Close Menu
Ain Live News
    Facebook X (Twitter) Instagram YouTube
    Monday, June 9
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕುರಿ ಸಾಕಣೆ ಪ್ರಾರಂಭಿಸುವುದು ಹೇಗೆ? ನಿರ್ವಹಣೆ ಮತ್ತು ಆರೈಕೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.!

    By AIN AuthorJune 6, 2024
    Share
    Facebook Twitter LinkedIn Pinterest Email
    Demo

    ಭಾರತ ದ ದಕ್ಷಿಣ ಭಾಗದಲ್ಲಿ ನೆಲೆಸಿರುವ ಕರ್ನಾಟಕ ರಾಜ್ಯವು ತನ್ನಲ್ಲಿರುವ ವಾತಾವರಣ ಹಾಗೂ ಭೂಪ್ರದೇಶಗಳಿಂದಾಗಿ ಒಂದು ಆದರ್ಶಮಯ ಕುರಿಸಾಕಾಣಿಕಾ ಪ್ರದೇಶವಾಗಿ ಗಮನಸೆಳೆಯುತ್ತದೆ. ಸಾಮಾನ್ಯವಾಗಿ ಆಡು ಸಾಕಾಣಿಕೆ ಕಸುಬನ್ನು ಭೂರಹಿತ, ಹಿಂದುಳಿದ ವರ್ಗದವರು ಮತ್ತು ಬಡ ಕೃಷಿಕರು ಸಾಕಣೆ ಮಾಡುವುದನ್ನು ಕಾಣುತ್ತೇವೆ. ರಾಜ್ಯವು ತನ್ನಲ್ಲಿರುವ ವಾತಾವರಣ ಹಾಗೂ ಭೂಪ್ರದೇಶಗಳಿಂದಾಗಿ ಒಂದು ಆದರ್ಶಮಯ ಕುರಿ ಸಾಕಣೆ ಪ್ರದೇಶವಾಗಿ ಗಮನಸೆಳೆಯುತ್ತದೆ.

    ಮೇಕೆ ಅಥವಾ ಕುರಿಗಳು ತಮ್ಮ ಗಡಸುತನ ಹಾಗೂ ವಾತಾವರಣಕ್ಕೆ ತ್ವರಿತವಾಗಿ ಹೊಂದಿಕೊಳ್ಳುವ ಸಾಮರ್ಥ್ಯದಿಂದಾಗಿ ವೈವಿಧ್ಯಮಯ ಪರಿಸರ ಪ್ರಭಾವವುಳ್ಳಂತಹ ಕರ್ನಾಟಕದಲ್ಲಿ ನಿರಾಯಾಸವಾಗಿ ಹೊಂದಿಕೊಳ್ಳುವಂತಹ ಪ್ರಾಣಿಗಳಾಗಿವೆ. ಕುರಿಗಳು ಇತರ ಜಾನುವಾರುಗಳಿಗೆ ಹೋಲಿಸಿದರೆ ಕಡಿಮೆ ಊಟದ ಜೊತೆಗೆ ಪ್ರತಿ ಪೌಂಡಿಗೆ ಹೆಚ್ಚು ಮಾಂಸ ಹಾಗೂ ಹಾಲು ನೀಡುವ ಪ್ರಾಣಿಗಳಾಗಿದ್ದು, ಉತ್ತಮ ಆದಾಯದ ಮೂಲವಾಗಿಯೂ ಗುರುತಿಸಿಕೊಳ್ಳುತ್ತವೆ.

