ಬಾಗಲಕೋಟೆ: ಪಕ್ಷದಡಿಯಲ್ಲಿ ಗುರುತಿಸಿಕೊಂಡ ಯಾರೇ ಆಗಲಿ ಇತಿಮಿತಿ ಇರಬೇಕು ಎಂದು ಬಿಜೆಪಿಯಿಂದ ಯತ್ನಾಳ್ ಉಚ್ಚಾಟನೆ ಬಗ್ಗೆ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಪ್ರತಿಕ್ರಿಯಿಸಿದ್ದಾರೆ.
ಕೂಡಲಸಂಗಮದಲ್ಲಿ ಮಾತನಾಡಿದ ಅವರು, ಯಾವುದಕ್ಕೆ ಆದರೂ ಇತಿ, ಮಿತಿ ಇರುತ್ತೆ. ಪಕ್ಷದಡಿಯಲ್ಲಿ ಗುರುತಿಸಿಕೊಂಡ ಯಾರೇ ಆಗಲಿ ಇತಿಮಿತಿ ಇರಬೇಕು. ಅಂತಹ ಇತಿ,ಮಿತಿ ದಾಟಿದಾಗ ಇಂತಹವು ನಡೆಯುತ್ತವೆ. ಇತಿಮಿತಿ ದಾಟಿದಾಗ ಪಕ್ಷ ಇಂತಹ ನಿರ್ಣಯ ಕೈಗೊಳ್ಳಬೇಕಾಗುತ್ತದೆ. ಪಕ್ಷ, ಪಕ್ಷದ ನಾಯಕರು, ಕುಟುಂಬದ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದರು. ಪಕ್ಷದ ಬಗ್ಗೆ, ಧರ್ಮದ ಬಗ್ಗೆನೂ ಮಾತನಾಡೋದು ಬಿಡಲಿಲ್ಲ. ಬಿಜೆಪಿ ಪಕ್ಷದ ತೆಗೆದುಕೊಂಡ ನಿರ್ಣಯ ಸರಿಯಿದೆ ಎಂದರು.
ಶಾಸಕ ಯತ್ನಾಳ್ ಉಚ್ಚಾಟನೆ ಆದೇಶ ಶೀಘ್ರವೇ ವಾಪಸ್ ಪಡೆಯಿರಿ: ಬಿಜೆಪಿಗೆ ಜಯಮೃತ್ಯುಂಜಯ ಶ್ರೀ ಡೆಡ್ ಲೈನ್!
ಪಂಚಮಸಾಲಿ ಶಾಸಕರು ಬಿಜೆಪಿ ಬಿಟ್ಟು ಬರವಂತೆ ಪಂಚಮಸಾಲಿ ಜಯಮೃತ್ಯುಂಜಯ ಶ್ರೀ ಕರೆ ವಿಚಾರವಾಗಿ ಮಾತನಾಡಿದ ಅವರು, ಗುರುಗಳಾದಂತವರಿಗೆ ಸಲಹೆ ಕೊಡಬಾರದು ಅಂತ ನಾನು ಅಂದುಕೊಂಡಿದ್ದೇನೆ. ನಾನು ಸಮಾಜದಲ್ಲಿ ಜನಿಸಿದವನು. ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷನಾದವನು. ಇಂತಹ ಕರೆ, ನಿರ್ಧಾರ ತೆಗೆದುಕೊಳ್ಳುವುದು ಯಾರನ್ನ ಕೇಳಿ ಮಾಡ್ತಾರೆ. ಗುರುಗಳು ಆಗಿರಬಹುದು, ಹಾಗಂತ ಗುರುಗಲೇ ನಿರ್ಧಾರ ಮಾಡಂಗಿಲ್ಲ. ಸ್ವಾಮೀಜಿ ನಿರ್ಧಾರಕ್ಕೆ ನನ್ನ ವಿರೋಧವಿದೆ ಎಂದರು.