Close Menu
Ain Live News
    Facebook X (Twitter) Instagram YouTube
    Monday, May 12
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಅಂಬರೀಶ್ ಗೆ ಇದ್ದ ಆ ಒಂದು ಗುಣ ದರ್ಶನ್ ನಲ್ಲೂ ಇದೆ: ಸುಮಲತಾ ಅಂಬರೀಶ್

    By Author AINFebruary 18, 2024
    Share
    Facebook Twitter LinkedIn Pinterest Email
    Demo

    ದರ್ಶನ್ ನನ್ನ ಪ್ರೀತಿಯ ಹಿರಿಯ ಮಗ. ಅಂಬರೀಶ್ ಗೆ ಇದ್ದ ಆ ಒಂದು ಗುಣ ದರ್ಶನ್ ನಲ್ಲೂ ಇದೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಮೆಚ್ಚುಗೆ ಸೂಚಿಸಿದ್ದಾರೆ.

    ದರ್ಶನ್ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು 25 ವರ್ಷ ಕಳೆದಿದೆ. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಬೆಳ್ಳಿ ಪರ್ವ ಡಿ-25 ಸಮಾರಂಭದಲ್ಲಿ ಸುಮಲತಾ ಅಂಬರೀಶ್‌ ಪಾಲ್ಗೊಂಡು ಮಾತನಾಡಿದ್ದಾರೆ.

    ‘ನನ್ನ ಪ್ರೀತಿಯ ಹಿರಿಯ ಮಗ ದರ್ಶನ್, ನಿನ್ನೆಯಷ್ಟೇ ಹುಟ್ಟು ಆಚರಿಸಿಕೊಂಡಿದ್ದಾರೆ, ಕಾಟೇರ ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಮಂಡ್ಯದಲ್ಲಿ ಮಾಡಿದ್ದೆವು. ಆಗಲೇ ಹೇಳಿದ್ದೆ ಈ ಸಿನೆಮಾ ದೊಡ್ಡ ಹಿಟ್ ಆಗುತ್ತೆ ಎಂದು, ಅದರ ಸಂಭ್ರಮವೂ ಮಂಡ್ಯದಲ್ಲೇ ಮಾಡ್ತೀವಿ ಅಂದಿದ್ದೆ. ‘ಕಾಟೇರ’ ಸಿನಿಮಾ ಈಗ ದೊಡ್ಡ ಹಿಟ್ ಆಗಿದೆ. ‘ಕಾಟೇರ’ ದರ್ಶನ್ ಅವರನ್ನು ಎಲ್ಲಗೋ ಕರೆದುಕೊಂಡು ಹೋಗಿ ಕೂರಿಸಿದೆ. ಅವರು ಚಿತ್ರರಂಗದಲ್ಲಿ 25 ವರ್ಷ ಕಳೆದಿದ್ದಾರೆ. ಅದು ಸಣ್ಣ ಸಾಧನೆಯಲ್ಲ’ ಎಂದು ಮೆಚ್ಚುಗೆ ಸೂಚಿಸಿದರು.

    ‘25 ವರ್ಷಗಳ ಹಿಂದೆ ದರ್ಶನ್​ ಮೊದಲ ಸಿನಿಮಾ ‘ಮೆಜೆಸ್ಟಿಕ್​’ ಮುಹೂರ್ತಕ್ಕೆ ನಾನು ಹಾಗೂ ಅಂಬರೀಶ್ ಒಟ್ಟಿಗೆ ಹೋಗಿದ್ದೆವು. ನಮ್ಮ ಬೆಂಗಳೂರಿನ ಮನೆಯ ಬಳಿಯ ದೇವಾಲಯದಲ್ಲಿ ಮುಹೂರ್ತ ನಡೆದಿತ್ತು. ದರ್ಶನ್ ಆಗಿನ್ನು 22-23 ವರ್ಷದ ಯುವಕ. ಈಗ ನೋಡಿದರೆ 25 ವರ್ಷ ಪೂರೈಸಿದ್ದಾನೆ. ಈಗಲೂ ನನಗೆ ಅವನು 25-27 ವರ್ಷದ ಯುವಕನಂತೆ ಕಾಣುತ್ತಾನೆ. ಅಮ್ಮನಿಗೆ ಮಕ್ಕಳು ಯಾವಾಗಲೂ ಚಿಕ್ಕವರೇ ಆಗಿರುತ್ತಾರೆ’ ಎಂದರು.

