Close Menu
Ain Live News
    Facebook X (Twitter) Instagram YouTube
    Thursday, May 29
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ ಪಾಯಲ್ ಕಪಾಡಿಯಾಗೆ ಮೋದಿ ಅಭಿನಂದನೆ

    By Author AINMay 27, 2024
    Share
    Facebook Twitter LinkedIn Pinterest Email
    Demo

    77ನೇ ಸಾಲಿನ ಕಾನ್ಸ್ ಫಿಲ್ಮ್​ ಫೆಸ್ಟಿವಲ್​ನಲ್ಲಿ ಭಾರತಕ್ಕೆ ಪ್ರತಿಷ್ಠಿತ ಪ್ರಶಸ್ತಿ ಸಿಕ್ಕಿದೆ. ನಿರ್ದೇಶಕಿ ಪಾಯಲ್​ ಕಪಾಡಿಯಾ ನಿರ್ದೇಶನದ ‘ಆಲ್​ ವಿ ಇಮ್ಯಾಜಿನ್​ ಆ್ಯಸ್​ ಲೈಟ್​’ ಸಿನಿಮಾಗೆ ಗ್ರ್ಯಾಂಡ್​ ಪ್ರಿಕ್ಸ್​ ಪ್ರಶಸ್ತಿ ದೊರೆತಿದ್ದು, ಈ ಪ್ರಶಸ್ತಿ ಪಡೆದ ಭಾರತದ ಮೊದಲ ಡೈರೆಕ್ಟರ್​ ಎಂಬ ಖ್ಯಾತಿಗೆ ಪಾಯಲ್​ ಕಪಾಡಿಯಾ ಪಾತ್ರರಾಗಿದ್ದಾರೆ. ಸದ್ಯ ಪಾಯಲ್ ಅವರಗೆ ಸೋಶಿಯಲ್​ ಮೀಡಿಯಾ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ತಿಳಿಸಿದ್ದಾರೆ.

    ಪಾಯಲ್​ ಕಪಾಡಿಯಾ ಅವರಿಂದಾಗಿ ಯುವ ಫಿಲ್ಮ್​ ಮೇಕರ್​ಗಳಿಗೆ ಸ್ಫೂರ್ತಿ ಸಿಕ್ಕಿದೆ ಎಂದು ನರೇಂದ್ರ ಮೋದಿ ಹೊಗಳಿದ್ದಾರೆ.

    ‘ಪಾಯಲ್​ ಕಪಾಡಿಯಾ ಅವರಿಂದ ಭಾರತಕ್ಕೆ ಹೆಮ್ಮೆ ಆಗಿದೆ. 77ನೇ ಕಾನ್​ ಚಿತ್ರೋತ್ಸವದಲ್ಲಿ ‘ಆಲ್​ ವಿ ಇಮ್ಯಾಜಿನ್​ ಆ್ಯಸ್​ ಲೈಟ್​’ ಸಿನಿಮಾಗೆ ಅವರು ಗ್ರ್ಯಾಂಡ್​ ಪ್ರಿಕ್ಸ್​ ಪ್ರಶಸ್ತಿ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಫಿಲ್ಮ್​ ಆ್ಯಂಡ್​ ಟೆಲಿವಿಷನ್​ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಹಳೇ ವಿದ್ಯಾರ್ಥಿಯಾದ ಅವರು ಜಾಗತಿಕ ಮಟ್ಟದಲ್ಲಿ ತಮ್ಮ ಪ್ರತಿಭೆಯಿಂದ ಶೈನ್​ ಆಗುತ್ತಿದ್ದಾರೆ. ಭಾರತದ ಶ್ರೀಮಂತ ಸೃಜನಶೀಲತೆಗೆ ಅವರು ಸಾಕ್ಷಿ. ಈ ಪ್ರತಿಷ್ಠಿತ ಪ್ರಶಸ್ತಿಯು ಅವರಿಗೆ ಸಂದ ಗೌರವ ಮಾತವಲ್ಲದೇ, ಭಾರತದಲ್ಲಿನ ಹೊಸ ತಲೆಮಾರಿನ ಫಿಲ್ಮ್​ ಮೇಕರ್​ಗಳಿಗೆ ಸ್ಫೂರ್ತಿಯಾಗಿದೆ’ ಎಂದು ನರೇಂದ್ರ ಮೋದಿ ಅವರು ‘ಎಕ್ಸ್​’ (ಟ್ವಿಟರ್​) ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

    ಕಳೆದ 30 ವರ್ಷಗಳಲ್ಲಿ ಕಾನ್​ ಚಿತ್ರೋತ್ಸವದ ಮುಖ್ಯ ವಿಭಾಗದಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಸಿನಿಮಾ ಇದಾಗಿದೆ. ಬೇರೆ ಬೇರೆ ದೇಶಗಳ ಸಿನಿಮಾಗಳ ಜೊತೆ ಸ್ಪರ್ಧಿಸಿ ‘ಆಲ್​ ವಿ ಇಮ್ಯಾಜಿನ್​ ಆ್ಯಸ್​ ಲೈಟ್​’ ಸಿನಿಮಾ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಸಿನಿಮಾದ ಕಲಾವಿದರ ಜೊತೆ ನಿರ್ದೇಶಕಿ ಪಾಯಲ್​ ಕಪಾಡಿಯಾ ಅವರು ಕಾನ್​ ಚಿತ್ರೋತ್ಸವಕ್ಕೆ ತೆರಳಿದ್ದಾರೆ.