    ಕುರಿ ಸಾಕಣೆ ಮಾಡುವುದು ಹೇಗೆ? : ದನಗಳಿಗೆ ಬೇಕಾಗಿರುವಂತೆ ಕುರಿಗಳನ್ನು ಸಾಕಲು ಹೆಚ್ಚಿನ ಸ್ಥಳಾವಕಾಶದ ಅಗತ್ಯವೂ ಇರುವುದಿಲ್ಲ ಹಾಗೂ ದನಕರುಗಳನ್ನು ಬೆಳೆಸುವಾಗ ತಗಲುವ ವೆಚ್ಚಕ್ಕಿಂತಲೂ ಕಡಿಮೆ ವೆಚ್ಚದಲ್ಲಿ ಕುರಿ ಸಾಕಣೆ ಮಾಡಬಹುದಾಗಿದೆ. ರಾಜ್ಯದಲ್ಲಿ ಕುರಿಗಳನ್ನು ಅವುಗಳ ಮಾಂಸ, ಹಾಲು ಹಾಗೂ ತುಪ್ಪಳಕ್ಕಾಗಿ ಸಾಕಣೆ ಮಾಡಲಾಗುತ್ತದೆ. ಪ್ರದೇಶದಲ್ಲಿ ಕುರಿ ಮಾಂಸ ಅಥವಾ ಮಟನ್ ಜನಪ್ರಿಯ ಮಾಂಸ ಭಕ್ಷ್ಯವಾಗಿದ್ದು, ಸಾಕಷ್ಟು ಆರೋಗ್ಯಕರ ಪೋಷಕಾಂಶಗಳನ್ನೂ ಸಹ ಹೊಂದಿರುತ್ತದೆ. ಅಲ್ಲದೇ ಕುರಿ ಹಾಲಿನ ಉದ್ಯಮವು ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದು, ಅದರಿಂದ ಹಲವಾರು ವೈವಿಧ್ಯಮಯ ಡೈರಿ ಉತ್ಪನ್ನಗಳನ್ನು ಸಹ ಉತ್ಪಾದಿಸಲಾಗುತ್ತದೆ. ಹಾಗಾಗಿ ಕುರಿಗಳಿಗೆ ಸ್ಥಳೀಯವಾಗಿ ಮತ್ತು ವಿದೇಶಗಳಲ್ಲೂ ಸಾಕಷ್ಟು ಬೇಡಿಕೆಯಿದೆ.

    ರಾಜ್ಯದಲ್ಲಿ ಕುರಿ ಸಾಕಣೆಯ ಸವಾಲುಗಳೇನು? : ಸಾಕಾಣಿಕೆ ಉದ್ಯಮ ಆಕರ್ಷಕವಾಗಿದ್ದರೂ ಅದರಲ್ಲಿರುವ ಅದರದ್ದೇ ಆದ ಸವಾಲು ಇರುವುದು ಸಹಜ. ಕರ್ನಾಟಕದಲ್ಲಿ ಕುರಿ ಸಾಕಾಣಿಕೆಗೆ ಸಂಬಂಧಿಸಿದಂತೆ ಇರುವ ಮುಖ್ಯ ಸವಾಲು ಎಂದರೆ ಸಾಕಲು ಯೋಗ್ಯವಾದ ಕುರಿ ತಳಿಯನ್ನು ಹುಡುಕುವುದು ಕಷ್ಟ. ಈ ಉದ್ಯಮದಲ್ಲಿ ಯಶಸ್ಸು ಪಡೆಯಲು ಉದ್ಯಮಿಗಳು ಆರೋಗ್ಯಕರವಾದ ಹಾಗೂ ಗುಣಮಟ್ಟದ ಕುರಿ ತಳಿಗಳನ್ನು ಗುರುತಿಸಬಹುದಾಗಿದೆ. ಈ ಅಂಶವನ್ನು ಗಮನದಲ್ಲಿರಿಸಿ ಕೊಂಡು ರಾಜ್ಯ ಸರ್ಕಾರವು ತಳಿ ಅಭಿವೃದ್ಧಿ ಕೇಂದ್ರಗಳು ಹಾಗೂ ಗುಣಮಟ್ಟದ ಕುರಿ ಫಾರ್ಮ್ ಗಳನ್ನು ಸ್ಥಾಪಿಸಿದೆ.

