Close Menu
Ain Live News
    Facebook X (Twitter) Instagram YouTube
    Saturday, June 7
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ವಿಶ್ವಕಪ್ ಫೈನಲ್ ಸೋಲಿಗೆ ಈ ಆಟಗಾರನ ಅನುಪಸ್ಥಿಯೇ ಕಾರಣ !?

    By AIN AuthorNovember 21, 2023
    Share
    Facebook Twitter LinkedIn Pinterest Email
    Demo

    ಟೀಮ್ ಇಂಡಿಯಾದಲ್ಲಿ ಒಬ್ಬ ಆಟಗಾರನಿಗೆ ರಿಪ್ಲೇಸ್ ಮಾಡೋಕೆ ಆತನಷ್ಟೇ ಸಾಮರ್ಥ್ಯವಿರುವ ಆಟಗಾರನಿಲ್ಲ. ವಿಶ್ವಕಪ್ ಫೈನಲ್ ಸೋಲಿಗೆ ಆ ಆಟಗಾರರನ ಅನುಪಸ್ಥಿಯೇ ಕಾರಣ.

    ಭಾರತೀಯರ ಕೈಯಿಂದ ಏಕದಿನ ವಿಶ್ವಕಪ್ ಕೈ ಜಾರಿದೆ. ಸತತ 10 ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾ, ಫೈನಲ್ನಲ್ಲಿ ಮುಗ್ಗರಿಸಿತು. ಫೈನಲ್ ಸೋಲಿಗೆ ನಾನಾ ಕಾರಣಗಳಿರಬಹುದು. ಆದ್ರೆ ತಂಡದಲ್ಲಿ ಲೋ ಆರ್ಡರ್ ಬ್ಯಾಟಿಂಗ್ ವೀಕ್ ಆಗಿದ್ದು, 6ನೇ ಬೌಲರ್ ಇಲ್ಲದೆ ಇದ್ದದ್ದು ಸೋಲಿಗೆ ಮೇನ್ ರೀಸನ್. ಆ ಎರಡು ಸ್ಥಾನ ತುಂಬಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂಜುರಿಯಾಗಿ ವಿಶ್ವಕಪ್ನಿಂದ ಕಿಕೌಟ್ ಆಗಿದ್ದು, ಭಾರತಕ್ಕೆ ಹಿನ್ನಡೆಯಾಯ್ತು.

    ಮೊದಲ ನಾಲ್ಕು ಪಂದ್ಯ ಆಡಿದ್ಮೇಲೆ ಪಾಂಡ್ಯ ಇಂಜುರಿಯಾಗಿ ವಿಶ್ವಕಪ್ನಿಂದಲೇ ಕಿಕೌಟ್ ಆದ್ರು. ಆದ್ರೂ 6 ಪಂದ್ಯಗಳಲ್ಲಿ ಅವರ ಅನುಪಸ್ಥಿತಿ ಕಾಡಲಿಲ್ಲ. ಯಾಕಂದ್ರೆ, ಟಾಪ್ ಆರ್ಡರ್ ಬ್ಯಾಟರ್ಸ್ ಉತ್ತಮ ಪ್ರದರ್ಶನ ನೀಡಿದ್ರು. ಐವರು ಬೌಲರ್ಸ್ ಅದ್ಭುತವಾಗಿ ದಾಳಿ ಮಾಡಿದ್ರು. ಆದ್ರೆ ಫೈನಲ್ನಲ್ಲಿ ಯಾವಾಗ ಇಂಡಿಯಾ ಬ್ಯಾಟಿಂಗ್ ಲೈನ್ ಅಪ್ ಕೋಲ್ಯಾಪ್ಸ್ ಆಯ್ತೋ, ಮಿಡಲ್ ಓವರ್ಗಳಲ್ಲಿ ಯಾವಾಗ ವಿಕೆಟ್ಗಳನ್ನ ಪಡೆಯುವಲ್ಲಿ ಸ್ಪಿನ್ನರ್ಸ್ ಎಡವಿದ್ರೂ ಆಗ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ಕಾಡೋಕೆ ಶುರುವಾಯ್ತು.

