Close Menu
Ain Live News
    Facebook X (Twitter) Instagram YouTube
    Friday, June 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಚಿಕ್ಕ ವಯಸ್ಸಿನವರಲ್ಲಿ ಹೆಚ್ಚು ಹೃದಯಾಘಾತ: ಕಾರಣ ಇಲ್ಲಿದೆ!

    By AIN AuthorNovember 21, 2023
    Share
    Facebook Twitter LinkedIn Pinterest Email
    Demo

    ಇತ್ತೀಚೆಗೆ ಯುವಕರಲ್ಲಿ ಹೃದಯಘಾತ ಹೆಚ್ಚಾಗುತ್ತಿದೆ ಎನ್ನುವ ಆತಂಕ ಪದೇ ಪದೇ ಕೇಳುತ್ತಿದ್ದೇವೆ. ಆದರೆ, ಬೆಂಗಳೂರು ಹಾಗೂ ಸುತ್ತಮುತ್ತ ಉಂಟಾಗುತ್ತಿರುವ ವಾಯು ಮಾಲಿನ್ಯದಿಂದಲೂ ಹೃದಯಘಾತ ಆಗುತ್ತಿದೆ ಎಂದು ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಆತಂಕ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಹತ್ತಿಬೆಲೆಯ ಆಕ್ಸ್‌ಫರ್ಡ್ ಮೆಡಿಕಲ್ ಕಾಲೇಜಿನ ಆವರಣದಲ್ಲಿ ಆಯೋಜನೆ ಮಾಡಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹೃದಯಘಾತ ಎನ್ನುವುದು ಎಲ್ಲೆಡೆ ಕೇಳಿ ಬರುತ್ತಿರುವ ಆಘಾತಕಾರಿ ವಿಚಾರ. ಆದರೆ, ಹೃದಯಾಘಾತಕ್ಕೆ ವ್ಯಾಕ್ಸಿನ್ ಕಾರಣ ಎನ್ನುವುದು ಸುಳ್ಳು ಎಂದು ಹೇಳಿದ್ದಾರೆ.

    ಶೇ.35ರಷ್ಟು ಹೃದಯಘಾತಗಳು 45 ವರ್ಷದ ಒಳಗಿನವರಲ್ಲಿಯೇ ಆಗುತ್ತಿದೆ ಎನ್ನುವುದು ಆತಂಕಕಾರಿ ಸಂಗತಿ. ಆದರೆ, ಇದು ಇತ್ತೀಚಿನ ದಿನಗಳಲ್ಲಿ ಆಗುತ್ತಿರುವ ಘಟನೆ ಅಲ್ಲ. 15 ವರ್ಷಗಳ ಹಿಂದಿನಿಂದಲೂ ಕೂಡ ಇಂತಹ ಘಟನೆಗಳು ಆಗಾಗ ಆಗುತ್ತಿವೆ. ಪ್ರತಿಷ್ಠಿತರ ಮನೆಯ ಮಕ್ಕಳು ಹೃದಯಾಘಾತಕ್ಕೆ ಒಳಪಡುತ್ತಿರುವುದರಿಂದ ಇದು ಹೆಚ್ಚು ಪ್ರಚಾರಕ್ಕೆ ಬರುತ್ತಿದೆ ಎಂದು ತಿಳಿಸಿದ್ದಾರೆ.

    10 ಲಕ್ಷದಲ್ಲಿ 4 ಜನರಿಗೆ ಹೃದಯಘಾತ

    ಇನ್ನು ಕೋವಿಡ್ ನಂತರ ವ್ಯಾಕ್ಸಿನ್ ತೆಗೆದುಕೊಂಡ 10 ಲಕ್ಷದಲ್ಲಿ 4 ಜನರಿಗೆ ಈ ರೀತಿಯ ಹೃದಯಘಾತ ಆಗಿರಬಹುದು. ಆದರೆ, ಪ್ರತಿದಿನ ಉಂಟಾಗುತ್ತಿರುವ ವಾಯು ಮಾಲಿನ್ಯ ಸ್ವಾಶಕೋಶಕ್ಕೆ ತೊಂದರೆ ನೀಡುತ್ತದೆ. ಜೊತೆಗೆ ಗಾಳಿ ಸೇವಿಸಿದಾಗ ರಕ್ತನಾಳಕ್ಕೆ ಹೋಗಿ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಹೆಚ್ಚಾಗಿದ್ದು ಇದರಿಂದಲೂ ಕೂಡ ಹೃದಯಘಾತ ಹೆಚ್ಚಾಗಿ ಆಗುತ್ತಿದೆ ಎಂದಿದ್ದಾರೆ.

