Close Menu
Ain Live News
    Facebook X (Twitter) Instagram YouTube
    Monday, June 30
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Happy Ugadi: ಹಿಂದೂಗಳ ಪ್ರಮುಖ ಹಬ್ಬ “ಯುಗಾದಿ” ಹಬ್ಬದ ಮಹತ್ವ ಮತ್ತು ಆಚರಣೆ ಬಗ್ಗೆ ತಿಳಿಯೋಣ!

    By Author AINMarch 30, 2025
    Share
    Facebook Twitter LinkedIn Pinterest Email
    Demo

    ದಕ್ಷಿಣ ಭಾರತದಾದ್ಯಂತ ಆಚರಿಸಲಾಗುವ ಪ್ರಮುಖ ಹಬ್ಬಗಳಲ್ಲಿ ಯುಗಾದಿ ಕೂಡ ಒಂದು. ಕರ್ನಾಟಕ, ಆಂದ್ರಪ್ರದೇಶ, ತೆಲಂಗಾಣ ಸೇರಿದಂತೆ ಇನ್ನಿತರ ದಕ್ಷಿಣ ಭಾರತದ ರಾಜ್ಯಗಳಲ್ಲಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಯುಗಾದಿ ಹಬ್ಬವನ್ನು ಹಲವೆಡೆ ಉಗಾದಿ ಎಂತಲೂ ಕರೆಯುತ್ತಾರೆ. ಈ ಹಬ್ಬವನ್ನು ಹಿಂದೂಗಳು ಚೈತ್ರ ಮಾಸದ ಮೊದಲ ದಿನದಂದು ಆಚರಿಸುತ್ತಾರೆ.

    ಈ ಹಬ್ಬವು ವಸಂತ ಕಾಲದ ಆಗಮನವನ್ನು ಸೂಚಿಸುವುದರಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಬಹಳ ವಿಜೃಂಭಣೆಯಿಂದ ಯುಗಾದಿಯನ್ನು ಆಚರಿಸುತ್ತಾರೆ. ಯುಗ ಮತ್ತು ಆದಿ ಎನ್ನುವ ಎರಡು ಸಂಸ್ಕೃತ ಪದಗಳಿಂದ ರೂಪುಗೊಂಡ ಈ ಯುಗಾದಿಯು ಹೊಸ ಯುಗದ ಆರಂಭವನ್ನು ಸೂಚಿಸುತ್ತದೆ. ಈ ವರ್ಷ ಯುಗಾದಿಯನ್ನು   ಏಪ್ರಿಲ್‌ 09 ರಂದು ಮಂಗಳವಾರ ಆಚರಿಸಲಾಗುವುದು. ಈ ದಿನದ ಶುಭ ಮುಹೂರ್ತ, ಮಹತ್ವ ಮತ್ತು ಪೂಜೆ ವಿಧಿ – ವಿಧಾನಗಳು ಹೀಗಿವೆ..

    ಹಿಂದೂ ಪುರಾಣಗಳ ಪ್ರಕಾರ, ಈ ದಿನ, ಬ್ರಹ್ಮ ದೇವನು ಬ್ರಹ್ಮಾಂಡದ ಸೃಷ್ಟಿಯನ್ನು ಪ್ರಾರಂಭಿಸಿದನು. ಇಂದಿಗೂ ಆಂಧ್ರಪ್ರದೇಶದಂತಹ ರಾಜ್ಯದಲ್ಲಿ ಯುಗಾದಿಯಂದು ಬ್ರಹ್ಮ ದೇವನನ್ನು ಪೂಜಿಸುತ್ತಾರೆ ಮತ್ತು ಈ ದಿನದಂದು ಭಗವಾನ್ ವಿಷ್ಣುವು ಮತ್ಸ್ಯ ಅವತಾರದಲ್ಲಿ ಅವತರಿಸಿದನು. ಆ ಸಮಯವನ್ನು ಯುಗಾದಿ ಹಬ್ಬವೆಂದು ಆಚರಿಸಲಾಗುತ್ತದೆ. ಭಾರತದಲ್ಲಿ ವಸಂತ ಋತು ಉತ್ತುಂಗದಲ್ಲಿರುವಾಗ ಮತ್ತು ರೈತರು ಹೊಸ ಬೆಳೆಯನ್ನು ಪಡೆದುಕೊಳ್ಳುವ ಸಮಯದಲ್ಲಿ ಯುಗಾದಿಯನ್ನು ಆಚರಿಸಲಾಗುವುದು.

