Close Menu
Ain Live News
    Facebook X (Twitter) Instagram YouTube
    Monday, July 7
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    KR Pura: ದೈವ ಚಿಂತನೆಯಿಂದ ಬದುಕು ಸರಳ: ಡಾ. ಎಮ್.ಆರ್.ಜಯರಾಮ್

    By AIN AuthorDecember 18, 2023
    Share
    Facebook Twitter LinkedIn Pinterest Email
    Demo

    ಕೆ.ಆರ್.ಪುರ: ಬಹಿರಂಗದ ಯಶಸ್ಸಿಗಿಂತ ಅಂತರಂಗದ ಶಾಂತಿ ಮುಖ್ಯವಾದುದು. ದೈವ ಚಿಂತನೆಯಿಂದ ಬದುಕು ಸರಳವಾಗುತ್ತದೆ ಎಂದು ಶ್ರೀ ಕ್ಷೇತ್ರ ಕೈವಾರ ಧರ್ಮಾಧಿಕಾರಿ ಡಾ. ಎಮ್.ಆರ್.ಜಯರಾಮ್  ಅಭಿಪ್ರಾಯಪಟ್ಟರು. ಕೆ.ಆರ್.ಪುರದಲ್ಲಿ ನಡೆದ ಸದ್ಗುರು ಶ್ರೀ ಯೋಗಿನಾರೇಯಣರ ಗುರುಪೂಜಾ ಕಾರ್ಯಕ್ರಮ ಪ್ರವಚನ ಮತ್ತು ಕೆ.ಆರ್ ಪುರ ಬಲಿಜ ವೆಲ್ ಫೇರ್ ಟ್ರಸ್ಟ್ ಉದ್ಘಾಟನೆಯನ್ನು ಮಾಡಿ ಮಾತನಾಡಿದ ಶ್ರೀ ಕ್ಷೇತ್ರ ಕೈವಾರ ಧರ್ಮಾಧಿಕಾರಿ ಡಾ. ಎಮ್.ಆರ್.ಜಯರಾಮ್ ಅವರು,

    https://ainlivenews.com/wp-content/uploads/2023/12/WhatsApp-Video-2023-12-18-at-10.59.47_378e4d6e.mp4

    ನೂರಾರು ವರ್ಷಗಳ ಹಿಂದೆ ಇದ್ದಂತಹ ಸಾಧು- ಸಂತ-ದಾಸರನ್ನು ಇಂದಿಗೂ ನೆನೆಸಿಕೊಳ್ಳುತ್ತೇವೆ.ಕಾರಣವೆಂದರೆ ಸಾಧುಸಂತರು ತಮಗಾಗಿ ಬದುಕಲಿಲ್ಲ. ಇಡೀ ಸಮಾಜಕ್ಕಾಗಿ ಜೀವನ ಸವೆಸಿದರು ಅವರ ಬದುಕು ನಮಗೆ ಪಾಠವಾಗಬೇಕು ಮನಸ್ಸಿನ ನಿಯಂತ್ರಣವಿಲ್ಲದೆ ಬದುಕಿನಲ್ಲಿ ಸುಖವಾಗಿರಲು ಸಾಧ್ಯವಿಲ್ಲ ಎಂದು ಸಾರಿದ ಕೈವಾರ ಯೋಗಿನಾರೇಯಣ ತಾತಯ್ಯನವರ ಬೋಧನೆಗಳು ನಮಗೆ ಮಾರ್ಗದರ್ಶನ ಎಂದರು. ಮಾನಸಿಕ ಸದೃಢತೆಗೆ ಕಾಲಜ್ಞಾನಿ ಕೈವಾರ ತಾತಯ್ಯನವರ ಚಿಂತನೆಗಳು ನಮಗೆ ಸದಾ ದಾರಿದೀಪ ಎಂದರು.

