Close Menu
Ain Live News
    Facebook X (Twitter) Instagram YouTube
    Monday, July 7
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಹುಬ್ಬಳ್ಳಿ: ಶಾಲಾಭಿವೃದ್ಧಿಗೆ ಸಹಕಾರಿಯಾದ ಸಿಎಸ್‌ಆರ್ ಅನುದಾನ

    By AIN AuthorDecember 18, 2023
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಮಳೆ ಹಾಗೂ ಇತರ ಕಾರಣಗಳಿಂದ ಶಿಥಿಲಾವಸ್ಥೆಗೆ ತಲುಪಿದ್ದ ಶಾಲಾ ಕೊಠಡಿಗಳ ಅಭಿವೃದ್ಧಿಗೆ ಅನುದಾನದ ಕೊರತೆ ಎದುರಾಗಿತ್ತು. ಆದರೆ ವಿವಿಧ ಕಂಪನಿಗಳ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್‌ಆರ್ ಫಂಡ್)ಯಿಂದ ಅಭಿವೃದ್ಧಿ ಕಾಣುವಂತಾಗಿದೆ.

    ಜಿಲ್ಲೆಯಲ್ಲಿ ಮಳೆ, ಹಳೇ ಕಟ್ಟಡ ಹೀಗೆ ಅನೇಕ ಕಾರಣಗಳಿಂದ 374 ಶಾಲೆಗಳ 1009 ಕೊಠಡಿಗಳು ಹಾಳಾಗಿದ್ದವು. ಅವುಗಳ ನಿರ್ಮಾಣ ಕಾರ್ಯಕ್ಕೆ ಅನುದಾನ ನೀಡುವಂತೆ ಕೆಲ ವರ್ಷಗಳ ಹಿಂದೆಯೇ ಶಿಕ್ಷಣ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. ಇದೀಗ ಆಯ್ದ 6 ತಾಲೂಕುಗಳಲ್ಲಿನ ಶಾಲಾ ಕೊಠಡಿಗಳನ್ನು ಸಿಎಸ್‌ಆರ್ ನಿಧಿ ಮೂಲಕ ಕೊಠಡಿಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

    ಸದ್ಯಕ್ಕೆ ಕೋಲ್ ಇಂಡಿಯಾ ಕಂಪನಿ 21.54 ಕೋಟಿ ರೂ. ವ್ಯಯಿಸಿ ಜಿಲ್ಲೆಯ 141 ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಪೈಕಿ 129 ಕಾಮಗಾರಿಗಳು ಆರಂಭವಾಗಿದ್ದು, 11 ಕಾಮಗಾರಿಗಳು ಮುಕ್ತಾಯವಾಗಿವೆ. ಉಳಿದ ಕಾಮಗಾರಿಗಳಲ್ಲಿ ಕೆಲವು ತಳಪಾಯ ಹಂತದಲ್ಲಿದ್ದರೆ, ಕೆಲವು ಲಿಂಟಲ್, ಸ್ಲಾೃಬ್ ಹಂತದಲ್ಲಿವೆ.
    ಇತ್ತೀಚಿನ ದಿನಗಳಲ್ಲಿ ಬಹುತೇಕ ಕಂಪನಿಗಳು ಸಿಎಸ್‌ಆರ್ ನಿಧಿಯನ್ನು ಸರ್ಕಾರಿ ಶಾಲಾಭಿವೃದ್ಧಿಗೆ ವಿನಿಯೋಗ ಮಾಡುತ್ತಿವೆ. ಸದ್ಯ ಜಿಲ್ಲೆಯ 141 ಕೊಠಡಿಗಳ ದುರಸ್ತಿಗೆ ಅನುದಾನ ಸಿಕ್ಕಿದ್ದು, ಇನ್ನೂ ಹತ್ತಾರು ಕಂಪನಿಗಳು ಮುಂದಿ ಬಂದಿವೆ.