    ದಕ್ಷಿಣ ಭಾರತದಲ್ಲಿ ಯುಗಾದಿ ಹಬ್ಬಕ್ಕೆ ಹೆಚ್ಚಿನ ಮಹತ್ವವಿದೆ. ಈ ಹಬ್ಬವನ್ನು ಚೈತ್ರ ಮಾಸದ ಮೊದಲ ದಿನದಂದು ಆಚರಿಸಲಾಗುತ್ತದೆ. ಏಕೆಂದರೆ ಈ ಹಬ್ಬದ ಸಮಯದಲ್ಲಿ ವಸಂತ ಋತುವು ಆರಂಭವಾಗುತ್ತದೆ. ಈ ಕಾರಣದಿಂದಾಗಿ ಹವಾಮಾನವು ತುಂಬಾ ಆಹ್ಲಾದಕರವಾಗಿರುತ್ತದೆ, ಇದರೊಂದಿಗೆ, ಈ ಸಮಯದಲ್ಲಿ ಹೊಸ ಬೆಳೆಯ ಬಗ್ಗೆ ಜನರು ಮನಸ್ಸಿನಲ್ಲಿ ಸಂತೋಷವನ್ನು ಹೊಂದಿರುತ್ತಾರೆ.

    ಈ ಕಾರಣಗಳಿಂದಾಗಿ ಯುಗಾದಿ ಹಬ್ಬದ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಯುಗಾದಿ ಹಬ್ಬವು ಜನರಿಗೆ ಅದೃಷ್ಟ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎನ್ನುವ ನಂಬಿಕೆಯಿದೆ. ಆದ್ದರಿಂದ ದಕ್ಷಿಣ ಭಾರತದ ರಾಜ್ಯಗಳಲ್ಲಿ ಯುಗಾದಿಯ ದಿನದಂದು ಜನರು ಅಂಗಡಿಗಳನ್ನು ತೆರೆಯುವುದು, ಕಟ್ಟಡ ನಿರ್ಮಾಣವನ್ನು ಪ್ರಾರಂಭಿಸುವುದು ಮುಂತಾದ ಹೊಸ ಕೆಲಸಗಳನ್ನು ಪ್ರಾರಂಭಿಸುತ್ತಾರೆ.

    ಯುಗಾದಿ ಹಬ್ಬದ ಮುಂಜಾನೆ ಬೇಗ ಎದ್ದು ಕಡಲೆ ಹಿಟ್ಟನ್ನು ಮತ್ತು ಎಣ್ಣೆಯನ್ನು ಮೈಗೆ ಹಚ್ಚಿಕೊಂಡು ಸ್ನಾನ ಮಾಡಬೇಕು.
    – ನಂತರ ಕೈಯಲ್ಲಿ ಶ್ರೀಗಂಧ, ಅಕ್ಷತೆ, ಹೂವುಗಳು ಮತ್ತು ನೀರನ್ನು ತೆಗೆದುಕೊಂಡು ಬ್ರಹ್ಮದೇವನ ಮಂತ್ರಗಳನ್ನು ಪಠಿಸುತ್ತಾ ಬ್ರಹ್ಮದೇವನ ಪೂಜೆಯನ್ನು ಮಾಡಬೇಕು.

    ​ಯುಗಾದಿ ಹಬ್ಬದ ಪೂಜೆ ವಿಧಾನ:​

    – ಈ ದಿನ ಮನೆಯ ಮುಂದೆ ವಿಶೇಷವಾದ ರಂಗೋಲಿಗಳನ್ನು ಹಾಕುತ್ತಾರೆ ಅಥವಾ ಸ್ವಸ್ತಿಕ ಚಿಹ್ನೆಯನ್ನು ಹಾಕುತ್ತಾರೆ. ಯುಗಾದಿಯಂದು ಇದನ್ನು ಮನೆಯ ಮುಂದೆ ಹಾಕುವುದರಿಂದ ಆ ಮನೆಗೆ ಧನಾತ್ಮಕ ಶಕ್ತಿಗಳ ಆಗಮನವಾಗುತ್ತದೆ ಎನ್ನುವ ನಂಬಿಕೆಯಿದೆ.
    ಈ ದಿನ, ವಿಶೇಷ ಪಾನೀಯವನ್ನು ತಯಾರಿಸುವುದು ಸಹ ವಾಡಿಕೆ. ಇದನ್ನು ಪಚಡಿ ಎಂದು ಕರೆಯಲಾಗುತ್ತದೆ. ಪಚಡಿ ಎಂಬ ಈ ಪಾನೀಯವನ್ನು ಹೊಸ ಹುಣಸೆಹಣ್ಣು, ಮಾವು, ತೆಂಗಿನಕಾಯಿ, ಬೇವಿನ ಹೂವುಗಳು, ಬೆಲ್ಲದಂತಹ ವಸ್ತುಗಳನ್ನು ಬೆರೆಸಿ ಮಡಕೆಯಲ್ಲಿ ತಯಾರಿಸಲಾಗುತ್ತದೆ. ಈ ಪಾನೀಯವನ್ನು ಕುಟುಂಬದ ಸದಸ್ಯರು ಕುಡಿಯುವುದು ಮಾತ್ರವಲ್ಲದೇ, ಎಲ್ಲರಿಗೂ ಹಂಚಲಾಗುತ್ತದೆ.
    – ಈ ದಿನ ನೀವು ಬ್ರಹ್ಮ ದೇವನ ಬದಲು ನಿಮ್ಮ ನೆಚ್ಚಿನ ದೇವರನ್ನು ಅಥವಾ ನಿಮ್ಮ ಮನೆ ದೇವರನ್ನು ಕೂಡ ಪೂಜಿಸಿ ಆಶೀರ್ವಾದವನ್ನು ಪಡೆದುಕೊಳ್ಳಬಹುದು.

