಎದುರಿಸುವ ಸಮಸ್ಯೆ. ಖಾಲಿ ಹೊಟ್ಟೆಯಲ್ಲಿ ಇದ್ದರೂ ಸಹ ಇದ್ದಕ್ಕಿದ್ದಂತೆ ವಾಕರಿಕೆ ಬಂದು ವಾಂತಿಯಾಗುವ ರೀತಿ ಪ್ರತಿ ದಿನ ಈ ಸಮಸ್ಯೆ ಕಾಡುತ್ತಿರುತ್ತದೆ. ಯಾವುದೇ ಔಷಧಿಗಳು ಸಹ ತಾತ್ಕಾಲಿಕವಾಗಿ ಪರಿಹಾರ ಕೊಟ್ಟರೂ ಮರು ದಿನ ಮತ್ತೆ ಅದೇ ರಾಗ ಅದೇ ಹಾಡು ಎಂಬಂತೆ ಆಗಿರುತ್ತದೆ. ಅದರಲ್ಲೂ ಗರ್ಭಿಣಿ ಮಹಿಳೆಯರು ಹೆಚ್ಚಾಗಿ ಈ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾರೆ. ಅವರಿಗೆ ಶುಂಠಿ ಚಹಾದಿಂದ ಬಹಳ ಉಪಯೋಗವಿದೆ. ಇನ್ನೂ ಕೆಲವರಿಗೆ ಯಾವುದಾದರೂ ದೂರ ಪ್ರಯಾಣ ಮಾಡಿದರೆ ವಾಂತಿ ಕಟ್ಟಿಟ್ಟ ಬುತ್ತಿ. ಅಂತಹವರೂ ಕೂಡ ಪ್ರಯಾಣ ಮಾಡುವ ಸಂದರ್ಭದಲ್ಲಿ 1 ಕಪ್ ಶುಂಠಿ ಚಹಾ ಕುಡಿದು ಹೊರಟರೆ ಮಾರ್ಗ ಮಧ್ಯದಲ್ಲಿ ವಾಂತಿಯಾಗುವ ಮತ್ತು ವಾಕರಿಕೆ ಬರುವ ಯಾವುದೇ ಲಕ್ಷಣಗಳು ಇರುವುದಿಲ್ಲ.

    ಹೊಟ್ಟೆಯ ಕಾರ್ಯ ಚಟುವಟಿಕೆಯನ್ನು ಶುಂಠಿ ಚಹಾ ಉತ್ತಮಗೊಳಿಸುತ್ತದೆ
    ಮೊದಲೇ ಹೇಳಿದಂತೆ ಮನುಷ್ಯನ ಜೀರ್ಣ ಕ್ರಿಯೆ ನೇರವಾಗಿ ಹೊಟ್ಟೆಗೆ ಸಂಬಂಧ ಪಟ್ಟಿರುವುದರಿಂದ ಶುಂಠಿ ಚಹಾ ಕುಡಿಯುವುದರಿಂದ ದೇಹದ ಜೀರ್ಣ ಕ್ರಿಯೆ ಉತ್ತಮಗೊಂಡು ಸೇವಿಸುವ ಆಹಾರಗಳಲ್ಲಿನ ಸತ್ವಗಳನ್ನು ಹೀರಿಕೊಳ್ಳಲು ಸಹಾಯ ಮಾಡಿ, ಯಾವುದೇ ರೀತಿಯ ಅಜೀರ್ಣತೆ, ಹೊಟ್ಟೆಯ ಉಬ್ಬರ, ವಾಂತಿ, ವಾಕರಿಕೆ ಯಂತಹ ಸಮಸ್ಯೆಗಳು ತಲೆದೋರದಂತೆ ನೋಡಿಕೊಳ್ಳುತ್ತದೆ.