    ಇದರ ಜೊತೆಗೆ ಸರ್ಕಾರವು ಕುರಿ ಸಾಕಾಣಿಕೆಯಲ್ಲಿ ತೊಡಗುವ ರೈತರಿಗೆ ವಿವಿಧ ಬಗೆಯ ಪ್ರೋತ್ಸಾಹದ ಬೆಂಬಲಗಳನ್ನೂ ಸಹ ಒದಗಿಸುತ್ತದೆ. ಇದು ತರಬೇತಿ ಕಾರ್ಯಕ್ರಮಗಳು, ಸಾಕಣೆ ತಂತ್ರಗಾರಿಕೆಗಳು, ಆರ್ಥಿಕ ಹಾಗೂ ತಾಂತ್ರಿಕ ನೆರವುಗಳನ್ನು ಒಳಗೊಂಡಿದೆ. ಜೊತೆಗೆ ಸರ್ಕಾರವು ರೈತರಿಗೆ ಪ್ರೋತ್ಸಾಹ ಧನ ಹಾಗೂ ಸಬ್ಸಿಡಿಗಳನ್ನು ಸಹ ನೀಡಲಾಗುತ್ತದೆ ಎಂದು ಹೆಬ್ಬಾಳದ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಕರ್ನಾಟಕದಲ್ಲಿ ಪ್ರಸ್ತುತ ಕುರಿ ಸಾಕಾಣಿಕೆ ಉದ್ಯಮವು ಒಂದು ಮಹತ್ವದ ಉದ್ಯಮವಾಗಿ ಗುರುತಿಸಿಕೊಂಡಿದೆ. ಈ ಉದ್ಯಮವು ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಷ್ಟೇ ಅಲ್ಲದೆ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಜೀವನೋಪಾಯದ ಮಾರ್ಗವಾಗಿಯೂ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.

    ಕುರಿ ಸಾಕಣೆ ಪ್ರಾರಂಭಿಸುವುದು ಹೇಗೆ? : ಈ ಉದ್ಯಮ ಆರಂಭಿಸುವುದಕ್ಕೂ ಮುನ್ನ ಈ ಕೆಳಗೆ ನೀಡಲಾದ ಅಂಶಗಳ ಬಗ್ಗೆ ಗಮನಹರಿಸುವುದು ಮಹತ್ತರವಾಗಿದೆ.

    ಕುರಿಗಳ ಶೆಲ್ಟರ್ : ಕುರಿಗಳ ಮೇಲೆ ವಾತಾವರಣದ ಬದಲಾವಣೆಗಳು ಸಾಕಷ್ಟು ಪ್ರಭಾವ ಬೀರುವುದರಿಂದ ಕುರಿಗಳು ವಾಸಿಸಲು ಶೆಲ್ಟರ್ ನಿರ್ಮಾಣ ಪ್ರಮುಖವಾಗಿದೆ. ಹೀಗೆ ನಿರ್ಮಿಸಲಾಗುವ ಕುರಿಗಳ ವಾಸ ಸ್ಥಳವು ಒಣಗಿರಬೇಕು ಹಾಗೂ ಸ್ವಚ್ಛವಾಗಿರಬೇಕು. ಸಾಕಷ್ಟು ಗಾಳಿ – ಬೆಳಕು ಆಡುವಂತಿರಬೇಕು. ಇಲ್ಲಿ ಮುಖ್ಯವಾದ ವಿಷಯವೆಂದರೆ, ಅದು ಯಾವಾಗಲೂ ತೆರೆದಿರುವ ಅಥವಾ ಮುಚ್ಚಿರುವ ಸ್ಥಿತಿಯಲ್ಲಿರಬಾರದು. ಬದಲಾಗಿ ಭಾಗಶಃ ಮಾತ್ರ ಮುಚ್ಚಿರಬೇಕು. ಕುರಿ ಶೆಲ್ಟರ್ ಅಗಲವು 20 ಅಡಿ ಮೀರುವಂತಿರಬಾರದು. ಆದರೆ ಅದು ಎಷ್ಟು ಬೇಕಾದರೂ ಉದ್ದವಾಗಿರಬಹುದು. ಅಲ್ಲದೆ ಕುರಿಗಳಿಗೆ ಸದಾ ಕಾಲ ಕುಡಿಯಲು ನೀರಿನ ವ್ಯವಸ್ಥೆ ಇರಬೇಕು.

