Close Menu
Ain Live News
    Facebook X (Twitter) Instagram YouTube
    Tuesday, June 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ನಿತ್ಯ ಟ್ಯಾಂಕ್ ನೀರಲ್ಲಿ ಸ್ನಾನ ಮಾಡ್ತಿದ್ದೀರಾ? ಹುಷಾರ್, ಹಾರ್ಟ್ ಅಟ್ಯಾಕ್ ಗ್ಯಾರಂಟಿ ಅಂತಿದ್ದಾರೆ ವೈದ್ಯರು!

    By AIN AuthorDecember 15, 2024
    Share
    Facebook Twitter LinkedIn Pinterest Email
    Demo

    ಸಾಮಾನ್ಯವಾಗಿ ಕೆಲವರು ಕಾಲಗಳಿಗೆ ಅನುಗುಣವಾಗಿ ತಣ್ಣೀರು ಅಥವಾ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ. ಕೆಲವರಿಗೆ ಎಷ್ಟೇ ಚಳಿ ಇರಲಿ ಅಥವಾ ಎಷ್ಟೇ ಸೆಕೆ ಇರಲಿ, ಅವರಿಗೆ ಸ್ನಾನಕ್ಕೆ ಬಿಸಿ ನೀರೇ ಬೇಕು. ಆದರೆ, ಇನ್ನೂ ಕೆಲವೊಬ್ಬರಿರುತ್ತಾರೆ. ಯಾವ ಚಳಿಯಿದ್ದರೂ, ತಣ್ಣೀರ ಸ್ನಾನವೇ ಆಗಬೇಕು. ಆಗ ಮಾತ್ರ ಅವರಿಗೆ ಸಮಾಧಾನ.ಇದು ಒಳ್ಳೆಯದಾ? ಅಥವಾ ಎಲ್ಲಾ ಕಾಲದಲ್ಲೂ ತಣ್ಣೀರಿನ ಸ್ನಾನ ಮಾಡುವುದರಿಂದ ಏನಾದರೂ ಅಪಾಯವಿದೆಯೇ? ಖಂಡಿತಾ ಇದೆ ಎನ್ನುತ್ತಾರೆ ತಜ್ಞರು.

    ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಇರಲ್ಲ ಕರೆಂಟ್! ನಿಮ್ಮ ಏರಿಯಾ ಇದೇನಾ ಚೆಕ್ ಮಾಡಿ?

    ತಣ್ಣೀರು ಸ್ನಾನ ಯಾವುದೇ ರೀತಿಯ ಹಾನಿ ಆಗುವುದಿಲ್ಲ ಎಂದು ಅನೇಕ ಮಂದಿ ಭಾವಿಸಿದ್ದಾರೆ. ಆದರೆ ಹೀಗೆ ಮಾಡುವುದು ಆರೋಗ್ಯಕ್ಕೆ ತುಂಬಾ ಡೆಂಜರ್​. ಆರೋಗ್ಯ ತಜ್ಞರ ಪ್ರಕಾರ, ತಣ್ಣಗಿರುವ ಟ್ಯಾಂಕ್ ನೀರಿನಲ್ಲಿ ಸ್ನಾನ ಮಾಡುವುದರಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತು ಅನೇಕ ಗಂಭೀರ ಉಸಿರಾಟದ ಸಮಸ್ಯೆಗಳು ಉಂಟಾಗಬಹುದು. ಕೆಲವರಿಗೆ ತಣ್ಣೀರು ಹೆಚ್ಚು ಅಪಾಯಕಾರಿ ಆಗಿದೆ. ಇನ್ನೂ ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಹೃದ್ರೋಗ ತಜ್ಞರಿಂದ ತಿಳಿದುಕೊಳ್ಳೋಣ ಬನ್ನಿ.

    ಈ ಬಗ್ಗೆ ತಜ್ಞರೊಬ್ಬರು ಮಾತನಾಡಿ, ಚಳಿಗಾಲದಲ್ಲಿ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಅಪಾಯ ಸುಮಾರು 20-30% ರಷ್ಟು ಹೆಚ್ಚು. ಇದು ತಾಪಮಾನದಲ್ಲಿನ ಕುಸಿತದಿಂದಾಗಿ ಉಂಟಾಗಬಹುದು.