    ಉಸಿರಾಟದ ಸಮಸ್ಯೆಗಳಿಗೆ ಶುಂಠಿ ಚಹಾದಲ್ಲಿದೆ ಉತ್ತಮ ಪರಿಹಾರ
    ಚಳಿಗಾಲ ಬಂತೆಂದರೆ ಹಲವರಿಗೆ ಎದುರಾಗುವ ಸಮಸ್ಯೆಯೆಂದರೆ ಅದು ನೆಗಡಿ, ಕೆಮ್ಮು. ಒಂದು ಸಣ್ಣ ನೆಗಡಿಯಿಂದ ಶುರುವಾಗಿ ಕೊನೆಗೆ ದೇಹದ ಎದೆಯ ಭಾಗದಲ್ಲಿ ಕಫ ಉಂಟಾಗಿ ಉಸಿರಾಡಲು ಕಷ್ಟವಾಗುತ್ತದೆ. ಇದರ ಜೊತೆಗೆ ಕೆಮ್ಮೂ ಪ್ರಾರಂಭಗೊಂಡು ಇಡೀ ರಾತ್ರಿ ನಿದ್ದೆ ಕೊಡುವುದಿಲ್ಲ. ಎಷ್ಟೇ ಕೆಮ್ಮಿದರೂ ಸಹ ಒಳಗಿರುವ ಕಫ ಮಾತ್ರ ಈಚೆ ಬರುವುದಿಲ್ಲ. ಇಂತಹ ಸಮಯದಲ್ಲಿ ಶುಂಠಿ ಚಹಾ ಬೇರೆಲ್ಲಾ ಔಷಧಿಗಳಿಗಿಂತ ಬಹಳ ಚೆನ್ನಾಗಿ ಕೆಲಸ ಮಾಡುತ್ತದೆ. ಸುತ್ತಲಿನ ಪ್ರಕೃತಿಯ ವ್ಯತ್ಯಾಸದಿಂದ ಉಂಟಾದ ಉಸಿರಾಟದ ಇಂತಹ ಯಾವುದೇ ಸಮಸ್ಯೆಗಳನ್ನು ಕ್ಷಣ ಮಾತ್ರದಲ್ಲಿ ನಿವಾರಣೆ ಮಾಡುವ ಶಕ್ತಿ ಶುಂಠಿ ಚಹಾಕ್ಕೆ ಇದೆ.

    ರಕ್ತಸಂಚಾರ ಉತ್ತಮಗೊಳಿಸುತ್ತದೆ
    ಶುಂಠಿಯಲ್ಲಿರುವ ಅನೇಕ ಬಗೆಯ ವಿಟಮಿನ್ ಗಳು, ಖನಿಜಾಂಶಗಳು ಮತ್ತು ಅಮೈನೋ ಆಮ್ಲಗಳು ಮನುಷ್ಯನ ದೇಹದ ರಕ್ತ ಸಂಚಾರವನ್ನು ಉತ್ತಮಗೊಳಿಸಿ ಹೃದಯದ ಕಾರ್ಯ ಕ್ಷಮತೆಯನ್ನು ಹೆಚ್ಚಿಸಿ ಯಾವುದೇ ರೀತಿಯ ಹೃದಯ ರಕ್ತನಾಳದ ಸಮಸ್ಯೆಗಳು ಎದುರಾಗದಂತೆ ನೋಡಿ ಕೊಳ್ಳುತ್ತದೆ. ಹೃದಯದ ಅಪಧಮನಿಗಳಲ್ಲಿ ಕೊಬ್ಬಿನ ಅಂಶ ಸೇರಿಕೊಳ್ಳುವುದನ್ನು ತಪ್ಪಿಸಿ ಹೃದಯ ಸ್ತಂಭನ ಮತ್ತು ಪಾರ್ಶ್ವವಾಯು ಎದುರಾಗುವುದನ್ನು ತಪ್ಪಿಸುತ್ತದೆ.

    ಮುಟ್ಟಿನ ಅಸ್ವಸ್ಥತೆಯನ್ನು ನಿವಾರಿಸುವಲ್ಲಿ ಶುಂಠಿ ಬಹಳ ಸಹಕಾರಿ
    ಮಹಿಳೆಯರು ಸಹಜವಾಗಿ ಎದುರಿಸುವ ಮುಟ್ಟಿನ ಸಮಸ್ಯೆಯನ್ನು ಶುಂಠಿ ನಿವಾರಣೆ ಮಾಡುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ೧ ಕಪ್ ಶುಂಠಿ ಚಹಾದ ಜೊತೆಗೆ ಒಂದು ಚಮಚ ದಷ್ಟು ಜೇನುತುಪ್ಪವನ್ನು ಸೇರಿಸಿ ಕುಡಿಯಬೇಕು ಜೊತೆಗೆ ಬಿಸಿಯಾದ ಶುಂಠಿ ಚಹಾ ದಲ್ಲಿ ಅಥವಾ ಶುಂಠಿ ರಸದಲ್ಲಿ ಒಂದು ಟವಲನ್ನು ಅದ್ದಿ ಅದನ್ನು ಕಿಬ್ಬೊಟ್ಟೆಯ ಭಾಗದಲ್ಲಿ ಇಟ್ಟುಕೊಂಡರೆ ಹೊಟ್ಟೆ ನೋವು ಶಮನವಾಗಿ ಮಾಂಸಖಂಡಗಳು ತನ್ನಿಂತಾನೇ ನೋವಿನಿಂದ ಮುಕ್ತಿ ಪಡೆಯುತ್ತವೆ.

