ಬಾಗಲಕೋಟೆ:- ಅಡ್ಡ ಬಂದ್ ಬೈಕ್ ತಪ್ಪಿಸಲು ಹೋಗಿ KSRTC ಬಸ್ ಪಲ್ಟಿ ಹೊಡೆದಿರುವ ಘಟನೆ ಮಳಲಿ ಗ್ರಾಮದ ಸಮೀಪದಲ್ಲಿ ಜರುಗಿದೆ.
ಬ್ಯಾಂಕಾಕ್ ನಲ್ಲಿ ಪ್ರಬಲ ಭೂಕಂಪ: ತಾಯ್ನಾಡಿಗೆ ಸೇಫ್ ಆಗಿ ರೀಚ್ ಆದ ಕನ್ನಡಿಗರು!
ಘಟನೆ ಹಿನ್ನೆಲೆ ಬೈಕ್ ನಲ್ಲಿದ್ದ ದಂಪತಿಗಳಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮುಗಳಖೋಡ ಗ್ರಾಮದ ಶಂಕರ ಲಕ್ಣ್ಮೇಶ್ವರ್ ( 50), ಶ್ರೀದೇವಿ ಲಕ್ಣ್ಮೇಶ್ವರ (40) ಮೃತ ದಂಪತಿ. ಇವರು ಮುಗಳಖೋಡದಿಂದ ಮಳಲಿ ಕಡೆಗೆ ಹೊರಟಿದ್ದ ವೇಳೆ ಅವಘಡ ಸಂಭವಿಸಿದೆ. ಬಸ್ ನಲ್ಲಿದ್ದ ಹಲವರಿಗೆ ಸಣ್ಣಪುಟ್ಟ ಗಾಯವಾಗಿದೆ. ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಸ್ವಾಗತ ಕಮಾನ್ ನೆಲಕ್ಕುರುಳಿದೆ. ಕೊಲ್ಹಾಪುರದಿಂದ ಯಾದಗಿರಿ ಕಡೆಗೆ ಈ ಬಸ್ ಹೊರಟಿತ್ತು.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಡಿಪೋಗೆ ಈ KSRTC ಬಸ್ ಸೇರಿದ್ದು, ಸ್ಥಳಕ್ಕೆ ಮುಧೋಳ ಪೊಲೀಸರು ದೌಡಾಯಿಸಿದರು. ಮುಧೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.