    ವರ್ಷಕ್ಕೊಮ್ಮೆ ಮೆಡಿಕಲ್ ಚೆಕಪ್ ಮಾಡಿಸಿ

    35 ವರ್ಷ ದಾಟಿದ ಪುರುಷರು ಹಾಗೂ 45 ವರ್ಷ ದಾಟಿದ ಮಹಿಳೆಯರು ವಾರ್ಷಿಕವಾಗಿ ಒಂದು ಮೆಡಿಕಲ್ ಚೆಕಪ್ ಮಾಡಿಸಿಕೊಳ್ಳುವುದು ಉತ್ತಮ. ಅತಿ ಹೆಚ್ಚು ಬೆಂಗಳೂರು ಹಾಗೂ ಸುತ್ತಮುತ್ತ ಉಂಟಾಗುತ್ತಿರುವ ವಾಹನದಟ್ಟಣೆ ತಡೆಯುವಲ್ಲಿ ಸರ್ಕಾರ ಕೂಡ ಗಮನ ಹರಿಸಬೇಕು. ಜೊತೆಗೆ ನಮ್ಮ ಆಹಾರ ಪದ್ಧತಿಗಳು ಹಾಗೂ ಒತ್ತಡದ ಜೀವನದಿಂದ ಹೊರಬರದೆ ಇದ್ದರೆ ಆತಂಕ ಇನ್ನಷ್ಟು ಹೆಚ್ಚಾಗಲಿದೆ ಎಂದು ಹೇಳಿದ್ದಾರೆ.

    ಇನ್ನು ಪದವಿ ಪ್ರದಾನ ಸಮಾರಂಭದಲ್ಲಿ ಹೊರ ಹೋಗುತ್ತಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ವೈದ್ಯರಾದವರು ಕೇವಲ ಹಣ ಸಂಪಾದನೆಯ ಕಡೆ ಗಮನ ಹರಿಸದೆ ರೋಗಿಯ ಆರ್ಥಿಕ ಸ್ಥಿತಿ ಅರಿಯಬೇಕು ಎಂದರು.

    Demo
    Share. Facebook Twitter LinkedIn Email WhatsApp

    Related Posts

    ಅನುಭವದ ಮೇರೆಗೆ ಕ್ಯಾನ್ಸರ್ ಪತ್ತೆ: ರೋಗಿಯ ಜೀವ ರಕ್ಷಿಸಿದ ಡಾ. ಕೌಶಿಕ್ ಸುಬ್ರಮಣಿಯನ್

    June 6, 2025

    ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದು ಚಿಕ್ಕ ಪೀಸ್ ಬೆಳ್ಳುಳ್ಳಿ ತಿಂದ್ರೆ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ!?

    June 5, 2025

    ಬಿಳಿ ಕೂದಲಿನ ಸಮಸ್ಯೆಯೇ!? ವಾರದಲ್ಲಿ 2 ಬಾರಿ ಹಚ್ಚಿದರೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತಂತೆ!

    June 5, 2025

    ಮುಖ-ತೋಳುಗಳಲ್ಲಿ ಈ ಲಕ್ಷಣಗಳು ಕಾಣ್ತಿದ್ಯಾ!? ಹಾಗಿದ್ರೆ ಇದು ಲಿವರ್ ಡ್ಯಾಮೇಜ್ ಆಗ್ತಿದೆ ಎಂದರ್ಥ!

    June 5, 2025

    Periods: ಮಹಿಳೆಯರೇ ಗಮನಿಸಿ: ಮುಟ್ಟಿನ ಸಮಯದಲ್ಲಿ ಈ ಆಹಾರಗಳನ್ನ ಸೇವಿಸಬೇಡಿ!

    June 5, 2025

    World Environment Day: ಈ ದಿನದ ಇತಿಹಾಸ, ಮಹತ್ವ ಮತ್ತು ಥೀಮ್ ಏನು? ಇಲ್ಲಿದೆ ಮಾಹಿತಿ

    June 5, 2025

    ನಿತ್ಯ ಮೊಸರಿಗೆ ಈ ಪುಡಿ ಬೆರೆಸಿ ತಿಂದ್ರೆ ವಾರದಲ್ಲೇ ಕರಗುತ್ತೆ ಬೊಜ್ಜು! ನೀವು ಒಮ್ಮೆ ಟ್ರೈ ಮಾಡಿ!

    June 4, 2025

    ನಿತ್ಯ ಬೆಳಿಗ್ಗೆ ಎದ್ದಾಕ್ಷಣ ತಲೆನೋವು ಬರುತ್ತಾ!? ಹಾಗಿದ್ರೆ ಇದು ಈ ಕಾಯಿಲೆಯ ಸಂಕೇತ!

    June 3, 2025

    ಹಾರ್ಟ್ ಅಟ್ಯಾಕ್ ಆಗೋ ಮುನ್ನ ಕಾಣಿಸಿಕೊಳ್ಳುವ ಐದು ಲಕ್ಷಣಗಳಿವು!

    June 3, 2025

    Popcorn: ಪ್ರತಿದಿನ ಮುಸುಕಿನ ಜೋಳ ತಿನ್ನಿ ಸಾಕು ಮಧುಮೇಹ, ಕ್ಯಾನ್ಸರ್ ಹತ್ತಿರನೂ ಬರಲ್ಲ!

    June 3, 2025

    Tuesday Mistake: ಮಂಗಳವಾರ ಏನೇ ಕಷ್ಟ ಬಂದ್ರೂ ಸಹ ಈ ತಪ್ಪುಗಳನ್ನ ಮಾತ್ರ ಮಾಡ್ಬೇಡಿ..!

    June 3, 2025

    SSLC ಫೇಲ್ ಆಯ್ತು ಅಂತ ಮನೆಯಲ್ಲೇ ಕೂತಿದ್ದೀರಾ!? ಇಂದೇ ಶಾಲೆಗೆ ಹೋಗಿ.. ರೂಲ್ಸ್ ಹೀಗಿದೆ!

    June 3, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.