    ಸಾಮಾನ್ಯವಾಗಿ ಎಲ್ಲರೂ ಉತ್ತಮ ತಳಿಯ ಕುರಿಗಳನ್ನು ಸಾಕಾಣಿಕೆ ಮಾಡಲು ಬಯಸುತ್ತಾರೆ. ಪ್ರದೇಶಗಳಿಂದ ಪ್ರದೇಶಕ್ಕೆ ತಳಿಗಳು ಬದಲಾದ ಹಾಗೆ ಅವುಗಳ ಗುಣಮಟ್ಟದಲ್ಲೂ ವ್ಯತ್ಯಾಸ ಕಂಡುಬರುತ್ತವೆ. ಹಾಗಾಗಿ ಕರ್ನಾಟಕದ ವಾತಾವರಣಕ್ಕೆ ಹೊಂದುವಂತೆ ಸೂಕ್ತವಾಗಿರುವ ತಳಿಗಳನ್ನು ಗುರುತಿಸಿ ಸಾಕುವುದು ಉತ್ತಮ. ಇದಕ್ಕಾಗಿ ಸಂಬಂಧಿಸಿದ ತಾಂತ್ರಿಕ ಅಧಿಕಾರಿಗಳಿಂದ ಸಲಹೆ ಪಡೆಯಬಹುದು. ಆರಂಭಿಕ ಹಂತದಲ್ಲಿ ಕರ್ನಾಟಕಕ್ಕೆ ಸ್ಥಳೀಯವಾಗಿರುವ ಕುರಿಗಳನ್ನು ಸಾಕುವುದು ಉತ್ತಮ.

    Cardamom: ಕಡಿಮೆ ಬಂಡವಾಳ, ಅಧಿಕ ಲಾಭ..! ಈ ಏಲಕ್ಕಿ ಬೆಳೆಯಿಂದ ಲಕ್ಷಗಟ್ಟಲೆ ಲಾಭ!

    ರಾಜ್ಯದ ವಾತಾವರಣಕ್ಕೆ ಸೂಕ್ತವಾಗಿರುವ ತಳಿಗಳು: ಮಲಬರಿ, ಸಿರೋಹಿ, ಒಸ್ಮಾನಾಬಾದಿ, ಸನ್ನೆನ್, ಡಕ್ಕಣಿ, ನಂದಿದುರ್ಗ, ಬಿದರಿ ಹಾಗೂ ಅನೇಕ ದೇಶಿ ತಳಿಗಳು ಕಂಡು ಬರುತ್ತವೆ.

    ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಮುಖ್ಯ ತಳಿಗಳು ಮಧ್ಯಮ ಗಾತ್ರ ಮೈಕಟ್ಟು ಹೊಂದಿದ್ದು, ಕಪ್ಪು ಕಂದು ಅಥವಾ ಬಿಳಿ ಬಣ್ಣದ್ದಾಗಿವೆ. ಇವುಗಳ ಉತ್ಪಾದನೆ ಸಾಧಾರಣವಾಗಿದ್ದು, ಉತ್ತಮ ಮಾಂಸವನ್ನು ಕೊಡುವ ಉಭಯ ತಳಿಗಳು ಆಗಿರುತ್ತವೆ. ವಿದೇಶಿ ತಳಿಗಳಾದ ಟೋಗನ್ ಬರ್ಗ್, ಸಾನನ್ ಹಾಗೂ ಆಲೈನ್ ತಳಿಗಳಿಂದ ಸಂಕರಣಗೊಳಿಸಿ ತಳಿ ಅಭಿವೃದ್ಧಿ ಮಾಡಲು ಸಾಧ್ಯವಿದೆ.

    ಗ್ರಾಮೀಣ ನೈಸರ್ಗಿಕ ವಾತಾವರಣಕ್ಕೆ ಅನುಗುಣವಾಗಿ ಆಡುಗಳಿಗೆ ಪ್ರತ್ಯೇಕವಾದ ಮನೆಗಳ ಅವಶ್ಯಕತೆ ಇರುವುದಿಲ್ಲ. ಒಂದು ಅಡಿಗೆ 1.5 ರಿಂದ 2 ಚ. ಮೀ. ಸ್ಥಳಾವಕಾಶ ಬೇಕು. ಆಡುಗಳ ವಸತಿಯಲ್ಲಿ ವಿಶೇಷವಾಗಿ ನೆಲ ಒಣದಾಗಿರಬೇಕು. ಮತ್ತು ನಿತ್ಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಆಡುಗಳಿಗೆ ಕುಡಿಯಲು ಸ್ವಚ್ಛ ನೀರಿನ ಸೂಕ್ತ ವ್ಯವಸ್ಥೆ ಮತ್ತು ಮೇವು ದಾಣಿ ಹಾಕಲು ಗೊದಲಿಯ ವ್ಯವಸ್ಥೆ ಮಾಡಬೇಕು.

