ಕಾರವಾರ:- ಗರ್ಭಿಣಿ ಹಸುವಿನ ತಲೆ ಕಡಿದು ಮಾಂಸ ಕದ್ದೊಯ್ದಿದ್ದ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ತನಿಖೆ ವೇಳೆ ಶಾಕಿಂಗ್ ವಿಚಾರ ಬೆಳಕಿಗೆ ಬಂದಿದೆ.
ಕನ್ನಡಪರ ಹೋರಾಟಗಾರರಿಗೆ ಸಿಹಿ ಸುದ್ದಿ: ಎಲ್ಲಾ ಕೇಸ್ ವಾಪಸ್ ಎಂದ ಸಿದ್ದರಾಮಯ್ಯ!
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿ ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ಮಾಂಸ ಕದ್ದೊಯ್ದಿದ್ದ ಪ್ರಕರಣ ಸಂಬಂಧ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ. ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ಆಘಾತಕಾರಿ ವಿಷಯ ಬಯಲಾಗಿದೆ. ಕಳೆದ 1 ವರ್ಷದಲ್ಲಿ ಸಾಲ್ಕೋಡ ಸುತ್ತಮುತ್ತ 100ಕ್ಕೂ ಹೆಚ್ಚು ಹಸುಗಳು ನಿಗೂಢವಾಗಿ ನಾಪತ್ತೆ ಆಗಿದ್ದು, ಗೋಕಳ್ಳರು ಇದರ ಹಿಂದಿರುವ ಸಂಶಯ ಮೂಡಿದೆ.
ಮತ್ತೊಂದು ವಿಷ್ಯವೆಂದರೆ, ಇಲ್ಲಿ ಚಿರತೆ ಕಾಟವೂ ಇದೆ. ಇಷ್ಟು ದಿನ ಚಿರತೆಯೇ ಹಸುಗಳನ್ನು ಬೇಟೆ ಆಡುತ್ತಿದೆ ಎಂದು ಜನರು ಭಾವಿಸಿದ್ದರು. ಹೀಗಾಗಿ ಸಂಜೆ 5 ಗಂಟೆ ಒಳಗೆ ಹಸುಗಳನ್ನು ಮನೆಯತ್ತ ಹೊಡೆದುಕೊಂಡು ಬರುತ್ತಿದ್ದರು. ಆದರೆ ಈಗ, ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದ ಪ್ರಕರಣದ ಬಳಿಕ ಕಣ್ಮರೆ ಆಗಿರುವ ಹಸುಗಳ ಹಿಂದೆ ಗೋಕಳ್ಳರ ಕೈವಾಡ ಇರುವ ಅನುಮಾನ ಉಂಟಾಗಿದೆ. ಹೀಗಾಗಿ 2 ವಾರಗಳಲ್ಲಿ ನಾಪತ್ತೆ ಆಗಿರುವ ಹಸುಗಳ ಮಾಲೀಕರು ದೂರು ನೀಡುವಂತೆ ಪೊಲೀಸರು ಸೂಚಿಸಿದ್ದಾರೆ. ಇದೀಗ 4 ಕೇಸ್ ದಾಖಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಎರಡು ವಾರಗಳಲ್ಲಿ 5 ಹೆಚ್ಚು ಹಸುಗಳನ್ನು ಮಾಂಸಕ್ಕಾಗಿ ಕದ್ದು ಹತ್ಯೆ ಮಾಡಿರುವ ಬಗ್ಗೆ ಆರೋಪಿಗಳು ಬಾಯ್ಬಿಟ್ಟಿದ್ದಾರೆ. ಇದು ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.