ಕೋಲಾರ : ಕೋಲಾರದಲ್ಲಿಅರಣ್ಯ ಇಲಾಖೆಯ ಕಚೇರಿ ಎದುರು ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಲಾಢ್ಯರು ಮತ್ತು ರಾಜಕೀಯ ವ್ಯಕ್ತಿಗಳು ಅತಿಕ್ರಮಿಸಿರುವ ಸಾವಿರಾರು ಎಕರೆ ಅರಣ್ಯ ಭೂಮಿ ಒತ್ತುವರಿ ತೆರವಿನ ತಂಟೆಗೆ ಹೋಗದ ಅರಣ್ಯ ಇಲಾಖೆಯು ಬಡವರ ಬೆಳೆಗಳ ಮೇಲೆ ಜೆಸಿಬಿ ಹರಿಸಿ ಪ್ರತಾಪ ತೋರಿಸುವುದು ಸರಿಯಲ್ಲ ಪ್ರತಿಭಟನೆ ನಡೆಸಿ ಉಪ ಅರಣ್ಯಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರಿ ಜಾಗ ಒತ್ತುವರಿ ಮಾಡಿದವರ ವಿರುದ್ಧ ಕ್ರಮವಾಗಲಿ ; ಎಸ್ ಆರ್ ಹಿರೇಮಠ್ ಆಗ್ರಹ
ಇದೇ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕೆ ನಾರಾಯಣಗೌಡ ಮಾತನಾಡಿ, ಅರಣ್ಯ ಅಧಿಕಾರಿಗಳು ಅಮಾಯಕ ರೈತರು ಬೆಳೆಗಳ ಕಟಾವಿಗೂ ಅವಕಾಶ ನೀಡದೆ ಜೆಸಿಬಿಗಳನ್ನು ನುಗ್ಗಿಸುತ್ತಿರುವುದು ಸರಿಯಲ್ಲ. ರೈತರ ಮೇಲೆ ಪ್ರತಾಪ ತೋರಿಸುವ ಅರಣ್ಯಧಿಕಾರಿಗಳು ರಾಜಕೀಯ ಹಿನ್ನೆಲೆಯುಳ್ಳ ಬಲಾಡ್ಯರ ಬಳಿಗೂ ಸುಳಿಯದೇ ಇರುವುದು ಸರಿಯೇ ಕಾನೂನಿನಲ್ಲಿ ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಪ್ರತ್ಯೇಕ ನ್ಯಾಯವಿದೆಯೇ ಎಂದು ಪ್ರಶ್ನಿಸಿದರು.