    ಹೀಗಾಗಿ ಉಳಿದ ಶಾಲೆಗಳ ಅಭಿವೃದ್ಧಿಗೆ ಸಹ ಇಲಾಖೆ ಚಿಂತನೆ ನಡೆಸಿದ್ದು, ಶಾಲೆಗಳಲ್ಲಿ ಆಗಬೇಕಿರುವ ಕಾರ್ಯಗಳು ಕುರಿತ ಪಟ್ಟಿಯನ್ನು ಕಂಪನಿಗಳಿಗೆ ಸಹ ನೀಡಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಯತ್ನದಿಂದಲೇ ಜಿಲ್ಲೆಗೆ ಇಷ್ಟು ಪ್ರಮಾಣದಲ್ಲಿ ಸಿಎಸ್‌ಆರ್ ಅನುದಾನ ಸಿಗಲು ಕಾರಣವಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

    ಕೇಂದ್ರ ಸರ್ಕಾರದ ಆದೇಶದಂತೆ ಕೈಗಾರಿಕೆಗಳು ಲಾಭಾಂಶದಲ್ಲಿ ಶೇ. 2ರಷ್ಟು ಹಣವನ್ನು ಸಮಾಜಿಕ ಹೊಣೆಗಾರಿಕೆಗೆ ಸಂಬಂಧಿಸಿದ ಕಾಮಗಾರಿ ಹಾಗೂ ಸೌಲಭ್ಯಗಳಿಗೆ ಬಳಕೆ ಮಾಡುವುದು ಕಡ್ಡಾಯ. ವಾರ್ಷಿಕವಾಗಿ ಸಾವಿರ ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚು ವಹಿವಾಟು ನಡೆಸುವ ಕೈಗಾರಿಕೆಗಳು ಈ ಕಾರ್ಯ ಮಾಡಬೇಕಿದೆ. ಹೀಗಾಗಿ ಬಹುತೇಕ ಕಂಪನಿಗಳು ಶಾಲಾಭಿವೃದ್ಧಿಗೆ ಈ ಹಣವನ್ನು ಬಳಕೆ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

    ಎಲ್ಲಿ, ಎಷ್ಟು ಕೊಠಡಿಗಳು?: ಜಿಲ್ಲೆಯಲ್ಲಿ ಸಿಎಸ್‌ಆರ್ ನಿಧಿ ಬಳಸಿಕೊಂಡು ಒಟ್ಟು 141 ಶಾಲಾ ಕೊಠಡಿಗಳು ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತಿದೆ. ಈ ಪೈಕಿ ಧಾರವಾಡ ಗ್ರಾಮೀಣ 19, ಧಾರವಾಡ ಶಹರ 22, ಹುಬ್ಬಳ್ಳಿ ಗ್ರಾಮೀಣ 15, ಕಲಘಟಗಿ 29, ಕುಂದಗೋಳ 32 ಹಾಗೂ ನವಲಗುಂದದಲ್ಲಿ 24 ಕೊಠಡಿಗಳು ಅಭಿವೃದ್ಧಿಯಾಗಲಿವೆ.
    ಇನ್ನು ಡಿಡಿಪಿಐ ಎಸ್ .ಎಸ್. ಕೆಳದಿಮಠ ಈ ಕುರಿತು ಮಾಹಿತಿ ನೀಡಿದ್ದು ಶಾಲೆಗಳ ಕೊಠಡಿ ನಿರ್ಮಾಣ ಕಾರ್ಯ ನಡೆದಿದೆ. ವಿವೇಕ ಯೋಜನೆ ಅಡಿ 295 ಹಾಗೂ ಸಿಎಸ್‌ಆರ್ ನಿಧಿ ಅಡಿ 141 ಕೊಠಡಿಗಳು ಸಿದ್ಧವಾಗುತ್ತಿವೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪ್ರಸ್ತಾವದ ಮೇರೆಗೆ ಕಂಪನಿಯವರು ಸಿಎಸ್‌ಆರ್ ನಿಧಿ ನೀಡಿದ್ದಾರೆ. ಕಂಪನಿಯವರು ಹಣ ಬಿಡುಗಡೆ ಮಾಡಿದ ಬಳಿಕ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದರು.