    ಈ ಸೀಸನ್​ನಲ್ಲಿ ಟ್ಯಾಂಕ್​ನ ತಣ್ಣೀರಿನಿಂದ ಸ್ನಾನ ಮಾಡಿದರೆ, ತಾಪಮಾನದಲ್ಲಿನ ವ್ಯತ್ಯಾಸವು ಹೃದಯದ ರಕ್ತನಾಳಗಳನ್ನು ಕುಗ್ಗಿಸುತ್ತದೆ. ಹೀಗಾಗಿ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಬೇಕು. ಇಂತಹ ವೇಳೆ ಹೃದಯದ ಅಪಧಮನಿಗಳಲ್ಲಿ 30 ರಿಂದ 40% ರಷ್ಟು ಅಡಚಣೆ ಉಂಟಾದರೆ ಹೃದಯದಲ್ಲಿ ರಕ್ತನಾಳಗಳ ಹರಿವಿಗೆ ಅಡ್ಡ ಉಂಟಾಗಬಹುದು ಮತ್ತು ಹೃದಯಾಘಾತ ಉಂಟಾಗಬಹುದು.

    ವೈದ್ಯರು ಹೇಳುವ ಪ್ರಕಾರ, ತುಂಬಾ ತಣ್ಣನೆಯ ನೀರಿನಿಂದ ಸ್ನಾನ ಮಾಡುವುದರಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಜೊತೆಗೆ ನ್ಯುಮೋನಿಯಾ ಮತ್ತು ಉಸಿರಾಟದ ಕಾಯಿಲೆಗಳು ಬರಬಹುದು. ಅಸ್ತಮಾ ಅಥವಾ ಇತರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರು ತಣ್ಣೀರಿನಲ್ಲಿ ಸ್ನಾನ ಮಾಡುವುದನ್ನು ತಪ್ಪಿಸಬೇಕು.

    ತಣ್ಣೀರು ದೇಹದಲ್ಲಿ ತಂಪನ್ನು ಉಂಟು ಮಾಡುತ್ತದೆ. ಇದರಿಂದಾಗಿ ಉಸಿರಾಟದ ಕೊಳವೆಗಳು ಕುಗ್ಗುತ್ತವೆ. ಕೊನೆಗೆ ಇದು ಉಸಿರಾಟದ ಸಮಸ್ಯೆಯನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ ಸಾಧ್ಯವಾದಷ್ಟು ಜನರು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡಬೇಕು. ಅದರಲ್ಲೂ ತಣ್ಣೀರು ಮಕ್ಕಳು ಮತ್ತು ವೃದ್ಧರ ದೇಹದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ತಣ್ಣೀರು ವಯಸ್ಸಾದವರಲ್ಲಿ ಲಘೂಷ್ಣತೆಗೆ ಕಾರಣವಾಗಬಹುದು, ಇದು ಆರೋಗ್ಯಕ್ಕೆ ಮಾರಕವಾಗಬಹುದು.

    ತಣ್ಣೀರಿನಿಂದ ಸ್ನಾನ ಮಾಡುವುದಷ್ಟೇ ಅಲ್ಲ, ವಿಪರೀತ ಚಳಿ ಇರುವಾಗ ಬಟ್ಟೆ ತೊಡದೇ ಮನೆಯಿಂದ ಹೊರಗೆ ಬರಬಾರದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹೀಗೆ ಮಾಡುವುದರಿಂದ, ದೇಹದಲ್ಲಿ ರಕ್ತನಾಳಗಳು ಕುಗ್ಗುವಿಕೆ ಮತ್ತು ಅಧಿಕ ರಕ್ತದೊತ್ತಡ ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತದೆ.

    ವಿಶೇಷವಾಗಿ ಹೃದ್ರೋಗ ಅಥವಾ ಇತರ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಚಳಿ ಇರುವಾಗ ವಿಶೇಷ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಹೀಗಿದ್ದರೂ ಯಾರಾದರೂ ತುಂಬಾ ತಣ್ಣನೆಯ ನೀರಿನಿಂದ ಸ್ನಾನ ಮಾಡುವ ತಪ್ಪನ್ನು ಮಾಡಿದರೆ, ಸರಿಯಾದ ಬೆಚ್ಚಗಿನ ಬಟ್ಟೆಗಳನ್ನು ಧರಿಸಬೇಕು ಮತ್ತು ಕೊಠಡಿಯನ್ನು ಹೀಟರ್​ನ ಸಹಾಯದಿಂದ ಬೆಚ್ಚಗಿರಿಸಬೇಕು. ಇದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರಬಹುದು ಎಂದು ಹೇಳಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಮಂಗಳವಾರ ಸಂಜೆ ಹೀಗೆ ಮಾಡಿದ್ರೆ ಕಷ್ಟಗಳೆಲ್ಲಾ ಕ್ಷಣಾರ್ಧದಲ್ಲಿ ಮಾಯವಾಗತ್ತೆ!