    ಆಹಾರವೇನು : ಇತ್ತೀಚಿಗೆ ಸುಧಾರಿತ ಪದ್ಧತಿಯಲ್ಲಿ ಆಡುಗಳನ್ನು ಒಂದೇ ಸ್ಥಳದಲ್ಲಿ ಕಟ್ಟಿ ಜೋಪಾನ ಮಾಡುವ ಪದ್ಧತಿ ಜನಪ್ರಿಯವಾಗಿದೆ. ಈ ಪದ್ಧತಿಯಲ್ಲಿ ಒಂದು ಆಡಿಗೆ ಕನಿಷ್ಠ 6 ಚ. ಅಡಿ ಚಾವಣಿ ಸ್ಥಳ ಮತ್ತು ಕನಿಷ್ಠ 30 ಚ. ಅಡಿ. ಚಾವಣಿ ಇಲ್ಲದ ಸ್ಥಳವನ್ನು ಅನುಕೂಲ ಮಾಡಿ ವಸತಿಯನ್ನು ಕಲ್ಪಿಸಬೇಕು. ವಿವಿಧ ಮೇವಿನ ಸೌಕರ್ಯವನ್ನು ಮಾಡಿ ಒಂದು ಆಡಿಗೆ ಕನಿಷ್ಠ 4 ರಿಂದ 6 ಕಿ.ಗ್ರಾಂ ಹಸಿರು ಮೇವು ನಿತ್ಯ ತಿನ್ನಿಸಬೇಕು. ಹಸಿರು ಮೇವಿನ ಕೊರತೆ ಇದ್ದಲ್ಲಿ ಉತ್ತಮ ಗುಣಮಟ್ಟದ 1 ಕಿ. ಗ್ರಾಂ ಒಣ ಮೇವು ತಿನ್ನಿಸಬೇಕು. ಜೊತೆಗೆ ಬೆಳವಣಿಗೆಗೆ ಅನುಕೂಲವಾಗುವಂತಹ ಕಡಿಮೆ ದರದಲ್ಲಿ ದಾಣಿ ಮಿಶ್ರಣ ಮಾಡಿ 100 ರಿಂದ 200 ಗ್ರಾಂ ತಿನ್ನಿಸಬೇಕು. ಯಾವಾಗಲೂ ಸ್ವಚ್ಛವಾದ ಮೇವಿನ ಸೌಲಭ್ಯವನ್ನು ಕಲ್ಪಿಸಬೇಕು.

    ಕುರಿಸಾಕಾಣಿಕೆ ಉದ್ಯಮದ ಮಹತ್ತರ ಗುರಿ, ಕುರಿಗಳ ತೂಕವನ್ನು ಹೆಚ್ಚಿಸುವುದಾಗಿದೆ. ನೀವು ಕೊಡುವ ಆಹಾರದ ಗುಣಮಟ್ಟವು ಕುರಿಗಳ ಒಟ್ಟಾರೆ ಬೆಳವಣಿಗೆ ಹಾಗೂ ಅವು ಪಡೆಯುವಂತಹ ತೂಕವನ್ನು ಪ್ರಭಾವಿಸುತ್ತದೆ. ಇದಕ್ಕೆ ನೀಡಲಾಗುವ ಆಹಾರವು ಸಾಕಷ್ಟು ಹಸಿರು, ಒಣ ಹಾಗೂ ಪೊಷಕಾಂಶಯುಕ್ತವಾಗಿರಬೇಕು.