    ಮಾನಸಿಕ ಒತ್ತಡವನ್ನು ಮತ್ತು ಮನಸ್ಸಿನ ದುಗುಡವನ್ನು ದೂರಮಾಡುವ ಅದ್ಭುತ ಶಕ್ತಿ ಶುಂಠಿಗಿದೆ
    ನಿಮ್ಮ ದಿನ ನಿತ್ಯದ ದುಡಿಮೆಯ ಜೀವನದಲ್ಲಿ ನೀವು ಎಷ್ಟೇ ಮಾನಸಿಕವಾಗಿ ಬಳಲಿದ್ದರೂ, ಒತ್ತಡದಿಂದ ಕುಗ್ಗಿದ್ದರೂ ಸಹ 1 ಕಪ್ ಶುಂಠಿ ಚಹಾ ನಿಮ್ಮ ಎಲ್ಲಾ ಮಾನಸಿಕ ಸಮಸ್ಯೆಗಳನ್ನು ಒತ್ತಡಗಳನ್ನು ಮತ್ತು ಮಾನಸಿಕ ಉದ್ವೇಗವನ್ನು ಕಡಿಮೆ ಮಾಡಿ ನಿಮ್ಮನ್ನು ಉತ್ತೇಜಿಸಿ ಮತ್ತೆ ಹೊಸ ಮನುಷ್ಯನಂತೆ ಮಾಡುತ್ತದೆ. ಇದಕ್ಕೆ ಕಾರಣ ಶುಂಠಿಯಲ್ಲಿರುವ ಬಲವಾದ ಘಮಗುಡುವ ಸುವಾಸನೆ ಮತ್ತು ಗುಣವಾಗುವಂತೆ ಮಾಡುವ ಅದ್ಬುತ ಗುಣ ಲಕ್ಷಣಗಳು.

    ಶುಂಠಿ ಚಹಾವನ್ನು ತಯಾರು ಮಾಡುವುದು ಹೇಗೆ?
    ಶುಂಠಿ ಟೀ ಸಿದ್ಧ ಮಾಡಲು ಬೇಕಾಗಿರುವ ಸಾಮಗ್ರಿಗಳು:

    •ಒಂದು ಅಥವಾ ಎರಡು ಕಪ್ಪು ನೀರು.
    •ತೆಳ್ಳಗೆ ಹೆಚ್ಚಿದ ಶುಂಠಿಯ ಸಣ್ಣ ಚೂರುಗಳು.
    •ಸ್ವಲ್ಪ ನಿಂಬೆ ಹಣ್ಣಿನ ರಸ ಅಥವಾ ಒಂದು ಚಮಚ ಜೇನು ತುಪ್ಪ.

    ಶುಂಠಿ ಚಹಾ ತಯಾರು ಮಾಡುವ ವಿಧಾನ:
    *ಮೊದಲಿಗೆ ಸ್ಟೌವ್ ಮೇಲೆ ನೀರು ಕಾಯಲು ಇಡಿ.

    *ನೀರು ಚೆನ್ನಾಗಿ ಕುದಿ ಬಂದ ಮೇಲೆ ಅದಕ್ಕೆ ನೀವು ಮೊದಲೇ ಕತ್ತರಿಸಿ ಇಟ್ಟುಕೊಂಡ ಶುಂಠಿ ಚೂರುಗಳನ್ನು ಹಾಕಿ ಸುಮಾರು 20 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಇದರಿಂದ ಶುಂಠಿಯಲ್ಲಿರುವ ರಸ ನೀರಿಗೆ ಬಿಟ್ಟುಕೊಳ್ಳುತ್ತದೆ.
    *ಈಗ ಸ್ಟವ್ ಆಫ್ ಮಾಡಿ ಶುಂಠಿ ರಸದ ನೀರನ್ನು ನೀವು ಕುಡಿಯುವ ಮಟ್ಟಿಗೆ ಅಂದರೆ ಉಗುರು ಬೆಚ್ಚನೆಯ ರೀತಿ ಆರಲು ಬಿಡಿ.
    *ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸ ಅಥವಾ ಜೇನು ತುಪ್ಪವನ್ನು ಹಾಕಿ.
    *ಇದರ ರುಚಿ ಇನ್ನೂ ಸ್ವಲ್ಪ ಹೆಚ್ಚಿಸಬೇಕೆಂದರೆ ನೀವು ಇದಕ್ಕೆ ಸ್ವಲ್ಪ ಪುದೀನ ಎಲೆಗಳನ್ನು ಬೇಕಾದರೂ ಸೇರಿಸಬಹುದು.

