ಬೆಂಗಳೂರು: ನಾನು ಅಧ್ಯಕ್ಷನಾದ ಬಳಿಕ ಯತ್ನಾಳ್ ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಅವರ ಆಕ್ಷೇಪಾರ್ಹ ವರ್ತನೆ ಕುರಿತು ಕೇಂದ್ರದ ವರಿಷ್ಠರು ಹಲವಾರು ಬಾರಿ ನೋಟಿಸ್ ನೀಡಿದ್ದರು.
ನಾನು ಅಧ್ಯಕ್ಷನಾದ ಬಳಿಕ ರವಿಕುಮಾರ್ ಮೂಲಕ ಯತ್ನಾಳ್ ಅವರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿದ್ದೆ. ಆದರೆ ಯತ್ನಾಳ್ ಅವರನ್ನು ನಾನು ಸದನ ನಡೆಯುವಾಗ ಭೋಜನಕ್ಕೂ ಆಹ್ವಾನಿಸಿದ್ದೆ. ಏನೇ ಇದ್ದರೂ ಸರಿಪಡಿಸಿಕೊಳ್ಳೋಣ ಬನ್ನಿ ಎಂದಿದ್ದೆ ಎಂದು ಹೇಳಿದರು.
ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಹೀಗೆ ಮಾಡಿ: ಈ 4 ಸ್ಥಳಗಳಲ್ಲಿ ದೀಪ ಹಚ್ಚುವುದನ್ನು ಮರೆಯಬೇಡಿ..!
ಯತ್ನಾಳ್ ಅವರನ್ನು ನಾನು ರಾಜಕೀಯದಲ್ಲಿ ಹೋಲಿಸಲಾಗದು ಎಂದು ಹೇಳಿದ ಬಿ ವೈ ವಿಜಯೇಂದ್ರ, ಯತ್ನಾಳ್ಗೆ ಹೋಲಿಸಿಕೊಂಡರೆ ನಾನು ರಾಜಕೀಯದಲ್ಲಿ ತುಂಬಾ ಚಿಕ್ಕವನು. ರಾಜ್ಯದ ಅಧ್ಯಕ್ಷನಾಗಿ ಎಲ್ಲರನ್ನೂ ಒಟ್ಟಾಗಿ ತಗೊಂಡು ಹೋಗುವ ಪ್ರಯತ್ನ ಮಾಡಿದ್ದೇನೆ.
ನಾನು ಹಿಂದೊಂದು ಮುಂದೊಂದು ಮಾತಾಡುವ ವ್ಯಕ್ತಿ ಅಲ್ಲ. ನನ್ನ ಕಡೆಯಿಂದ ಎಲ್ಲವೂ ಸರಿಯಾಗಬೇಕೆಂದು ಪ್ರಾಮಾಣಿಕವಾಗಿ ನಡೆದುಕೊಂಡಿದ್ದೇನೆ. ವಿಧಿಯಾಟನೋ ಏನೋ ಗೊತ್ತಿಲ್ಲ ಹೈಕಮಾಂಡ್ ನಾಯಕರು ಕೊನೆಗೆ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.