ಚಿಕ್ಕೋಡಿ:- ಮನೆಗೆ ಊಟಕ್ಕೆ ಎಂದು ಕರೆಸಿ ವ್ಯಕ್ತಿಗಳ ಮೇಲೆ ಸ್ನೇಹಿತರು ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಗುಂಡೇವಾಡಿ ಗ್ರಾಮದಲ್ಲಿ ಜರುಗಿದೆ.
Happy Ramadan Eid 2025: ರಂಜಾನ್ ಹಬ್ಬದ ಮಹತ್ವ, ಇತಿಹಾಸ ಆಚರಣೆಯ ವಿಧಾನ ಹೀಗಿದೆ ನೋಡಿ..!
ಊಟದ ತಟ್ಟೆಯ ವಿಚಾರವಾಗಿ ನಡೆದ ವಾಗ್ವಾದವು ವೀಕೊಪಕ್ಕೆ ಹೋಗಿ ಈ ಅವಘಡ ಸಂಭವಿಸಿದೆ. ನಿಮ್ಮ ಮನೆಯಿಂದಲೇ ಊಟದ ತಟ್ಟೆಯನ್ನ ತೆಗೆದುಕೊಂಡು ಬಾ ಅಂತ ಹೇಳಿ ವ್ಯಕ್ತಿಗಳ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿದೆ. ಕಳೆದ 3 ದಿನಗಳ ಹಿಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ದೇವೆಂದ್ರ ಕಾಂಬಳೆ, ರಾಹುಲ ಕಾಂಬಳೆ, ಹಲ್ಲೆಗೋಳಗಾದ ವ್ಯಕ್ತಿಗಳು ಎನ್ನಲಾಗಿದೆ.
ಮನೆಗೆ ಊಟಕ್ಕೆ ಎಂದು ಕರೆಸಿ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿಗಳಿಂದ ಗಂಭೀರ ಆರೋಪ ಮಾಡಲಾಗಿದೆ. ಊಟದ ತಟ್ಟೆಯನ್ನ ನಿಮ್ಮ ಮನೆಯಿಂದಲೇ ತೆಗೆದುಕೊಂಡು ಬನ್ನಿ ಎಂದು ಹೇಳಿ ಆನಂದ ಜಾಧವ್ ಹಾಗೂ ಸಹಚರರಿಂದ ಹಲ್ಲೆ ನಡೆದಿದೆ. ಸರಕಾರಿ ಆಸ್ಪತ್ರೆಯಲ್ಲಿ ಹಲ್ಲೆಗೊಳಗಾದ ದೇವೆಂದ್ರ , ಕಾಂಬಳೆ ಹಾಗೂ ರಾಹುಲ ಕಾಂಬಳೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.