    ದರ್ಶನ್ ಬದುಕಿನಲ್ಲಿ ಸವಾಲು ಎದುರಿಸಿ ಬೆಳೆದ ವ್ಯಕ್ತಿ. ಶ್ರಮದಿಂದ ಬೆಳೆದು ಅಭಿಮಾನಿಗಳ ಪ್ರೀತಿಗಳಿಸಿದ್ದಾನೆ‌. ಸಾರ್ವಜನಿಕ ಜೀವನದಲ್ಲಿ ಇರುವವರು ಮಾದರಿಯಾಗ ಬೇಕು. ದರ್ಶನ್ ಕಷ್ಟಪಟ್ಟು ಬೆಳೆದ ರೀತಿ ನಿಮಗೆಲ್ಲರಿಗೂ ಸ್ಪೂರ್ತಿ ಆಗಬೇಕು. ಬರ್ತಡೇ ಆಚರಣೆ ಬದಲು ಬಡವರಿಗೆ ಸಹಾಯ ಮಾಡಲು ದರ್ಶನ್ ಕೋರಿದ್ದರು, ಅವರಿಗೆ ಅದನ್ನೆಲ್ಲ ಮಾಡಲಾಗದೆ ಹಾಗೆ ಮಾಡಿದ್ದಲ್ಲ, ನಿಮಗೂ ಆ ಅಭ್ಯಾಸ ಬರಲಿ ಎಂಬ ಕಾರಣಕ್ಕೆ ಮಾಡಿದ್ದು, ಮಕ್ಕಳ ಯಶಸ್ಸು ತಾಯಿಗೆ ಸಂತೋಷ. ಅಂಬರೀಶ್ ಹೋದ ಮೇಲೆ ನಮ್ಮ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಅಭಿಷೇಕ್‌ಗೆ ದರ್ಶನ್ ಗೈಡ್ ಮಾಡ್ತಾನೆ, ಅಭಿಷೇಕ್​ಗೆ ದರ್ಶನ್ ದೊಡ್ಡ ಅಣ್ಣನಂತೆ ಇದ್ದಾನೆ. ನಾನು ಸಹ ಹೆಚ್ಚು ಹೊಗಳಿದರೆ ನಾಳೆ ಮನೆಗೆ ಬಂದು ಬೈತಾನೆ’ ಎಂದು ತಮಾಷೆಯಾಗಿ ಹೇಳಿದರು.