    ಕುರಿಗಳ ನಿರ್ವಹಣೆ ಮತ್ತು ಆರೈಕೆ : ಶೆಲ್ಟರ್ ಅನ್ನು ನಿರ್ಮಿಸಿ ಕುರಿಗಳನ್ನು ಸಾಕಿಕೊಂಡು ಹೋದರಾಯಿತು ಎನ್ನುವಷ್ಟು ಸುಲಭದ ಮಾತಲ್ಲ ಇದು. ಕುರಿಗಳ ನಿರ್ವಹಣೆ ಹಾಗೂ ಅವುಗಳ ಆರೈಕೆಯು ಈ ಉದ್ಯಮದಲ್ಲಿ ಗಮನಾರ್ಹವಾಗಿ ನಿರ್ವಹಿಸಬೇಕಾದ ಜವಾಬ್ದಾರಿಯಾಗಿದೆ. ಕುರಿಗಳು ಒಣ ಪ್ರದೇಶದಲ್ಲಿ ಹೆಚ್ಚಾಗಿ ಇರ ಬಯಸುತ್ತವೆ. ಹಾಗಾಗಿ ಅವು ಇರುವ ಪ್ರದೇಶ ಡ್ರೈ ಆಗಿರುವುದಲ್ಲದೆ ಸ್ವಚ್ಛ ಹಾಗೂ ಹೈಜೆನಿಕ್ ಆಗಿರುವಂತೆ ನೋಡಿಕೊಳ್ಳಬೇಕಾಗುತ್ತದೆ.

    ಇನ್ನು ಕುರಿ, ಮೇಕೆ, ಕೋಳಿ, ಪಶು ಆಹಾರ ಮತ್ತು ಮೇವು ಅಭಿವೃದ್ಧಿಯಲ್ಲಿ ಗ್ರಾಮೀಣ ಯುವಕರನ್ನು ಸ್ವಯಂ ಸಕ್ರಿಯಗೊಳಿಸುವುದು ಹಾಗೂ ಈ ಕ್ಷೇತ್ರದಲ್ಲಿ ಉದ್ಯಮಶೀಲರನ್ನು ಪ್ರೋತ್ಸಾಹಿಸುವ ಹಿನ್ನಲೆ ಕೇಂದ್ರ ಸರ್ಕಾರ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆ ಜಾರಿಗೊಳಿಸಿದ್ದು, ಈ ಯೋಜನೆಯ 2021-22 ನೇ ಸಾಲಿನಿಂದ 2025-26 ನೇ ಸಾಲಿನವರೆಗೆ ಜಾರಿಯಲ್ಲಿರುತ್ತದೆ. ಈ ಯೋಜನೆ ಅನುಷ್ಠಾನ ಜಾರಿಗೆ ಮೂಲ ಬಂಡವಾಳದಲ್ಲಿ ಶೇ. 50 ರಷ್ಟು ಸಹಾಯಧನವನ್ನು ಎರಡು ಕಂತುಗಳ ರೂಪದಲ್ಲಿ ಫಲಾನುಭವಿಗಳಿಗೆ ನೀಡಲಾಗುತ್ತದೆ.

    ದೇಶಿಯ ಆಡುಗಳು ಬೇರೆ ಬೇರೆ ಪರಿಸರ ಹಾಗೂ ವಾತಾವರಣಗಳಿಗೆ ಹೊಂದಿಕೊಳ್ಳುವ ಗುಣ ಪಡೆದಿರುತ್ತವೆ. ಹೆಣ್ಣು ಆಡು ಒಂದು ವರ್ಷ ವಯಸ್ಸಿನಲ್ಲಿ ಗರ್ಭ ಧರಿಸಬಹುದು. ಒಂದು ಉತ್ತಮ ಆಡು 6 ರಿಂದ 8 ವರ್ಷಗಳವರೆಗೆ ಮರಿಗಳನ್ನು ಹಾಕಬಹುದು. ಮತ್ತು ಹಾಲನ್ನು ಕೊಡಬಲ್ಲದು. ನಮ್ಮ ದೇಶಿ ಆಡು ಒಂದು ಸೂಲಿನಲ್ಲಿ ಸುಮಾರು 60-90 ಕಿ.ಗ್ರಾಂ ಹಾಲು ಅಲ್ಲದೆ, ಉತ್ತಮ ಗುಣಮಟ್ಟದ ಮಾಂಸವನ್ನು ಕೊಡುತ್ತವೆ. ಆದ್ದರಿಂದಲೇ ಅದನ್ನು ಬಡವರ ಕಾಮಧೇನು ಎಂದು ಹೇಳಲಾಗುತ್ತದೆ.

