ಬೆಳಗಾವಿ : ಹಲ್ಲೆ ಮಾಡಿದವರನ್ನ ಬಂಧಿಸಿ, ಇಲ್ಲವೇ ದಯಾಮರಣಕ್ಕೆ ಅವಕಾಶ ಕೊಡಿ ಎಂದು ನೊಂದ ಕುಟುಂಬವೊಂಧು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ಘಟನೆ ಮನೀಡಿದೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಯಡ್ರಾವಿ ಗ್ರಾಮದ ಅಕ್ಷತಾ ಅವರ ಕುಟುಂಬ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್ ಗೆ ಮನವಿ ಸಲ್ಲಿದ್ದಾರೆ.
ಎರಡು ಎಕರೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ 25 ಜನರಿಂದ ನಮ್ಮ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ ಎಂದು ಆರೋಪಿಸಿದ್ದಾರೆ. ನಮಗೆ ಸೇರಿದ ಜಮೀನು ಕರೆವ್ವ ದೇವಸ್ಥಾನಕ್ಕೆ ಸೇರಿದು ಎಂಬುವುದು ಕೆಲವರು ವಾದ ಮಾಡುತ್ತಿದ್ದಾರೆ. ನಮ್ಮ ಹೆಸರಿನಲ್ಲಿಯೇ ಎಲ್ಲ ದಾಖಲೆಗಳಿವೆ. ನಮ್ಮ ಮೇಲೆ ನಿರಂತರ ದಬ್ಬಾಳಿಕೆ ಮಾಡುತ್ತಿದ್ದಾರೆ. ನನ್ನ ಮೇಲೆ ಹಲ್ಲೆ ಮಾಡಿದರವನ್ನ ಬಂಧಿಸುವಂತೆ ಅಕ್ಷತಾ ಒತ್ತಾಯಿಸಿದ್ದಾರೆ.
ಹಲ್ಲೆ ಸಂಬಂಧ ದೂರು ಕೊಟ್ಟರು ಆರೋಪಿಗಳ ಜತೆಗೆ ಸ್ಥಳೀಯ ಪೊಲೀಸರು ಶಾಮೀಲು ಆಗಿದ್ದಾರೆ. ನಮ್ಮ ಮೇಲೆ ಹಲ್ಲೆಗೈದ ಆರೋಪಿಗಳ ಜತೆಗೆ ಪೊಲೀಸರು ಜ್ಯೂಸ್ ಸೇವನೆ ಮಾಡ್ತಾರೆ. ಹಲ್ಲೆಗೈದ ಯಾವೊಬ್ಬ ಆರೋಪಿಗಳನ್ನ ಬಂಧಿಸುವ ಕೆಲಸ ಮಾಡಲ್ಲ. ಮೂಡಲಗಿ ತಹಶೀಲ್ದಾರ ಭೇಟಿ ಮಾಡಿದ್ರು ನ್ಯಾಯ ಸಿಗುತ್ತಿಲ್ಲ ಎಂದು ಜಿಲ್ಲಾಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.