ನಾನು ದರ್ಶನ್ರನ್ನು ಹೃದಯದಿಂದ ಇಷ್ಟಪಟ್ಟಿದ್ದೀನಿ ಎಂದು ನಟ ಧನ್ವೀರ್ ಹೇಳಿದ್ದಾರೆ. ಇದೇ ವೇಳೆ ವಿಜಯಲಕ್ಷ್ಮೀ ಅವರ ಧೈರ್ಯ ಮೆಚ್ಚಿದ್ದಾರೆ.
CSK Vs RCB IPL 2025: ಟಾಸ್ ಗೆದ್ದ ಚೆನ್ನೈ ಬೌಲಿಂಗ್, ಬೆಂಗಳೂರು ಬ್ಯಾಟಿಂಗ್!
ನಟ ದರ್ಶನ್ ಜೊತೆ ಧನ್ವೀರ್ ಗೌಡ ಉತ್ತಮ ಬಾಂಧವ್ಯ ಹೊಂದಿದ್ದಾರೆ. ದರ್ಶನ್ ಜೊತೆಗಿನ ಒಡನಾಟ ಮತ್ತು ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಧನ್ವೀರ್ ಮುಕ್ತವಾಗಿ ಮಾತನಾಡಿದ್ದಾರೆ. ಈ ವೇಳೆ, ವಿಜಯಲಕ್ಷ್ಮಿ ಅಕ್ಕನ ಹೋರಾಟ ನೋಡಿ ಅವರೊಂದಿಗೆ ನಿಲ್ಲಬೇಕು ಅನ್ನಿಸಿತು ಎಂದು ಮಾತನಾಡಿದ್ದಾರೆ.
ನಾನು ದರ್ಶನ್ರನ್ನು ಹೃದಯದಿಂದ ಇಷ್ಟಪಟ್ಟಿದ್ದೀನಿ. ಅದಕ್ಕೆ ಯಾವಾಗೂ ಜೊತೆಯಲ್ಲಿದ್ದೆ. ರೇಣುಕಾಸ್ವಾಮಿ ಪ್ರಕರಣ ಏನೇ ಆಗಿರಬಹುದು. ಅದು ನ್ಯಾಯಾಲಯದಲ್ಲಿದೆ. ಅದನ್ನು ಜಡ್ಜ್ ಮಾಡೋಕೆ ನಾವ್ಯಾರು ಅಲ್ಲ. ಕಾನೂನು ಅಂತ ಇದೆ. ಅಲ್ಲಿ ತೀರ್ಮಾನ ಆಗುತ್ತೆ. ಒಂದು ಸಮಯದಲ್ಲಿ ಎಲ್ಲರೂ ಅವರೊಂದಿಗೆ ಇದ್ದರು. ದರ್ಶನ್ ಕಡೆಯಿಂದ ಎಲ್ಲಾ ತರಹದ ಬೆಂಬಲ ತಗೊಂಡರು. ಅವರು ಹಿಂದೆ ಮುಂದೆ ಯೋಚನೆ ಮಾಡದೇ ಎಲ್ಲರೂ ನಮ್ಮವರು ಅಂತ ಅಪ್ಪಿಕೊಂಡರು. ಆದರೆ ಅವರಿಗೆ ಕಷ್ಟ ಬಂದಾಗ ಎಲ್ಲರೂ ದೂರ ಸರಿದರು ಎಂದಿದ್ದಾರೆ.
ಇನ್ನೂ ವಿಜಯಲಕ್ಷ್ಮಿ ಅಕ್ಕ ಅವರು ಒಂಟಿ ಹೆಣ್ಣು ಮಗಳಾಗಿ ಅಷ್ಟು ಹೋರಾಟ ಮಾಡಿದ್ರು. ಅದನ್ನು ನೋಡಿ ದರ್ಶನ್ ಜೊತೆ ನಿಲ್ಲಬೇಕು ಎಂದು ಅನ್ನಿಸಿತು. ನಾನು ಕೂಡ ಅಕ್ಕ- ತಂಗಿಯರ ಜೊತೆ ಬೆಳೆದಿದ್ದೀನಿ. ನನಗೂ ಗೊತ್ತಾಗುತ್ತದೆ. ದೇವರು ಅವರನ್ನು ಚೆನ್ನಾಗಿ ಇಟ್ಟಿದ್ದಾನೆ. ಅವರಿಗೆ ಬೇಕಿರೋದು ಬೆಂಬಲ ಅಷ್ಟೇ. ನಾವಿದ್ದೀವಿ ಅನ್ನೋವಂತಹ ಧೈರ್ಯ ಬೇಕಿತ್ತು. ಇವತ್ತು ಅವರೊಂದಿಗೆ ನಾವು ನಿಂತಿದ್ದೀವಿ. ಬಣ್ಣದ ಲೋಕ ಅಂದ್ರೆ ಎಲ್ಲವೂ ಚೆನ್ನಾಗಿರುತ್ತದೆ ಎಂದು ಅಂದುಕೊಳ್ತಾರೆ. ದರ್ಶನ್ ಒಬ್ಬರು ಹೊರಗೆ ಬಂದ್ರೆ ಅದೆಷ್ಟೋ ಜನ ಅನ್ನ ತಿನ್ನುತ್ತಾರೆ. ಒಂದು ಸಿನಿಮಾ ಶುರು ಆಗೋದ್ರಿಂದ ಅದೆಷ್ಟೋ ಜನರಿಗೆ ಊಟ ಸಿಗುತ್ತದೆ ಎಂದಿದ್ದಾರೆ.