    ಪಾಂಡ್ಯ ಇದ್ದಿದ್ದರೆ ಲೋ ಆರ್ಡರ್ನಲ್ಲಿ 30-40 ರನ್ ಹೊಡೆಯುತ್ತಿದ್ದರು. ಐದಾರು ಓವರ್ ಬೌಲಿಂಗ್ ಸಹ ಮಾಡುತ್ತಿದ್ದರು. ಇದು ಟೀಂ ಇಂಡಿಯಾಗೆ ನೆರವಾಗುತ್ತಿತ್ತು. ಆದ್ರೆ ಪಾಂಡ್ಯ ಬದಲಿಗೆ ಆಡಿದ್ದ ಸೂರ್ಯಕುಮಾರ್ ಯಾದವ್, ವಿಶ್ವಕಪ್ನಲ್ಲಿ ಆಡಿದಕ್ಕಿಂತ ಪೆವಿಲಿಯನ್ಗೆ ಪರೇಡ್ ನಡೆಸಿದ್ದೇ ಜಾಸ್ತಿ. 7 ಪಂದ್ಯಗಳಲ್ಲಿ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿದ್ದು, ಇಂಗ್ಲೆಂಡ್ ವಿರುದ್ಧ ಮಾತ್ರ 49 ರನ್ ಬಾರಿಸಿದ್ರು. ಉಳಿದಂತೆ ಯಾವ್ದೇ ಮ್ಯಾಚ್ನಲ್ಲೂ ಸೂರ್ಯ ಆಡಲೇ ಇಲ್ಲ.

    ಲೀಗ್, ಸೆಮಿಸ್ನಲ್ಲಿ ಇತರೆ ಬ್ಯಾಟರ್ಸ್ ಆಡಿದ್ದರಿಂದ ಸೂರ್ಯನ ಕಳಪೆ ಆಟ ಮರೆಮಾಚಿತು. ಆದ್ರೆ ಫೈನಲ್ನಲ್ಲಿ ಟಾಪ್ ಆರ್ಡರ್ ಬ್ಯಾಟರ್ಸ್ ವಿಫಲರಾದ್ರು. ಈ ಸಮಯದಲ್ಲಿ ನಿಂತು ಆಡೋದು ಬದಲು 28 ಬಾಲ್ನಲ್ಲಿ 18 ರನ್ ಗಳಿಸಿ ಔಟಾಗಿ ಹೋದ್ರು. 7 ಪಂದ್ಯದಿಂದ ಸೂರ್ಯ ಹೊಡೆದಿರುವುದು ಜಸ್ಟ್ 104 ರನ್. ಒಂದೂ ಅರ್ಧಶತಕವಿಲ್ಲ. ಇಡೀ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪರ ವಿಫಲವಾಗಿರುವ ಏಕೈಕ ಆಟಗಾರ ಅಂದ್ರೆ ಅದು ಸೂರ್ಯ ಮಾತ್ರ.

    ಇನ್ನು ಹಾರ್ದಿಕ್ ಪಾಂಡ್ಯ ಇಂಜುರಿಯಾದ್ರೆ ಆತನಿಗೆ ರಿಪ್ಲೇಸ್ಮೆಂಟೇ ಭಾರತದಲ್ಲೇ ಇಲ್ಲ. ಹೌದು, ಆಲ್ರೌಂಡರ್ಗೆ ಮತ್ತೊಬ್ಬ ಆಲ್ರೌಂಡರ್ನನ್ನ ಆಯ್ಕೆ ಮಾಡಬೇಕಿತ್ತು. ಆದ್ರೆ ಪಾಂಡ್ಯ ಬದಲಿಗೆ ಆಯ್ಕೆಯಾಗಿದ್ದು ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ. ಇನ್ನು ಪಾಂಡ್ಯ ಬದಲಿಗೆ ವಿಶ್ವಕಪ್ನಲ್ಲಿ ಆಡಿದ್ದು, ಬ್ಯಾಟ್ಸ್ಮನ್ ಸೂರ್ಯ. ಅಲ್ಲಿ ಪಾಂಡ್ಯ ಬದಲಿ ಆಡೋಕೆ ಭಾರತದಲ್ಲಿ ಮತ್ತೊಬ್ಬ ವೇಗದ ಬೌಲರ್ ಕಮ್ ಬ್ಯಾಟರ್ ಇಲ್ಲ ಅನ್ನುವಂತಾಯ್ತು. ಜೂನಿಯರ್ ಹಂತದಿಂದಲೇ ಆಲ್ರೌಂಡರ್ಗಳನ್ನ ಹುಟ್ಟು ಹಾಕುವ ಕೆಲಸ ಬಿಸಿಸಿಐ ಮಾಡಬೇಕಿದೆ.

