Close Menu
Ain Live News
    Facebook X (Twitter) Instagram YouTube
    Friday, June 6
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Kolar: ನಕಲಿ ದಾಖಲೆಗಳ ಸೃಷ್ಟಿ ಕ್ರಮಕ್ಕೆ ಆದಿಜಾಂಭವ ಸಂಘಟನೆಯಿಂದ ಪ್ರತಿಭಟನೆ

    By AIN AuthorNovember 20, 2023
    Share
    Facebook Twitter LinkedIn Pinterest Email
    Demo

    ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬುವಾರಪಲ್ಲಿ ಗ್ರಾಮದಲ್ಲಿನ ಸುಮಾರು 48 ಎಕರೆಯ ಊರ ಮಾದಿಗ ಇನಾಂತಿ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ದಲಿತರಿಗೆ ಮೋಸ ಮಾಡಿರುವ ಅಧಿಕಾರಿಗಳು ಹಾಗೂ ಪ್ರಭಾವಿ ಮುಖಂಡ ಜಿ.ಆರ್ ಸುರೇಶ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ಆದಿಜಾಂಭವ ಚಾರಿಟಬಲ್ ಟ್ರಸ್ಟ್ ಹಾಗೂ ಸೇವಾ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.

    ಸರಕಾರವು ಸುಮಾರು 75 ವರ್ಷಗಳ ಹಿಂದೆಯೇ ದಲಿತ ಕುಟುಂಬಗಳ ಅಭಿವೃದ್ಧಿಗಾಗಿ ಜಿಲ್ಲೆಯ ನೆಲವಂಕಿ ಹೋಬಳಿಯ ನಂಬುವಾರಪಲ್ಲಿ ಗ್ರಾಮದ ಸರ್ವೆ ನಂ 23, 26, 27, 28 ಹಾಗೂ 39 ರಲ್ಲಿ 48 ಎಕರೆ ಜಮೀನನ್ನು ತಾಲೂಕಿನ ಗ್ರಾಮದಲ್ಲಿ ಇನಾಂತಿ ನೌಕರರಿ ಮಾಡುವ ನಾಲ್ಕು ಕುಟುಂಬಗಳಿಗೆ ಸರಕಾರವೇ ನೀಡಿದ್ದಾರೆ ಈ ಜಾಗದಲ್ಲಿ ಅಂದಿನಿಂದ ವ್ಯವಸಾಯವನ್ನು ಮಾಡಿಕೊಂಡು ಜೀವನ ನಡೆಸುತ್ತಾ ಇದ್ದು ಈ ಜಮೀನಿಗೆ ಪ್ರಭಾವಗಳು ಕಣ್ಣು ಬಿದ್ದಿದ್ದು ದಲಿತರಿಗೆ ಮೋಸ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

    ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗೊರವಿಮಾಕಲಹಳ್ಳಿಯ ಬಲಾಢ್ಯ ಸಮುದಾಯದ ಜಿ.ಆರ್ ಸುರೇಶ್ ಎಂಬುವವರು ಅಧಿಕಾರಿಗಳಿಗೆ ಲಂಚ ನೀಡಿ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಇವತ್ತು ನಮ್ಮಗಳ ಮೇಲೆ ದೌರ್ಜನ್ಯ ಮಾಡಲು ಮುಂದಾಗಿದ್ದಾರೆ ಕೇಳಿದರೆ ಪ್ರಾಣ ತೆಗೆಯುತ್ತೇನೆ ಎಂದು ರಾಜಾರೋಷವಾಗಿ ಬೆದರಿಕೆ ಹಾಕಿದ್ದಾರೆ ಹಣಬಲ ಮತ್ತು ರಾಜಕೀಯ ಬಲದಿಂದ ನಮ್ಮ ಜಮೀನನ್ನು ಕಳಬಳಿಸಲು ಮುಂದಾಗಿದ್ದು ಅವರ ವಿರುದ್ದ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು

