ಕೊಪ್ಪಳ ; ವಿಜಯೇಂದ್ರ ಪರ ಕೆಲ ಮಾಧ್ಯಮದವರು ಇದ್ದಾರೆ ಎಂದ ಬಿಜೆಪಿ ಉಚ್ಚಾಟಿತ ನಾಯಕ ಯತ್ನಾಳ್ ಅವರಿಗೆ ಮಾಧ್ಯಮದವರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ವಿಜಯಪುರ ನಗರ ಬಸನಗೌಡ ಪಾಟೀಲ ಯತ್ನಾಳ ಕೊಪ್ಪಳದ ಗವಿಮಠಕ್ಕೆ ಆಗಮಿಸಿದ್ದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ವಿಜಯಪುರದಲ್ಲಿ ಈ ಜೀವನದಲ್ಲಿ ನಾನು ಕಾಂಗ್ರೆಸ್ ಗೆ ಹೋಗುವುದಿಲ್ಲ. ವಿಜಯೇಂದ್ರ ನಕಲಿ ಫೋಟೋ ಹರಿ ಬಿಡುತ್ತಿದ್ದಾರೆ. ವಿಜಯೇಂದ್ರ ಹಣವಿದೆ. ಸಾವಿರಾರು ಕೋಟಿ ರೂಪಾಯಿ ಗಳಿಸಿದ್ದಾನೆ. ಕೆಲವು ಮಾಧ್ಯಮದವರು ಸಹ ಅವರ ಬೆಂಬಲಿಸುತ್ತಾರೆ ಎಂದಿದ್ದು, ಯತ್ನಾಳರ ಮಾತಿಗೆ ಮಾಧ್ಯಮದವರು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯಿಂದ ಉಚ್ಛಾಟನೆ ಬಳಿಕ ಕೊಪ್ಪಳದ ಗವಿ ಮಠಕ್ಕೆ ಯತ್ನಾಳ್ ಭೇಟಿ | AIN Kannada
ಇನ್ನೂ ಕೊಪ್ಪಳಕ್ಕೆ ಭೇಟಿ ನೀಡಿದ ವೇಳೆ ಅವರ ಬೆಂಬಲಿಗರು ಯತ್ನಾಳ್ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದ ಘಟನೆಯೂ ನಡೆಯಿತು.