    ಕಳೆದ ಮಂಡ್ಯ ಲೋಕಸಭೆ ಚುನಾವಣೆ ನೆನಪು ಮಾಡಿಕೊಂಡ ಸುಮಲತಾ, ‘ಕಳೆದ ಚುನಾವಣೆ ಸಮಯದಲ್ಲಿ ನನ್ನ ಮನಸ್ಥಿತಿ ಯಾರಿಗೂ ಗೊತ್ತಿರಲಿಲ್ಲ. ಬಹಳ ಗೊಂದಲದಲ್ಲಿದ್ದೆ. ನನ್ನ ಹತ್ತಿರದಲ್ಲಿರುವವರಿಗೆ ಮಾತ್ರವೇ ನನ್ನ ಸಂಕಷ್ಟ ಗೊತ್ತಿತ್ತು. ಆದರೆ ದರ್ಶನ್ ಹಾಗೂ ಯಶ್ ಬಂದರು, ನನ್ನ ಪರವಾಗಿ ಪ್ರಚಾರ ಮಾಡಿದ್ದು ಮಾತ್ರವೇ ಅಲ್ಲದೆ ನನಗೆ ಬೆಂಬಲ ಸಹ ನೀಡಿದರು. ಅದನ್ನು ನಾನು ಇಂದು ನೆನಪಿಸಿಕೊಳ್ಳಲೇ ಬೇಕು’ ಎಂದ ಸುಮಲತಾ, ಕಾರ್ಯಕ್ರಮ ಆಯೋಜನೆ ಮಾಡಿದ ಸಚ್ಚಿದಾನಂದ್ ಬಗ್ಗೆ ಮಾತನಾಡುತ್ತಾ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸುಮಲತಾ ಅವರು ಸಚ್ಚಿದಾನಂದ್​ಗೆ ಸ್ಪರ್ಧಿಸಲು ಬಿಡುತ್ತಾರಾ, ಅಭಿಷೇಕ್​ಗೆ ಟಿಕೆಟ್ ಕೇಳ್ತಾರಾ ಅಥವಾ ತಾವೇ ಸ್ಪರ್ಧಿಸುತ್ತಾರಾ ಎಂದು ಸುದ್ದಿಗಳು ಹರಿದಾಡಿತ್ತು. ಅಭಿಷೇಕ್ ಅಥವಾ ಸಚ್ಚಿದಾನಂದ್​ಗೆ ಟಿಕೆಟ್ ಕೇಳುವ ಅವಕಾಶ ಇದ್ದರೆ ನಾನು ಸಚ್ಚಿಗಾಗಿಯೇ ಕೇಳುತ್ತೇನೆ’ ಎಂದರು.

    ನಾವು ನಡೆದು ಬಂದ ದಾರಿ ಯಾವತ್ತು ಮರೆಯಬಾರದು‌, ಆ ಗುಣ ದರ್ಶನ್‌ನಲ್ಲಿದೆ, ಎಲ್ಲರನ್ನು ಜೊತೆಗೂಡಿಸಿಕೊಂಡು ಬೆಳೆಸುವ ಗುಣ ದರ್ಶನ್‌ಗೆ ಇದೆ. ಅಂಬರೀಶ್ ಅವರಲ್ಲಿ ಬಿಟ್ಟರೆ ಆ ಗುಣ ಕಂಡದ್ದು ದರ್ಶನ್‌ನಲ್ಲಿ ಮಾತ್ರ. ದರ್ಶನ್ ಹೀಗೆ ಸಂತೋಷವಾಗಿ, ನೆಮ್ಮದಿಯಾಗಿ ಜೀವನ ನಡೆಸಿಕೊಂಡು ಹೋಗುತ್ತಿರಬೇಕು ಎಂಬುದು ನನ್ನ ಹಾರೈಕೆ, ನನ್ನ ಜೊತೆ ಅಂಬರೀಶ್ ಇದ್ದಾರೆ, ನನ್ನ ಹಿಂದೆ ನನ್ನ ಮಕ್ಕಳಿದ್ದಾರೆ, 5 ವರ್ಷ ನಿಮ್ಮ‌ ಪ್ರೀತಿಗಳಿಸಿದ್ದೇನೆ. ಮಂಡ್ಯದ ಮಣ್ಣಿನ ತಿಲಕ ಇಟ್ಟು ಅಂಬರೀಶ್‌ರನ್ನು ಬೀಳ್ಕೊಟ್ಟೆವು‌, ಸುಮಲತಾ ಕೂಡ ಈ ಮಣ್ಣನ್ನ ಬಿಡಲ್ಲ, ಮಂಡ್ಯವನ್ನ ಎಂದಿಗೂ ಬಿಡೋದಿಲ್ಲ’ ಎಂದು ಭಾವುಕರಾಗಿ ನುಡಿದರು.

