Close Menu
Ain Live News
    Facebook X (Twitter) Instagram YouTube
    Tuesday, June 17
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Thimmapura: ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದ ಸಚಿವ ತಿಮ್ಮಾಪುರ

    By AIN AuthorNovember 29, 2023
    Share
    Facebook Twitter LinkedIn Pinterest Email
    Demo

    ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಬರ ಪರಿಸ್ಥಿತಿಯ ಬಗ್ಗೆ ಪ್ರಧಾನಿಯವರಿಗೆ ತಿಳಿಸಲು ನಾಲ್ಕು ಬಾರಿ ಹೋದರೂ ಅವರು ನಮ್ಮ ಮಂತ್ರಿಗಳ ಭೇಟಿಗೆ ಅವಕಾಶ ನೀಡಲಿಲ್ಲ. ನಮ್ಮ ದೇಶದ ಪ್ರಧಾನಿಗಳಿಗೂ ಕೂಡಾ ಕರ್ನಾಟಕವೂ ಭಾರತದಲ್ಲಿ ಇದೆ ಎಂಬ ಭಾವನೆ ಬರಬೇಕಾಗಿದೆ. ಕೇಂದ್ರ ಸರ್ಕಾರ ತನ್ನ ಪಾಲಿನ ಕಾರ್ಯವನ್ನು ತಾನು ಮಾಡಬೇಕಾಗಿದೆ. ನಮ್ಮ ರಾಜ್ಯದ ಅಳಲನ್ನು ತೋಡಿಕೊಳ್ಳಲು ಹೋದ ಮಂತ್ರಿಗಳಿಗೆ ಪ್ರಧಾನಿಯವರು ಭೇಟಿಗೆ ಅವಕಾಶ ನೀಡುತ್ತಿಲ್ಲ.

     ಬಿಜೆಪಿ ನಾಯಕರು ಅಂಕಿ ಸಂಖ್ಯೆಗಳು ಸರಿಯಿಲ್ಲ ಎಂಬ ಸಣ್ಣತನದ ಮಾತುಗಳನ್ನು ಆಡುತ್ತಿದ್ಧಾರೆ ಎಂದು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ವಿರುದ್ಧ ಹರಿ ಹಾಯ್ದರು.ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿ-ಬನಹಟ್ಟಿ ನಗರಸಭೆಯ ಸಭಾ ಭವನದಲ್ಲಿ ಬರ ಪರಿಸ್ಥಿತಿ ಅಧ್ಯಯನದ ಅಧಿಕಾರಿಗಳ ಸಭೆಯ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.ಬಿಜೆಪಿ ಸಂಸದರು ಕೇಂದ್ರದ ಹಣವನ್ನು ತಂದರೆ ಇಲ್ಲಿಯ ಜನರು ಶಬ್ಬಾಶನ್ನು ನೀಡುತ್ತಾರೆ.

    https://ainlivenews.com/wp-content/uploads/2023/11/thim.mp4

    ಇಷ್ಟೊಂದು ಜನರನ್ನುಆಯ್ಕೆ ಮಾಡಿ ಕಳುಹಿಸಿದರೂ ನಮ್ಮ ಸಂಸದರು ಬರ ಪರಿಸ್ಥಿತಿಯ ಬಗ್ಗೆ ಪ್ರಧಾನಿಯವರಿಗೆ ಮನವರಿಕೆ ಮಾಡುತ್ತಿಲ್ಲ. ರಾಜ್ಯದ ರೈತರ ಪರಿಸ್ಥಿತಿಯ ಕುರಿತು ಮೋದಿಯವರ ಹತ್ತಿರ ಮಾತನಾಡುವ ಶಕ್ತಿ ಇಲ್ಲದಂತಾಗಿದೆ. ಇಷ್ಟು ಅಶಕ್ತ ಸಂಸದರನ್ನು ಮತ್ತು ರಾಜ್ಯ ಬಿಜೆಪಿ ನಾಯಕರನ್ನು ನಾನು ಇದುವರೆಗೆ ನೋಡಿಲ್ಲ.೧೨೦ ವರ್ಷಗಳ ಹಿಂದಿನ ಬರಗಾಲ ಪರಿಸ್ಥಿತಿ ಈಗ ಬಂದಿದೆ. ಬರದ ಸಂದರ್ಭದಲ್ಲಿ ರಾಜಕಾರಣದ ಮಾತುಗಳನ್ನು ಆಡುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ. ದೇಶದ ಪ್ರಧಾನಿ ಮಹಾನಗರ ಪಾಲಿಕೆಗಳ ಚುನಾವಣೆಯ ಪ್ರಚಾರಕ್ಕೂ ಹೋಗುತ್ತಿದ್ದಾರೆ. ತಾವು ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಪ್ರಧಾನಿ ಹೇಳುತ್ತಿಲ್ಲ.

