Close Menu
Ain Live News
    Facebook X (Twitter) Instagram YouTube
    Saturday, May 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    60 ವರ್ಷ ಮೇಲ್ಪಟ್ಟವರಿಗೆ ಈ ಯೋಜನೆಯಿಂದ ಸಿಗುತ್ತೆ 5 ಸಾವಿರ ಪಿಂಚಣಿ: ನೀವು ಮಾಡಬೇಕಾದ್ದು ಇಷ್ಟೇ!

    By AIN AuthorMarch 1, 2025
    Share
    Facebook Twitter LinkedIn Pinterest Email
    Demo

    ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ದೇಶದ ಎಲ್ಲ ನೌಕರರಿಗೆ ಸಾರ್ವತ್ರಿಕ ಪಿಂಚಣಿ ಯೋಜನೆ ಪರಿಚಯಿಸಲು ಸಿದ್ಧತೆ ನಡೆಸುತ್ತಿದೆ. ಈ ಯೋಜನೆ ಕೇವಲ ಸರ್ಕಾರಿ ನೌಕರಿಗೆ ಮಾತ್ರವಲ್ಲ ದೇಶದ ಎಲ್ಲ ನೌಕರರಿಗೆ ಈ ಸೌಲಭ್ಯ ಸಿಗಲಿದೆ. ಹಾಗಿದ್ರೆ ಸಾರ್ವತ್ರಿಕ ಪಿಂಚಣಿಯಿಂದ ಏನೆಲ್ಲಾ ಪ್ರಯೋಜಗಳು ಇವೆ? ಹಿರಿಯ ನಾಗರಿಕರಿಗೆ ಏನೆಲ್ಲಾ ಅನುಕೂಲ ಎಂಬ ಹೆಚ್ಚಿನ ಮಾಹಿತಿಯನ್ನು ಇಲ್ಲಿ ತಿಳಿಯೋಣ.

    ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇಲ್ಲ: ಇಂಧನ ಸಚಿವ ಕೆಜೆ ಜಾರ್ಜ್!

    ನಮ್ಮ ದೇಶದ ಜನರಿಗೆ, ಅದರಲ್ಲೂ ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದವರಿಗೆ ಆಸರೆ ನೀಡಲು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ. ಅಂತಹ ಒಂದು ಮಹತ್ವದ ಯೋಜನೆ ಅಂದರೆ ಅಟಲ್ ಪಿಂಚಣಿ ಯೋಜನೆ. 2015 ರಲ್ಲಿ ನಮ್ಮ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ಜನರಿಗೆ ಸಮರ್ಪಿಸಿದರು

    ಸಂಘಟಿತ ವಲಯದಲ್ಲಿ ಕೆಲಸ ಮಾಡದೆ, ವಯಸ್ಸಾದ ಕಾಲದಲ್ಲಿ ಆರ್ಥಿಕ ಸ್ವಾತಂತ್ರ್ಯವಿಲ್ಲದೆ ಕಷ್ಟಪಡುವ ಜನರಿಗೆ ಈ ಯೋಜನೆ ಒಂದು ಆಧಾರ. ನಿತ್ಯ ಕೂಲಿ ಮಾಡುವವರು, ಸಣ್ಣ ಪುಟ್ಟ ವ್ಯಾಪಾರ ಮಾಡುವವರು, ಸ್ವಂತ ಕೆಲಸ ಮಾಡುವವರು ಈ ಯೋಜನೆಯ ಸದುಪಯೋಗ ಪಡೆಯಬಹುದು.