    Demo
    Share. Facebook Twitter LinkedIn Email WhatsApp

    Related Posts

    ಪತಿಯಿಂದ ಪತ್ನಿಗೆ ಕಿರುಕುಳ ನೇಣು ಹಾಕಿಕೊಂಡು ಪತ್ನಿ ಆತ್ಮಹತ್ಯೆ!

    July 7, 2025

    ದೇಹಕ್ಕಿಂತ ಅತಿಯಾದ ತೂಕ ಮತ್ತು ಬೊಜ್ಜು: ಪೊಲೀಸ್ ಕಮಿಷನರ್ ಹೇಳಿದ್ದೇನು..?

    July 7, 2025

    ನೀರು ಕಾಯಿಸುವ ಹಂಡೆಯಲ್ಲಿ 1 ತಿಂಗಳ ಕಂದನನ್ನೇ ಮುಳುಗಿಸಿ ಕೊಂದ ತಾಯಿ!

    July 7, 2025

    ಕೋಲಾರದ ಸರ್ಕಾರಿ ಆಸ್ಪತ್ರೆಯಲ್ಲಿ ಮಾಟ-ಮಂತ್ರ..!

    July 7, 2025

    ನಿಮ್ಮಪ್ಪನ್ನೇ ಕಾಂಗ್ರೆಸ್ ಸಿಎಂ ಮಾಡಲಿಲ್ಲ. ಇನ್ನೂ ನಿಮ್ಮನ್ನು ಮುಖ್ಯಮಂತ್ರಿ ಮಾಡುತ್ತಾ?: ಪ್ರಿಯಾಂಕ್ ಖರ್ಗೆ ವಿರುದ್ಧ ಪ್ರತಾಪ್ ಸಿಂಹ ಕಿಡಿ

    July 7, 2025

    ಸದ್ದಿಲ್ಲದೇ ಪ್ರಾಣ ಬಲಿ ಪಡೆಯುತ್ತಿದೆ “ಹೃದಯ”: ಇಂದು ಮೂವರು ಹೃದಯಸ್ತಂಭನಕ್ಕೆ ಬಲಿ!

    July 7, 2025

    ವಿಜಯಪುರದ: ಶಾಲಾ ವಿದ್ಯಾರ್ಥಿ ಅನುಮಾನಾಸ್ಪದ ಸಾವು: ಆತ್ಮಹತ್ಯೆ? ಕೊಲೆಯೋ?

    July 7, 2025

    ಕಲುಷಿತ ನೀರು ಸೇವಿಸಿ ಮೂವರು ಸಾವು.! ಆರು ಜನರ ಸ್ಥಿತಿ ಗಂಭೀರ – ಹೆಚ್ಚಿದ ಆತಂಕ

    July 7, 2025

    ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಮನೆ ಮೇಲೆ ದಾಳಿ, 8 ಮಂದಿ ಅರೆಸ್ಟ್

    July 7, 2025

    Yettinahole Project: ವಿಷ ಬೇಕಾದ್ರು ಕುಡಿಯುತ್ತೇವೆ ಡ್ಯಾಂ ನಿರ್ಮಾಣ ಮಾಡಲು ಬಿಡಲ್ಲ: ರೊಚ್ಚಿಗೆದ್ದ ಅನ್ನದಾತರು!

    July 7, 2025

    ನಿಲ್ಲದ ಹಾರ್ಟ್ ಅಟ್ಯಾಕ್: ಹೃದಯಾಘಾತಕ್ಕೆ ಬಲಿಯಾದ ಇಬ್ಬರು ರೈತರು..!

    July 7, 2025

    ಬ್ಯಾಂಕ್ ಅಧಿಕಾರಿಗಳು ಫಲಾನುಭವಿಗಳ ಜೊತೆಗೆ ಸೌಜನ್ಯದಿಂದ ವರ್ತಿಸಿ: ಪ್ರಲ್ಹಾದ್ ಜೋಶಿ

    July 7, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.