    Demo
    Share. Facebook Twitter LinkedIn Email WhatsApp

    Related Posts

    Glenn Maxwell: ನಿವೃತ್ತಿ ಘೋಷಿಸಿದ ಗ್ಲೆನ್ ಮ್ಯಾಕ್ಸ್ವೆಲ್: ಕೊನೆಗೂ ಕಾರಣ ಬಿಚ್ಚಿಟ್ಟ ಆಸ್ಟ್ರೇಲಿಯಾ ಆಲ್‌ ರೌಂಡರ್!

    June 7, 2025

    Bengaluru Stampede Case: ನೈತಿಕ ಹೊಣೆ ಹೊತ್ತು KSCA ಕಾರ್ಯದರ್ಶಿ, ಖಜಾಂಚಿ ರಾಜೀನಾಮೆ..!

    June 7, 2025

    KL Rahul: ಇಂಗ್ಲೆಂಡ್ ಲಯನ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್..!

    June 7, 2025

    ಚಿನ್ನಸ್ವಾಮಿ ಭೀಕರ ಕಾಲ್ತುಳಿತ ಕೇಸ್: CID ತನಿಖೆ ಇಂದಿನಿಂದ ಶುರು!

    June 7, 2025

    ಕಾಲ್ತುಳಿತ ಕೇಸ್: RCB ವಿಜಯೋತ್ಸವಕ್ಕೆ 19 ಷರತ್ತು ವಿಧಿಸಿದ್ದ ರಾಜ್ಯ ಸರ್ಕಾರ!

    June 7, 2025

    RCB ಖರೀದಿಸಲು ಅದೊಂದೇ ಕಾರಣ.. ಹೊರತು ಕ್ರಿಕೆಟ್ ಮೇಲಿನ ಪ್ರೀತಿಯಿಂದಲ್ಲ: ವಿಜಯ್ ಮಲ್ಯ ಸ್ಪೋಟಕ ಹೇಳಿಕೆ!

    June 6, 2025

    ಆರ್ ಸಿಬಿಗೆ ಮತ್ತೆ ಆಘಾತ: ಬೆಂಗಳೂರಿನಲ್ಲಿ ಮತ್ತೊಂದು FIR ದಾಖಲು!

    June 6, 2025

    ನೂಕು ನುಗ್ಗಲಿಗೆ ಕೊಹ್ಲಿ ಕಾರಣ: ಬೆಂಗಳೂರಿನಲ್ಲಿ ವಿರಾಟ್ ವಿರುದ್ಧ ದೂರು ದಾಖಲು!

    June 6, 2025

    Chinnaswamy Stampede: KSCA ವಿರುದ್ಧ ಬಲವಂತದ ಕ್ರಮ ಬೇಡ – ಬಿಗ್ ರಿಲೀಫ್ ನೀಡಿದ ಹೈಕೋರ್ಟ್!

    June 6, 2025

    ಬೆಂಗಳೂರಿನ ಕಾಲ್ತುಳಿತ ಪ್ರಕರಣ: ಭಾರೀ ಟ್ರೆಂಡಿಂಗ್ ನಲ್ಲಿದೆ #ArrestKohli..!

    June 6, 2025

    RCB Victory Parade Stampede: ನಿಖಿಲ್ ಸೋಸಲೆ ಯಾರು?.. ಅವರಿಗೂ RCBಗೂ ಏನು ಸಂಬಂಧ?

    June 6, 2025

    RCB Stampede: ಬೆಂಗಳೂರಿನ ಕಾಲ್ತುಳಿತ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: RCB ವಿರುದ್ಧ ಪ್ರಕರಣ ದಾಖಲು!

    June 6, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.