    Post Views: 1

    Demo
    Share. Facebook Twitter LinkedIn Email WhatsApp

    Related Posts

    ಪೀಳಿಗೆಗಳನ್ನು ರೂಪಿಸುವ ಮಹಿಳೆಯರಿಗೆ ಅಮ್ಮಂದಿರ ದಿನದ ಶುಭಾಶಯಗಳು: ರಾಧಿಕಾ ಪಂಡಿತ್

    May 11, 2025

    ಹೊಸ ಬಾಳಿಗೆ ಹೆಜ್ಜೆ ಇಟ್ಟ ಬಿಗ್ ಬಾಸ್ ರಂಜಿತ್..! ತಾಳಿ ಕಟ್ಟುವ ವೇಳೆ ಮಾನಸಾ ಭಾವುಕ

    May 11, 2025

    Vikram Gaikwad: ಬಾಲಿವುಡ್‌ ಖ್ಯಾತ ಮೇಕಪ್ ಕಲಾವಿದ ವಿಕ್ರಮ್ ಗಾಯಕ್ವಾಡ್ ನಿಧನ

    May 11, 2025

    Mrunal Thakur-Sumanth: ಮೃಣಾಲ್ ಠಾಕೂರ್ ಜತೆ ಮದುವೆ ವಿಚಾರ: ಕೊನೆಗೂ ಕ್ಲಾರಿಟಿ ಕೊಟ್ಟ ನಟ ಸುಮಂತ್‌

    May 11, 2025

    Operation Sindoor: ‘ಆಪರೇಷನ್ ಸಿಂಧೂರ’ ಸಿನಿಮಾ ಪೋಸ್ಟರ್ ರಿಲೀಸ್: ಕ್ಷಮೆ ಕೇಳಿದ ನಿರ್ದೇಶಕ..! ಯಾಕೆ ಗೊತ್ತಾ..?

    May 11, 2025

    ಅಭಿಮಾನಿಗಳಿಗೆ ಗುಡ್‌ ನ್ಯೂಸ್‌ ಕೊಟ್ಟ ಚಂದನ್‌ ಶೆಟ್ಟಿ..ಮತ್ತೊಂದು ಮದುವೆಗೆ ರೆಡಿ!

    May 10, 2025

    ನಿರಂತರ ನಿಂದನೆ, ಟೀಕೆ-ಟಿಪ್ಪಣೆಗಳನ್ನು ಸಮಂತಾ ನಿಭಾಯಿಸುವುದು ಹೇಗೆ?

    May 10, 2025

    ಸಂಚಿತ್ ಹೆಗ್ಡೆಗೆ ಡಿಮ್ಯಾಂಡೋ ಡಿಮ್ಯಾಂಡ್… ʼಒನ್ ಅಂಡ್ ಓನ್ಲಿ ಸುಖʼ ಎಂದ ಸಂಚಿತ್!

    May 10, 2025

    ಪತಿ ಪರಸ್ತ್ರೀ ಜೊತೆ ಓಡಾಟ..ಮಾಜಿ ಪತ್ನಿ ಎನ್ನಬೇಡಿ ಎಂದ ನಟ ರವಿ ಮೋಹನ್‌ ಪತ್ನಿ..ಆರತಿ ಬೆಂಬಲಕ್ಕೆ ನಿಂತ ನಟಿಯರು!

    May 10, 2025

    ಕಿಚ್ಚನಿಂದ ಪ್ರಧಾನಿಗೆ ಪತ್ರ…ಜೈ ಹಿಂದ್. ಜೈ ಕರ್ನಾಟಕ. ಜೈ ಭಾರತ ಎಂದ ಸುದೀಪ್! ‌

    May 10, 2025

    ʼಆಪರೇಷನ್‌ ಸಿಂಧೂರʼ ಸಿನಿಮಾದ ಪೋಸ್ಟರ್‌ ಬಿಡುಗಡೆ..ಯಾರು ಹೀರೋ?

    May 10, 2025

    ಸ್ಟಾರ್ ಸುವರ್ಣದಲ್ಲಿ ಹೊಚ್ಚ ಹೊಸ ಧಾರಾವಾಹಿ..ಸೀರಿಯಲ್‌ನತ್ತ ಬಹುಭಾಷಾ ನಟ ಸುಮನ್

    May 10, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.