    ಈ ಸಂದರ್ಭದಲ್ಲಿ ಮಾದಿಗ ದಂಡೋರ ಜಿಲ್ಲಾ ಅಧ್ಯಕ್ಷ ಹೂಹಳ್ಳಿ ಕೃಷ್ಣಪ್ಪ ಮಾತನಾಡಿ ದಲಿತ ಜಮೀನು ಕಬಳಿಸಲು ಮುಂದಾಗಿರುವ ಜಿ.ಆರ್ ಸುರೇಶ್ ಸೃಷ್ಟಿಸಿರುವ ನಕಲಿ ದಾಖಲೆಗಳನ್ನು ರದ್ದು ಮಾಡಬೇಕು ಜೊತೆಗೆ ಅವರ ವಿರುದ್ದ ಜಾತಿ ನಿಂದನೆ ಕೇಸ್ ದಾಖಲಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಕರಿಸಿದ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಜೊತೆಗೆ ಅ ಜಮೀನನ ನೈಜ ಪಲಾನುಭವಿಗಳಿ ಕುಟುಂಬಗಳಿಗೆ ಊರು ಮಾದಿಗ ಇನಾಂತಿ ಜಮೀನನ್ನು ಮರು ಮಂಜೂರು ಮಾಡಬೇಕು ಜೊತೆಗೆ ಅವರಿಗೆ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಂಕರ್ ವಣಿಕ್ಯಾಳ್ ಮನವಿ ಸ್ವೀಕರಿಸಿ ಕೂಡಲೇ ಸಂಬಂಧಿಸಿದ ಇಲಾಖೆಯ ಗಮನಕ್ಕೆ ತಂದು ಪರಿಶೀಲನೆ ನಡೆಸಿ ನಿಮ್ಮ ಬೇಡಿಕೆ ಈಡೇರಿಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಆದಿಜಾಂಭವ ಸಂಘಟನೆಯ ಮುಖಂಡರಾದ ಡಿ.ಶ್ರೀನಿವಾಸ್, ವೆಂಕಟೇಶ್, ಮಾದಿಗ ದಂಡೋರದ ರಾಜ್ಯ ಗೌರವ ಅಧ್ಯಕ್ಷ ಹಾರೋಹಳ್ಳಿ ಎಂ.ರವಿ, ಚನ್ನಸಂದ್ರ ಮುನಿರಾಜು, ಅಲೇರಿ ಮುನಿರಾಜು, ವೆಂಕಟರಮಣ, ತೂಪಲ್ಲಿ ಬಸವರಾಜ್, ದಿನ್ನೆ ಹೊಸಹಳ್ಳಿ ಅಂಜಿ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಹಾರೋಹಳ್ಳಿ ರವಿ, ಮುನಿಯಪ್ಪ, ಮುಂತಾದವರು ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದರು

    Demo
    Share. Facebook Twitter LinkedIn Email WhatsApp

    Related Posts

    ಸರ್ಕಾರಕ್ಕೆ ಇತಿಮಿತಿ ಇದೆ, ಯಾರಾದ್ರು 25 ಲಕ್ಷ ಪರಿಹಾರ ಕೊಟ್ಟಿರೋ ಉದಾಹರಣೆ ಇದೆಯಾ: ವೆಂಕಟರಮಣಯ್ಯ

    June 6, 2025

    ಕಾಲ್ತುಳಿತ ಪ್ರಕರಣ: ಬಿಜೆಪಿ ವತಿಯಿಂದ ರಸ್ತೆ ತಡೆದು ಪ್ರತಿಭಟನೆ

    June 6, 2025

    ಬಸ್ – ಕಾರಿನ ನಡುವೆ ಭೀಕರ ಅಪಘಾತ: ಚಾಲಕ ಸಾವು – ಇಬ್ಬರಿಗೆ ಗಾಯ

    June 6, 2025

    ಅಮೀನಗಡ “ವಿಜಯಾ ಕರದಂಟು ಈಗ ಹುಬ್ಬಳ್ಳಿಯಲ್ಲಿ

    June 6, 2025

    ಸಂಭ್ರಮಾಚರಣೆ ಘಟನೆ ವೇಳೆ ಅಹಿತಕರ ಘಟನೆಗೆ ಪೊಲೀಸ್ ಅಧಿಕಾರಿಗಳ ಸಸ್ಪೆಂಡ್ ಅಕ್ಷಮ್ಯ ಅಪರಾಧ: ರಾಜು ನಾಯಕವಾಡಿ

    June 6, 2025

    ಅಪ್ರಾಪ್ತೆಗೆ ಅಶ್ಲೀಲ ಮೆಸೇಜ್ ಕಳಿಸಿರುವ ಆರೋಪ: ಮೂವರು ದಲಿತ ಯುವಕರ ಮೇಲೆ ಹಲ್ಲೆ!

    June 6, 2025

    ನಡುರಸ್ತೆಯಲ್ಲೇ ವ್ಯಕ್ತಿಯ ಭೀಕರ ಕೊಲೆ! ಹಳೆ ದ್ವೇಷಕ್ಕೆ ನಡೀತಾ ಮರ್ಡರ್!?

    June 6, 2025

    ಭೀಕರ ಅಪಘಾತ: ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಮೂವರು ಸಾವು!

    June 6, 2025

    ಟಿಪ್ಪರ್ ಗೆ ತಗುಲಿದ ಕರೆಂಟ್ ವೈಯರ್.. ದಿಢೀರ್ ಹೊತ್ತಿಕೊಂಡ ಬೆಂಕಿ: ಚಾಲಕ ಸಾವು!

    June 5, 2025

    ಹುಬ್ಬಳ್ಳಿ: ಅಮೀನಗಡ “ವಿಜಯಾ ಕರದಂಟು” ಮತ್ತು ಸ್ವೀಟ್ ಮಾರ್ಟ್ ಉದ್ಘಾಟನೆ!

    June 5, 2025

    ಪೊಲೀಸ್ ಇಲಾಖೆಗೆ ಕಳಂಕ ತರುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ: ಪ್ರತಾಪ್ ಸಿಂಹ

    June 5, 2025

    RCB Victory Parade Stampede: ಸಿಎಂ, ಡಿಸಿಎಂ ಘಟನೆಯಿಂದ ಬೇಜಾರಾಗಿದ್ದಾರೆ – ಶಾಸಕ ಪ್ರದೀಪ್ ಈಶ್ವರ್

    June 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.