    60 ವರ್ಷ ದಾಟಿದ ಮೇಲೆ ಪ್ರತಿ ತಿಂಗಳು ನಿಗದಿತ ಹಣ ಪಿಂಚಣಿಯಾಗಿ ಪಡೆಯಲು ಈ ಯೋಜನೆಯಲ್ಲಿ ಸೇರಬಹುದು. ಅಟಲ್ ಪಿಂಚಣಿ ಯೋಜನೆಯಲ್ಲಿ ಸೇರಿದವರು 60 ವರ್ಷದ ನಂತರ ತಿಂಗಳಿಗೆ 1000, 2000, 3000, 4000 ಅಥವಾ 5000 ರೂಪಾಯಿಗಳವರೆಗೆ ಪಿಂಚಣಿ ಪಡೆಯಬಹುದು.

    ಇದಕ್ಕಾಗಿ ಅವರು ಅವರ ವಯಸ್ಸಿಗೆ ಅನುಗುಣವಾಗಿ ಪ್ರತಿ ತಿಂಗಳು ಸ್ವಲ್ಪ ಹಣ ಕಟ್ಟಬೇಕು. 18 ರಿಂದ 40 ವರ್ಷದೊಳಗಿನ ಯಾರೇ ಆಗಲಿ ಈ ಯೋಜನೆಯ ಸದಸ್ಯರಾಗಬಹುದು. ರೈತರು ಸೇರಿದಂತೆ ಅಸಂಘಟಿತ ವಲಯದಲ್ಲಿ ದುಡಿಯುವ ಎಲ್ಲರಿಗೂ ಈ ಯೋಜನೆ ಅನ್ವಯಿಸುತ್ತದೆ.
    ವಯಸ್ಸಿಗೆ ತಕ್ಕಂತೆ ಕಡಿಮೆ ಹಣ ಕಟ್ಟಿ ಹೆಚ್ಚಿನ ಪಿಂಚಣಿ ಪಡೆಯುವ ಅವಕಾಶ ಇಲ್ಲಿದೆ. ಉದಾಹರಣೆಗೆ, 18 ವರ್ಷದ ಯುವಕ ತಿಂಗಳಿಗೆ ಕೇವಲ 42 ರೂಪಾಯಿ ಕಟ್ಟುವ ಮೂಲಕ ಈ ಯೋಜನೆಗೆ ಸೇರಬಹುದು ಹಾಗೂ 60 ವರ್ಷದ ನಂತರ ಪ್ರತಿ ತಿಂಗಳು 5000 ರೂಪಾಯಿ ಪಿಂಚಣಿ ಪಡೆಯಬಹುದು.

    40 ವರ್ಷದ ವ್ಯಕ್ತಿಯೊಬ್ಬರು ತಿಂಗಳಿಗೆ 1,454 ರೂಪಾಯಿ ಕಟ್ಟಿ 60 ವರ್ಷದ ನಂತರ 5000 ರೂಪಾಯಿ ಪಿಂಚಣಿ ಪಡೆಯುವ ಅವಕಾಶವಿದೆ. ತಮ್ಮ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಕಡಿಮೆ ಪಿಂಚಣಿ ಪಡೆಯಲು ಬಯಸುವವರು, ಕಡಿಮೆ ಪ್ರೀಮಿಯಂ ಕಟ್ಟಲು ಅವಕಾಶವಿದೆ.

    ಒಟ್ಟಿನಲ್ಲಿ, ಅಟಲ್ ಪಿಂಚಣಿ ಯೋಜನೆಯು ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ಒದಗಿಸುವ ಒಂದು ಸುವರ್ಣ ಅವಕಾಶ. ನೀವು ಕೂಡ ನಿಮ್ಮ ಅಪ್ಪ-ಅಮ್ಮನ ಹೆಸರಲ್ಲಿ ಇಲ್ಲಿ ರಿಜಿಸ್ಟರ್ ಮಾಡಿ, ಈ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

    Demo
    Share. Facebook Twitter LinkedIn Email WhatsApp

    Related Posts

    ರಾಜ್ಯದಲ್ಲಿ ಕೊರೊನಾ ರೀ ಎಂಟ್ರಿ: ಮತ್ತೆ ಕೋವಿಡ್ ಟೆಸ್ಟ್ ಶುರುವಾಗುತ್ತಾ.? ದಿನೇಶ್ ಗುಂಡೂರಾವ್ ಹೇಳಿದ್ದೇನು?