     ಕೇವಲ ಕಾಂಗ್ರೆಸ್ ಸರ್ಕಾರವನ್ನು ತೆಗಳುವ ಕೆಲಸ ಮಾಡುತ್ತಿದ್ದಾರೆ. ಹತ್ತು ವರ್ಷದಲ್ಲಿ ತಾವು ಏನು ಮಾಡಿದ್ದೀರಿ ಎಂದು ಸಚಿವ ತಿಮ್ಮಾಪುರ ಪ್ರಶ್ನಿಸಿದರು.ನಮ್ಮ ಪ್ರಧಾನಿಗಳಿಗೆ ಭೀಕರ ಬರಗಾಲದಲ್ಲಿ ಚುನಾವಣೆ ಮತ್ತು ಅಧಿಕಾರ ಮುಖ್ಯವಾಯಿತು. ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ವಿಮುಖ ಧೋರಣೆಯನ್ನು ತೋರುತ್ತಿದೆ. ನಾವು ಜಿ ಎಸ್ ಟಿ ಹಣ ನೀಡುತ್ತಿಲ್ಲವೆ. ನಮ್ಮ ಪಾಲಿನ ಹಣವನ್ನು ನಮಗೆ ನೀಡಿ. ದೇಶದಲ್ಲಿರುವ ರಾಜ್ಯಗಳನ್ನು ಮತ್ತು ರಾಜ್ಯದ ಜನತೆಯನ್ನು ಪ್ರೀತಿಸುವ ಕಾರ್ಯವನ್ನು ಪ್ರಧಾನಿಗಳು ಮಾಡಲಿ. ಪ್ರಧಾನಿಗಳು ದೇಶಕ್ಕಾಗಿ ಇರಬೇಕು ಯಾವುದೆ ಪಕ್ಷಕ್ಕೆ ಅಲ್ಲ. ಆದ್ದರಿಂದ ಪ್ರಧಾನಿ ಮೋದಿ ನಮ್ಮ ಮಂತ್ರಿಗಳ ಭೇಟಿಗೆ ಅವಕಾಶ ನೀಡಿ ಆದಷ್ಟು ಬೇಗನೆ ಬರ ಪರಿಹಾರವನ್ನು ಘೋಷಣೆ ಮಾಡಬೇಕು ಎಂದು ವಿನಂತಿಸುತ್ತೇನೆ ಎಂದು ಸಚಿವ ತಿಮ್ಮಾಪುರ ತಿಳಿಸಿದರು.

    ಪ್ರಕಾಶ ಕುಂಬಾರ

    ಬಾಗಲಕೋಟೆ

    Demo
    Share. Facebook Twitter LinkedIn Email WhatsApp

    Related Posts

    ಕೋಲಾರ: ಜಿಲ್ಲೆಯಲ್ಲಿ ನಮಗೆ ಹೈಕಮಾಂಡ್ ಯಾರು ಇಲ್ಲ – ಶಾಸಕ SN ನಾರಾಯಣಸ್ವಾಮಿ

    June 17, 2025

    ಮಂಡ್ಯ : 7 ತಿಂಗಳ ಟಗರು ಬರೋಬ್ಬರಿ 1.60 ಲಕ್ಷ ರೂ.ಗೆ ಮಾರಾಟ..!

    June 17, 2025

    ಮಳೆ ಹೆಚ್ಚಾದಂತೆಲ್ಲಾ ಶಿರಾಡಿಘಾಟ್’ನಲ್ಲಿ ಅಪಾಯ: ಭೂ ಕುಸಿತದ ಆತಂಕ

    June 17, 2025

    ಹಾಸನದಲ್ಲಿ ಹೆಚ್ಚಿದ ಹೃದಯಾಘಾತ ಪ್ರಕರಣಗಳು: ತಕ್ಷಣದ ಕ್ರಮಕ್ಕೆ ಸಂಸದ ಶ್ರೇಯಸ್ ಪಟೇಲ್ ಕರೆ

    June 17, 2025

    ಉಚಿತ ಗ್ಯಾರಂಟಿ ಯೋಜನೆ ಎಫೆಕ್ಟ್: 540 ಕೋಟಿ ಅಧಿಕ ಬಾಕಿ ಉಳಿಸಿಕೊಂಡ ಸರ್ಕಾರ..!

    June 17, 2025

    ಅಮ್ಯೂಸ್’ಮೆಂಟ್ ಪಾರ್ಕ್ ಮಾದರಿ KRS ಅಭಿವೃದ್ಧಿ ವಿಚಾರ: ಸುಮಲತಾ ಅಂಬರೀಶ್ ಹೇಳಿದ್ದೇನು..?

    June 17, 2025

    ಅಭಿಮಾನಿಗಳು, ಕಾರ್ಯಕರ್ತರ ಸಮ್ಮುಖದಲ್ಲಿ ಜನ್ಮ ದಿನ ಆಚರಿಸಿಕೊಂಡ ಬಂಡೆಪ್ಪ ಖಾಶೆಂಪುರ್

    June 17, 2025

    ಕೋಲಾರ: ಮೇಕೆ ಮೇಯಿಸುತ್ತಿದ್ದ ವ್ಯಕ್ತಿಯ ಮೇಲೆ ಕರಡಿ ದಾಳಿ: ಗಂಭೀರ ಗಾಯ

    June 17, 2025

    ಚಾಮರಾಜನಗರ: ಹಾಡುಹಗಲೆ ಮೇಕೆಯನ್ನು ಹೊತ್ತೊಯ್ದ ಹುಲಿರಾಯ..!

    June 17, 2025

    ಕೊಡಗು: RCB ವಿಜಯೋತ್ಸವ ದುರಂತ ಖಂಡಿಸಿ ಜಿಲ್ಲಾ BJPಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ

    June 17, 2025

    ಹುಬ್ಬಳ್ಳಿ: ಮೂತ್ರ ವಿಸರ್ಜನೆಗೆಂದು ಹೋದಾಗ ಹಾವು ಕಚ್ಚಿ ವ್ಯಕ್ತಿ ಸಾವು..!

    June 17, 2025

    ಶಾಲಾ ಕಟ್ಟಡ, ಕಂಪೌಂಡಗಳಿಗೆ ರಾಜ್ಯ ಸರ್ಕಾರ ಅನುದಾನವನ್ನು ಶೀಘ್ರವಾಗಿ ನೀಡಬೇಕು: ಶಾಸಕ ಎಂ ಆರ್ ಪಾಟೀಲ್

    June 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.