    June 24, 2025

    ಬೆಳಗ್ಗೆ ಎದ್ದ ಕೂಡಲೇ ತಲೆನೋವು ಬರುತ್ತಾ!? ಹಾಗಿದ್ರೆ ರಾತ್ರಿ ಮಾಡುವ ಈ ತಪ್ಪು ಕಾರಣ!

    June 23, 2025

    ನಿಮಗಿದು ಗೊತ್ತಾ!? ಕರಿಬೇವಿನ ಎಲೆಗಳನ್ನು ನೆನೆಸಿ ನೀರು ಕುಡಿಯುವುದರಿಂದ, ಸಿಗುವ ಆರೋಗ್ಯ ಬೆನಿಫಿಟ್ ಎಷ್ಟು ಗೊತ್ತಾ!?

    June 23, 2025

    ಒಂದೇ ತಿಂಗಳಲ್ಲಿ ಹೊಟ್ಟೆಯ ಕೊಬ್ಬು ಕರಗಿಸಬೇಕಾ? ಹಾಗಿದ್ರೆ ಏಲಕ್ಕಿಯನ್ನು ಹೀಗೆ ತಿನ್ನಿರಿ!

    June 23, 2025

    ಜಮ್ಮುವಿನಲ್ಲಿ ಲ್ಯಾಂಡ್ ಆಗದೆ ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್..! ಯಾಕೆ ಗೊತ್ತಾ..?

    June 23, 2025

    Milk For Health: ನೀವು ಜಾಸ್ತಿ ಹಾಲು ಕುಡಿತೀರಾ? ಹಾಗಾದ್ರೆ ಈ ವಿಚಾರ ಮೊದ್ಲು ತಿಳಿದುಕೊಳ್ಳಿ!

    June 23, 2025

    IndiGo Pilot: ಪೈಲಟ್ ಆಗಲು ನೀನು ಯೋಗ್ಯನಲ್ಲ, ಹೋಗಿ ಸ್ಯಾಂಡಲ್ ಹೊಲಿಯಿರಿ: ಹಿರಿಯ ಅಧಿಕಾರಿಗಳಿಂದ ಕಿರುಕುಳ!

    June 23, 2025

    ಈ ಕಾಳು ನೆನೆಸಿದ ನೀರು ಕುಡಿದ್ರೆ ಸಂಪೂರ್ಣ ನಿಯಂತ್ರಣವಾಗುತ್ತೆ ಬ್ಲಡ್ ಶುಗರ್!

    June 23, 2025

    ಸಾರ್ವಜನಿಕರೇ ಗಮನಿಸಿ.. ಹೊಸ ರೀತಿಯ ವಂಚನೆ: ಕೆಲವೇ ಸೆಕೆಂಡುಗಳಲ್ಲಿ 45 ಲಕ್ಷ ರೂ. ಮಾಯ!

    June 23, 2025

    ಗೋಲ್ಡ್ ಬೆಲೆಯಲ್ಲಿ ಇಳಿಕೆ! ದೇಶದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ಮಾಹಿತಿ

    June 23, 2025

    ನಿಂಬೆ ಸಿಪ್ಪೆ ಬಿಸಾಕೋ ಮುನ್ನ ಈ ಸ್ಟೋರಿ ನೋಡಿ: ಇದರಿಂದಾಗುವ ಲಾಭ ಎಷ್ಟು ಗೊತ್ತಾ?

    June 23, 2025

    ನಿರುದ್ಯೋಗಿಗಳಿಗೆ ಗುಡ್ ನ್ಯೂಸ್: ಸೆಂಟ್ರಲ್ ಬ್ಯಾಂಕಿನಲ್ಲಿ 4500 ಹುದ್ದೆಗಳು ಖಾಲಿ.. ಅರ್ಹರು ಇಂದೇ ಅಪ್ಲೈ ಮಾಡಿ!

    June 22, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.