    Demo
    Share. Facebook Twitter LinkedIn Email WhatsApp

    Related Posts

    ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!

    June 14, 2025

    ಮಳೆಗಾಲದಲ್ಲಿ ಹಾವುಗಳು ಮನೆ ಬಳಿ ಸುತ್ತಾಡುತ್ತಾ ಇದೆಯಾ? ಹಾಗಿದ್ರೆ ಈ ಕೆಲಸ ಮಾಡಿ!

    June 13, 2025

    ಕಿಡ್ನಿ ಸ್ಟೋನ್‌ ಕರಗಲು ವೀಳ್ಯದೆಲೆ ರಸಕ್ಕೆ ಇದನ್ನು ಬೆರೆಸಿ ತಿನ್ನಿ.. ಆಮೇಲೆ ನೋಡಿ ಚಮತ್ಕಾರ!

    June 13, 2025

    ನಕ್ಕರೆ ಡಿಂಪಲ್ ಬೀಳುತ್ತಾ!? ಇದು ಅದೃಷ್ಟ ಅಲ್ಲ ಮರ್ರೆ.. ಇದು ಆರೋಗ್ಯ ಸಮಸ್ಯೆ ಅಂತೆ!

    June 13, 2025

    ವಿಮಾನದಲ್ಲಿ ಪ್ರಯಾಣಿಸೋ ಮುನ್ನ ಇದು ತಿಳಿದಿರಲಿ: ಈ ಸೀಟಲ್ಲಿ ಕೂರೋದು ಸೇಫ್!

    June 13, 2025

    ಬಿಳಿ ಕೂದಲು ಕಪ್ಪಾಗಬೇಕಾ!? ದುಬಾರಿ Product ಗೆ ಹೇಳಿ ಟಾಟ… ಜಸ್ಟ್, ಎರಡು ಚಮಚ ಕಾಫಿ ಪುಡಿ ಸಾಕು!

    June 13, 2025

    ತುಂಬಾ ಹತ್ತಿರದಿಂದ ಕೂತು ಟಿವಿ ನೋಡ್ತೀರಾ? ಇದು ಡೇಂಜರ್.. ಈ ಬಗ್ಗೆ ನೀವು ತಿಳಿದುಕೊಳ್ಳಬೇಕು!

    June 13, 2025

    Aloe Vera Juice: ಖಾಲಿ ಹೊಟ್ಟೆಯಲ್ಲಿ ಅಲೋವೆರಾ ಜ್ಯೂಸ್ ಕುಡಿದರೆ ಎಷ್ಟೆಲ್ಲಾ ಲಾಭ ಗೊತ್ತಾ..?

    June 13, 2025

    ತಡವಾಗಿ ಊಟ ಮಾಡುವ ಅಭ್ಯಾಸ ನಿಮಗಿದೆಯಾ? ತಕ್ಷಣ ಬದಲಾಯಿಸಿಕೊಳ್ಳಿ.. ಇಲ್ಲದಿದ್ದರೆ ಈ 5 ಕಾಯಿಲೆಗಳು ಬರೋದು ಗ್ಯಾರಂಟಿ

    June 13, 2025

    ಮೆಡಿಕವರ್ ಆಸ್ಪತ್ರೆ, ಬೆಂಗಳೂರು: ಆರ್ಥೋಪೆಡಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರಕ್ಕೆ ಭವ್ಯ ಉದ್ಘಾಟನೆ

    June 13, 2025

    ನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಎರಡೇ ಎರಡು ‘ನೆನೆಸಿಟ್ಟ ಬಾದಾಮಿ’ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 12, 2025

    ನೀವು ಯಾವಾಗಲೂ ಮೊಬೈಲ್, ಟಿವಿ ಜಾಸ್ತಿ ನೋಡುತ್ತೀರಾ? ಹಾಗಿದ್ರೆ ನಿಮ್ಮ ಲೈಂಗಿಕ ಜೀವನ ಕಷ್ಟ..ಕಷ್ಟ!

    June 12, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.