    ಕಾಲಜ್ಞಾನಿ ಕೈವಾರ ತಾತಯ್ಯ,ವಿಜಯನಗರದ ಅರಸ ಕೃಷ್ಣದೇವರಾಯ, ವೈಚಾರಿಕ ಕ್ರಾಂತಿ ಮಾಡಿದ ರಾಮಸ್ವಾಮಿ ಪೆರಿಯಾರ್ ನಾಯ್ಕರ್, ಶಿಕ್ಷಣದಲ್ಲಿ ಕ್ರಾಂತಿ ಮಾಡಿದ ಸಾವಿತ್ರಿಬಾಯಿ ಪುಲೆ, ಜ್ಯೋತಿಬಾ ಪುಲೆ ಸೇರಿದಂತೆ ಬಲಿಜ ಸಮುದಾಯದ ಹಲವರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ’ ಎಂದು ನೆನೆದರು. ಭಕ್ತಿತತ್ವವನ್ನು ಯೋಗದೊಂದಿಗೆ ಅಳವಡಿಸಿ ಸಾಮಾನ್ಯರಿಗೂ ತಲುಪುವಂತೆ ಮಾಡಿದ ಕೀರ್ತಿ ಕೈವಾರದ ತಾತಯ್ಯನವರಿಗೆ ಸಲ್ಲುತ್ತದೆ. ಭಕ್ತಿ ಮತ್ತು ಯೋಗವನ್ನು ಸಮ ಸಮವಾಗಿ ತಾತಯ್ಯನವರು ಬೋಧಿಸಿದ್ದಾರೆ. ಭಕ್ತಿಯಲ್ಲಿಯೂ ಮೂಢಭಕ್ತಿಯಿಂದ ಶೀಘ್ರವಾಗಿ ಮುಕ್ತಿ ಸಿಗುವುದೆಂಬ ತತ್ವವನ್ನು ತಾತಯ್ಯನವರು ಬೋಧಿಸಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಮರ್ ಜ್ಯೋತಿ ಶಾಲೆಯ ಅಧ್ಯಕ್ಷ ಮೋಹನ್,ಸಮುದಾಯದ ಮುಖಂಡರಾದ  ವೇಣುಗೋಪಾಲ, ಮೇಡಹಳ್ಳಿ ಜಗ್ಗಿ, ಅಂಜಿನಪ್ಪ, ಗಣೇಶ್, ಶಿವಪ್ಪ, ರವಿಕುಮಾರ್, ಗಜೇಂದ್ರ ಇದ್ದರು.

    Demo
    Share. Facebook Twitter LinkedIn Email WhatsApp

    Related Posts

    ಕಾಡುಪ್ರಾಣಿ ಹಾವಳಿ: ಬೆಳೆ ಪರಿಹಾರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ – ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಸೂಚನೆ!

    July 7, 2025

    ಗ್ಯಾರಂಟಿ ಹೆಸರೇಳಿ ಅಧಿಕಾರಕ್ಕೆ ಬಂದವರು ಅಭಿವೃದ್ಧಿ ಮಾಡಲಿ: ಛಲವಾದಿ ನಾರಾಯಣಸ್ವಾಮಿ

    July 7, 2025

    ಸಿಎಂ ಬದಲಾವಣೆ ವಿಚಾರ: ಮಾಧ್ಯಮದವರು ಮನಸ್ಸಿಗೆ ಬಂದಂತೆ ವಿಶ್ಲೇಷಿಸಬೇಡಿ -ಸಚಿವ ಮಧು ಬಂಗಾರಪ್ಪ

    July 7, 2025

    ಕೊಡಗು: ಕಾಡಾನೆ ಕಾರ್ಯಚರಣೆ ವೇಳೆ ಕಾಡಾನೆಗೆ ವಿದ್ಯುತ್ ಶಾಕ್!

    July 7, 2025

    ಧಾರವಾಡ: ಹೃದಯಾಘಾತದಿಂದ 56ರ ಮಹಿಳೆ ಸಾವು!

    July 7, 2025

    ಗ್ಯಾರೆಂಟಿ ಬಂದ್ ಹೇಳಿಕೆ ಬಗ್ಗೆ ರಾಯರೆಡ್ಡಿ ಹೇಳಿದ್ದೇನು..?

    July 7, 2025

    ನೀರು ಎಂದು ತಿಳಿದು ಆಸಿಡ್ ಕುಡಿದ ವಿದ್ಯಾರ್ಥಿ

    July 7, 2025

    ಮಿನಿ ಬಸ್ ಪಲ್ಟಿ, 12 ಜನ ಪ್ರಯಾಣಿಕರಿಗೆ ಗಂಭೀರ ಗಾಯ

    July 7, 2025

    ಸಿದ್ದುನೇ ಸಿಎಂ ಅಂತಾ ಕಾಂಗ್ರೆಸ್ ಅಧ್ಯಕ್ಷರು ಹೇಳಿ ; ಆರ್.ಅಶೋಕ್ ಸವಾಲು

    July 7, 2025

    ರಾಜ್ಯದಲ್ಲಿ ಬೇಲಿನೇ ಎದ್ದು ಹೊಲ ಮೇಯುವ ಪರಿಸ್ಥಿತಿ ನಿರ್ಮಾಣವಾಗಿದೆ: ಬಿ. ವೈ. ವಿಜಯೇಂದ್ರ

    July 7, 2025

    ಪತಿಯಿಂದ ಪತ್ನಿಗೆ ಕಿರುಕುಳ ನೇಣು ಹಾಕಿಕೊಂಡು ಪತ್ನಿ ಆತ್ಮಹತ್ಯೆ!

    July 7, 2025

    ದೇಹಕ್ಕಿಂತ ಅತಿಯಾದ ತೂಕ ಮತ್ತು ಬೊಜ್ಜು: ಪೊಲೀಸ್ ಕಮಿಷನರ್ ಹೇಳಿದ್ದೇನು..?

    July 7, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.