    Demo
    Share. Facebook Twitter LinkedIn Email WhatsApp

    Related Posts

    ಸೆಪ್ಟಂಬರ್ ವೇಳೆಗೆ ತಿರುಪತಿಯಲ್ಲಿ ಯಾತ್ರಿಗಳಿಗೆ ಗೆಸ್ಟ್ ಹೌಸ್ ರೆಡಿ..ಆ.15ರ ಬಳಿಕ ಮುಜರಾಯಿ ಇಲಾಖೆಯಲ್ಲಿ ಪ್ಲಾಸ್ಟಿಕ್ ನಿಷೇಧ: ರಾಮಲಿಂಗ ರೆಡ್ಡಿ

    June 9, 2025

    ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ: ಸಚಿವ ಹೆಚ್.ಕೆ.ಪಾಟೀಲ್

    June 9, 2025

    ಅವಳಿಗೆ 36, ಇವನಿಗೆ 25.. OYO ರೂಂಗೆ ಕರೆದೊಯ್ದು ಹತ್ಯೆ ಮಾಡಿದ್ಯಾಕೆ..? ಇಲ್ಲಿದೆ ನೋಡಿ ಅಸಲಿ ಕಾರಣ..

    June 9, 2025

    Stampede: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಕೇಸ್: ಹೈಕೋರ್ಟ್ ಮೆಟ್ಟಿಲೇರಿದ RCB

    June 9, 2025

    ಸಿನಿಮಾ ರೂಪದಲ್ಲಿ ಬರಲಿದೆ ʼವೃಕ್ಷಮಾತೆʼ ಜೀವನಗಾಥೆ..ಸಾಲುಮರದ ತಿಮ್ಮಕ್ಕನ ಪಾತ್ರದಲ್ಲಿ ಯಾರು?

    June 9, 2025

    RCB Parade Stampede Case: ನಾಳೆ ದೆಹಲಿಗೆ ತೆರಳಲಿರುವ ಸಿಎಂ ಸಿದ್ದರಾಮಯ್ಯ!

    June 9, 2025

    Namo Drone Didi Scheme: ಮಹಿಳೆಯರಿಗೆ ಕೇಂದ್ರದಿಂದ ಗುಡ್ ನ್ಯೂಸ್: 15 ಸಾವಿರ ನೀಡುವುದರ ಜೊತೆಗೆ 15 ದಿನಗಳ ಉಚಿತ ತರಬೇತಿ!

    June 9, 2025

    Bengaluru Stampede: ಬೆಂಗಳೂರಿನಲ್ಲಿ ಕಾಲ್ತುಳಿತ ಪ್ರಕರಣ: ಗಾಯಗೊಂಡವರಿಗೆ ನೋಟಿಸ್ ಜಾರಿ

    June 9, 2025

    ಒಂದು ಕ್ಷಣವೂ ಅಧಿಕಾರದಲ್ಲಿ ಇರಲು ಈ ಸರ್ಕಾರಕ್ಕೆ ನೈತಿಕತೆ ಇಲ್ಲ: ಪರಿಷತ್ ಶಾಸಕ ಟಿ ಎ ಶರವಣ ಆಕ್ರೋಶ

    June 9, 2025

    ಇಬ್ಬರು ಮಕ್ಕಳ ತಾಯಿ ಜೊತೆ ಅಕ್ರಮ ಸಂಬಂಧ: ಓಯೋ ರೂಮಿಗೆ ಕರೆಸಿ ಪ್ರಿಯತಮೆ ಹತ್ಯೆಗೈದ ಟೆಕ್ಕಿ..!

    June 9, 2025

    Corona Virus: ದೇಶದಲ್ಲಿ ಮುಂದುವರೆದ ಕೊರೋನಾ ವೈರಸ್ ಹಾವಳಿ: 24 ಗಂಟೆಗಳಲ್ಲಿ 358 ಜನರಲ್ಲಿ ಸೋಂಕು ದೃಢ

    June 9, 2025

    Gold Rate Today: ವಾವ್.. ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ! ಬಂಗಾರಪ್ರಿಯರು ಫುಲ್ ಖುಷ್

    June 9, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.