     

     

     

    Demo
    Share. Facebook Twitter LinkedIn Email WhatsApp

    Related Posts

    ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ: ಮಲ್ಲಿಕಾರ್ಜುನ ಖರ್ಗೆ

    June 30, 2025

    ಶ್ರೀರಾಮಸೇನೆ ಕಾರ್ಯಕರ್ತರ ಮೇಲೆ ಹಲ್ಲೆ: ಪೊಲೀಸರ ಕೆಲಸವೇ ಕಾನೂನು ಕಾಪಾಡೋದು. ನೀವ್ಯಾಕೆ ಆ ಕೆಲಸ ಮಾಡ್ತೀರಿ?: ಪರಮೇಶ್ವರ್

    June 30, 2025

    ಪದ್ಮಶ್ರೀ ಪುರಸ್ಕೃತ ಕಣ್ಣಪ್ಪ ತಂಬಿರಾರ್’ಗೆ ವೀರಶೈವ ಮಹಾಸಭಾ ಅಭಿನಂದನೆ

    June 30, 2025

    ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋರಟವರು ಮಸಣ ಸೇರಿದರು: ಚಿಕ್ಕಬಳ್ಳಾಪುರದ ಮೂವರು ಸಾವು!

    June 30, 2025

    ಕಲಬುರಗಿ ಜೋಳದ ‘ರೊಟ್ಟಿ’ಗೆ ಮೋದಿ ಮೆಚ್ಚುಗೆ: ಯಶಸ್ಸಿನ ಹಿಂದೆ ರಾಜ್ಯ ಸರ್ಕಾರದ ಶ್ರಮ ಎಂದ ಸಚಿವ ಪ್ರಿಯಾಂಕ್ ಖರ್ಗೆ

    June 30, 2025

    Heart Attack: ಹೃದಯಾಘಾತಕ್ಕೆ ಅಸಲಿ ಕಾರಣ..? ಮೊಬೈಲ್, ಜಂಕ್’ಫುಡ್ ಹೃದಯದ ವಿಲನ್..!

    June 30, 2025

    ನಿವೇಶನ ಖರೀದಿಸುವ ಮೊದಲು ವಾಸ್ತು ಪ್ರಕಾರ ಇದಿಯಾ..? ಇಲ್ಲಿದೆ ನೋಡಿ ಮಾಹಿತಿ

    June 30, 2025

    ಬೆಂಗಳೂರಲ್ಲಿ ಮತ್ತೊಂದು ಚೀಟಿ ಪಂಗನಾಮ: ಜನರಿಗೆ ಮಕ್ಮಲ್ ಟೋಪಿ ಹಾಕಿ ಎಸ್ಕೇಪ್ ಆಗಿದ್ದ ವಂಚಕ ಅರೆಸ್ಟ್!

    June 30, 2025

    ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ಅಣ್ಣಾಮಲೈ!

    June 30, 2025

    ಬೆಂಗಳೂರಿಗರ ಗಮನಕ್ಕೆ: ಇಂದು 60 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪವರ್ ಕಟ್; ಎಲ್ಲೆಲ್ಲಿ?

    June 30, 2025

    ಬೆಂಗಳೂರಿಗೆ ಇಂದು ‘ಕೈ’ ಉಸ್ತುವಾರಿ ಸುರ್ಜೇವಾಲ ಎಂಟ್ರಿ: ಅಸಮಾಧಾನಿತ ಶಾಸಕರಿಗೆ ಬುಲಾವ್!

    June 30, 2025

    ವಾಹನ ಸವಾರರ ಗಮನಕ್ಕೆ: ಜುಲೈ 2ರ ವರೆಗೆ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ!

    June 30, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.