    ನಿರ್ದೇಶಕಿ ಪಾಯಲ್​ ಕಪಾಡಿಯಾ ಅವರ ಈ ಸಾಧನೆಗಾಗಿ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ಇಂಡೋ-ಫ್ರೆಂಚ್ ಪ್ರೊಡಕ್ಷನ್ ಮೂಲಕ ಈ ಸಿನಿಮಾ ನಿರ್ಮಾಣವಾಗಿದ್ದು, ಮೇ 23ರಂದು ಈ ಸಿನಿಮಾದ ಪ್ರೀಮಿಯರ್​ ಆಯಿತು. ಅಂದು ಸಿನಿಮಾ ಮುಗಿದ ಬಳಿಕ ಪ್ರೇಕ್ಷಕರು 8 ನಿಮಿಷಗಳ ಕಾಲ ಎದ್ದು ನಿಂತು ಚಿತ್ರತಂಡಕ್ಕೆ ಗೌರವ ಸಲ್ಲಿಸಿದ್ದರು.

    Demo
    Share. Facebook Twitter LinkedIn Email WhatsApp

    Related Posts

    ಬಾಲಿವುಡ್‌ಗೆ ಹೊಂಬಾಳೆ ಫಿಲಂಸ್‌ ಲಗ್ಗೆ…ಹೃತಿಕ್ ರೋಷನ್ ಜೊತೆ ಕೈ ಜೋಡಿಸಿದ KGF ಪ್ರೊಡ್ಯೂಸರ್!‌

    May 28, 2025

    ಕೊಲೆ ಆರೋಪಿ ದರ್ಶನ್‌ ವೀಸಾ ವಿಷಯ..ಇವತ್ತು ಕೋರ್ಟ್‌ನಲ್ಲಿ ಏನೇನಾಯ್ತು?

    May 28, 2025

    ಕಮಲ್‌ ಹಾಸನ್‌ ಹೊಗಳುತ್ತಲೇ ಡಿಚ್ಚಿ ಕೊಟ್ಟ ನವರಸ ನಾಯಕ ಜಗ್ಗೇಶ್!‌

    May 28, 2025

    ಕನ್ನಡ ಕಿಡಿ ಹಚ್ಚಿಸಿದ ಕಮಲ್‌ ಹಾಸನ್‌ ರಾಜ್ಯಸಭೆ ಪ್ರವೇಶಿಸಲು ರೆಡಿ..!

    May 28, 2025

    ಕಮಲ್ ಹಾಸನ್ ಸಾಂಸಾರಿಕ ಜೀವನ, ರಾಜಕೀಯ ಜೀವನ ಸರಿಯಿಲ್ಲ. ಎಲ್ಲದ್ರಲ್ಲಿಯೂ ಎಕ್ಕುಟ್ಟೋಗಿದ್ದಾರೆ: ಪ್ರವೀಣ್ ಶೆಟ್ಟಿ

    May 28, 2025

    ಬದಲಾಯ್ತು ʼಎಕ್ಕʼ ರಿಲೀಸ್‌ ಡೇಟ್..ಯಾವಾಗ ರಿಲೀಸ್‌ ಯುವರಾಜ್‌ಕುಮಾರ್‌ ಸಿನಿಮಾ?

    May 28, 2025

    ʼಡೆವಿಲ್‌ʼ ಶೂಟಿಂಗ್‌ಗಾಗಿ ವಿದೇಶಕ್ಕೆ ಹಾರ್ತಾರಾ ದರ್ಶನ್..ದಾಸ ಫಾರಿನ್‌ ಟ್ರಿಪ್‌ಗೆ ಕೋರ್ಟ್‌ನಿಂದ ಸಿಗುತ್ತಾ ಅನುಮತಿ?

    May 28, 2025

    ಸಿನಿಮಾದಲ್ಲಿ ಅಮೋಘ ಸಾಧನೆ: ರಾಷ್ಟ್ರಪತಿಯಿಂದ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಅನಂತ್ ನಾಗ್!

    May 27, 2025

    ಜೂ.6ರಂದು ಮಾದೇವ ಸಿನೆಮಾ ರಿಲೀಸ್: ರಾಯರ ದರ್ಶನದ ಬಳಿಕ ಆಂಜನೇಯ ಮಂದಿರದಲ್ಲಿ ವಿನೋದ್ ಪ್ರಭಾಕರ್ ಪೂಜೆ

    May 27, 2025

    ಶ್ರೀಧರ್‌ಗೆ ಹುಡುಗಿಯರ ಸಹವಾಸ ಇತ್ತು..ಶ್ರೀಧರ್ ಸಾವಿನ ಬಳಿಕ ಪತ್ನಿ Audio ವೈರಲ್!‌

    May 27, 2025

    ಕಮಲ್‌ ಹಾಸನ್‌ ವಿರುದ್ಧ ಕನ್ನಡಿಗರು ಕಿಡಿ…ತಮಿಳಿನಿಂದ ಕನ್ನಡ ಭಾಷೆ ಹುಟ್ಟಿದ್ದಾ?

    May 27, 2025

    ಕಿರುತೆರೆಯ ಖ್ಯಾತ ನಟ ಶ್ರೀಧರ್‌ ನಾಯಕ್‌ ವಿಧಿವಶ!

    May 27, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.