,ಬೆಳಗಾವಿ:- ಶಾಸಕ ಯತ್ನಾಳ್ ಉಚ್ಚಾಟನೆ ಆದೇಶ ಶೀಘ್ರವೇ ವಾಪಸ್ ಪಡೆಯಬೇಕು ಎಂದು ಬಿಜೆಪಿ ಹೈಕಮಾಂಡ್ ಗೆ ಪಂಚಮಸಾಲಿ ಪಂಚಮಸಾಲಿ ಸಮುದಾಯ ಡೆಡ್ ಲೈನ್ ಕೊಟ್ಟಿದೆ.
ಏಪ್ರಿಲ್ 10ರ ಒಳಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೀಡಿದ ಉಚ್ಚಾಟನೆ ಆದೇಶವನ್ನು ಬಿಜೆಪಿ (ವಾಪಸ್ ಪಡೆಯಬೇಕು ಎಂದು ಕೂಡಲ ಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಡೆಡ್ಲೈನ್ ನೀಡಿದ್ದಾರೆ.
ಪಂಚಮಸಾಲಿ ಸಮಾಜದ ಸಭೆಯಲ್ಲಿ ಮಾತನಾಡಿದ ಅವರು, ಉಚ್ಚಾಟನೆ ವಾಪಸ್ ಪಡೆಯದಿದ್ದರೆ ಏಪ್ರಿಲ್ 13 ರಂದು ಬೆಳಗಾವಿಯಲ್ಲಿ ದೊಡ್ಡ ಪ್ರತಿಭಟನೆ ನಡೆಸಿ ಶಕ್ತಿ ಪ್ರದರ್ಶನ ಮಾಡುತ್ತೇವೆ ಗುಡುಗಿದರು .,
ಈ ಸಭೆಗೆ ಎಲ್ಲಾ ಹಿಂದೂ ಪರ ಕಾರ್ಯಕರ್ತರು, ಸಮಾಜದ ಮುಖಂಡರು ಬರಬೇಕು. ಸಮಾಜದ ಶಾಸಕರು, ಸಂಸದರು ಕೂಡ ಸತ್ಯಾಂಶ ಹೇಳುವ ಕೆಲಸ ಮಾಡಬೇಕು. ಬೊಮ್ಮಾಯಿ, ಬೆಲ್ಲದ್, ರಮೇಶ್ ಜಾರಕಿಹೊಳಿ ಅವರು ನೈತಿಕ ಬೆಂಬಲ ನೀಡಿದ್ದಾರೆ. ಸಮಾಜದ ಶಾಸಕರು ಒತ್ತಡ ಹಾಕದಿದ್ದರೆ ನಿಮ್ಮ ಮೇಲೆ ಸಮಾಜ ಬೇಸರವಾಗುತ್ತದೆ ಎಂದು ಹೇಳಿದರು.