    May 24, 2025

    ಹುಟ್ಟುಹಬ್ಬ ದಿನವೇ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಯಲ್ಲಿ ದಿನಸಿ ವಿತರಿಸಿದ ರಾಗಿಣಿ! Video ವೈರಲ್!

    May 24, 2025

    ಮಳೆಹಾನಿ ಸಭೆಗೆ ಕರೆಯದೇ ನಿರ್ಲಕ್ಷ್ಯ: ಡಿಸಿಎಂ ಡಿಕೆಶಿಗೆ ಟಿ.ಎ ಶರವಣ ಶಿಷ್ಟಾಚಾರ ಪಾಠ

    May 24, 2025

    ಸಿ.ಟಿ ರವಿ ಕೋಟೆಗೆ ಲಕ್ಷ್ಮಿ ಹೆಬ್ಬಾಳಕರ್‌ ಲಗ್ಗೆ: ಭರ್ಜರಿ ರೋಡ್‌ ಶೋ..ಬಿಜೆಪಿ ಮಹಿಳಾ ಕಾರ್ಯಕರ್ತೆಯರ ಪ್ಲಾನ್‌ ಠುಸ್‌

    May 24, 2025

    KCET Result 2025: ಸಿಇಟಿ ಫಲಿತಾಂಶ ಪ್ರಕಟ: ಮೊದಲ Rank ಪಡೆದವರ ಪಟ್ಟಿ ಇಲ್ಲಿದೆ ನೋಡಿ

    May 24, 2025

    ಮೈಸೂರು ಸ್ಯಾಂಡಲ್‌ ಸೋಪ್‌ ವಿವಾದದಲ್ಲಿ ಡವ್‌ ಸೋಪು ಎಳೆದು ತಂದ ಮೋಹಕ ತಾರೆ ರಮ್ಯಾ

    May 24, 2025

    ರಾಜ್ಯದಲ್ಲೂ ಹೆಚ್ಚುತ್ತಿದೆ ಕೊರೊನಾ ಕಾಟ: ಮಾಸ್ಕ್‌ ಧರಿಸಿ ಸಿಎಂ ಸಿದ್ದರಾಮಯ್ಯ ಜಾಗೃತಿ

    May 24, 2025

    ಬಾಲಿವುಡ್‌ ಖ್ಯಾತ ನಟ ಮುಕುಲ್ ದೇವ್ ವಿಧಿವಶ!

    May 24, 2025

    ʼಮೈಸೂರು ಪಾಕ್‌ʼ ಅಲ್ಲ ʼಮೈಸೂರು ಶ್ರೀʼ…ಈ ಸಿಹಿತಿಂಡಿ ಹೆಸರು ಬದಲಾವಣೆಗೆ ಕಾರಣವೇನು?

    May 24, 2025

    ಸಿಲಿಕಾನ್ ಸಿಟಿಯಲ್ಲಿ 3 ಮಕ್ಕಳಿಗೆ Corona ಪಾಸಿಟಿವ್: ನಾಳೆಯಿಂದ Covid ಟೆಸ್ಟ್ ಆರಂಭ..!

    May 24, 2025

    Karnataka Covid Guidelines: ಮತ್ತೆ ಬಂತು ಕೊರೊನಾ: ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ – ಇಲ್ಲಿದೆ ಸಂಪೂರ್ಣ ಮಾಹಿತಿ

    May 24, 2025

    ಅಪ್ಪಿತಪ್ಪಿಯೂ ಇವುಗಳನ್ನು ಕುಕ್ಕರ್’ನಲ್ಲಿ ಬೇಯಿಸಬೇಡಿ..! ಇದು ಅನಾರೋಗ್ಯವನ್ನು ಖರೀದಿಸಿದಂತೆ..

    May 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.