Close Menu
Ain Live News
    Facebook X (Twitter) Instagram YouTube
    Wednesday, June 18
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    RCB ಮುಂದಿದೆ ಚಿನ್ನಸ್ವಾಮಿ ಚಾಲೆಂಜ್: ತವರಲ್ಲೇ ಬೆಂಗಳೂರು ವೀಕ್.. ಹೀಗಾದ್ರೆ ಮಾತ್ರ ಗೆಲುವು ಸಾಧ್ಯ!

    By AIN AuthorMarch 31, 2025
    Share
    Facebook Twitter LinkedIn Pinterest Email
    Demo

    ಐಪಿಎಲ್ 2025ರ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಪ್ರದರ್ಶನ ನೀಡುತ್ತಿದೆ. ಕೋಲ್ಕತ್ತಾ ಮತ್ತು ಚೆನ್ನೈ ವಿರುದ್ಧ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಇನ್ನು ಆರ್ ಸಿಬಿ ಅಭಿಮಾನಿಗಳ ಬಳಗ ಚಿಕ್ಕದೇನಲ್ಲ. ದೇಶಾದ್ಯಂತ ಆರ್ ಸಿಬಿ ಅಭಿಮಾನಿಗಳನ್ನು ಹೊಂದಿದೆ.

    ಹಾವು ಕಚ್ಚಿದರೆ ಸುಮ್ಮನೆ ಕೂರಬೇಡಿ: ತಕ್ಷಣ ಇದನ್ನು ಸೇವಿಸಿದ್ರೆ ವಿಷ ದೇಹಕ್ಕೆ ಸೇರಲ್ಲ!

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ 2025ರ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ. ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬಳಿಕ ಎರಡನೇ ಪಂದ್ಯದಲ್ಲಿ ಚೆನ್ನೈನಲ್ಲಿ ಸಿಎಸ್‌ಕೆ ವಿರುದ್ಧ 50 ರನ್‌ಗಳ ಅಮೋಘ ಗೆಲುವು ಸಾಧಿಸಿದೆ. ಸಿಎಸ್‌ಕೆ ವಿರುದ್ಧದ ಗೆಲುವಿನ ಬಳಿಕ ಬೆಂಗಳೂರಿಗೆ ಆಗಮಿಸಿದ್ದು ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತಿದೆ.

    IPL 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಲಿಷ್ಠವಾಗಿ ಕಾಣುತ್ತಿದ್ದು, ಆಡಿದ ಎರಡು ಪಂದ್ಯದಲ್ಲೂ ಭರ್ಜರಿ ಗೆಲುವು ಕಂಡಿದೆ.

    ಮೊದಲಿಗೆ ಕೋಲ್ಕತ್ತಾ, ಬಳಿಕ ಚೆನ್ನೈ ಮಣಿಸಿರುವ ಬೆಂಗಳೂರು ತಂಡವು ತನ್ನ ಮುಂದಿನ ಪಂದ್ಯವನ್ನು ತವರು ಮೈದಾನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಏಪ್ರಿಲ್ 2 ಬುಧವಾರದಂದು ರಾತ್ರಿ 7.30 ಕ್ಕೆ ಶುರುವಾಗಲಿದೆ.

    ಇನ್ನೂ ಹೋಮ್​ಗ್ರೌಂಡ್​ ಅನ್ನೋದು ಪ್ರತಿ ತಂಡಕ್ಕೂ ಅಡ್ವಾಂಟೇಜ್ ಆಗಿರುತ್ತೆ. ಯಾವಾಗ್ಲೂ ತವರಿನ ತಂಡವೇ ಗೆಲ್ಲೋ ಫೇವರಿಟ್ ಅನಿಸಿರುತ್ತೆ. ಆರ್​ಸಿಬಿ ವಿಚಾರದಲ್ಲಿ ಇದು ಉಲ್ಟಾ.. ಹೋಮ್​​ಗ್ರೌಂಡ್​ನಲ್ಲಿ ಆರ್​ಸಿಬಿ, ಹೆಚ್ಚು ಪಂದ್ಯಗಳನ್ನು ಸೋತಿದೆ.

    ಚಿನ್ನಸ್ವಾಮಿಯಲ್ಲಿ ಆರ್​ಸಿಬಿ, ಇದುವರೆಗೆ 91 ಪಂದ್ಯಗಳನ್ನಾಡಿದೆ. ಈ ಪೈಕಿ 43 ಪಂದ್ಯಗಳಲ್ಲಿ ಗೆದ್ದಿರುವ ಆರ್​ಸಿಬಿ, 48.96ರ ವಿನ್ನಿಂಗ್ ಪರ್ಸೇಂಟೇಜ್ ಹೊಂದಿದೆ. ಹೋಮ್​​ಗ್ರೌಂಡ್​ ಚಿನ್ನಸ್ವಾಮಿಯಲ್ಲಿ 7 ಪಂದ್ಯಗಳನ್ನಾಡಲಿರುವ ಆರ್​ಸಿಬಿ, ಕನಿಷ್ಟ ಅಂದ್ರೂ 5 ಪಂದ್ಯಗಳನ್ನ ಗೆಲ್ಲಲೇಬೇಕಿದೆ. ಗೆದ್ರೆ ಪ್ಲೇ ಆಫ್​ ಎಂಟ್ರಿ ಸುಲಭವಾಗಲಿದೆ. ಚಿನ್ನಸ್ವಾಮಿಯ ಈ ಹಿಂದಿನ ದಾಖಲೆಗಳು ಆರ್​​ಸಿಬಿಗೆ ವಿರುದ್ಧವಾಗಿವೆ. ಹಳೆಯ ದಾಖಲೆಯನ್ನ ಸುಳ್ಳಾಗಿಸಿ ತಂಡವನ್ನ ಗೆಲುವಿನ ದಡ ಸೇರಿಸೋ ಜವಾಬ್ದಾರಿ ಇದೀಗ ಕ್ಯಾಪ್ಟನ್​ ರಜತ್​ ಪಟಿದಾರ್​ ಮುಂದಿದೆ.

    ಚಿನ್ನಸ್ವಾಮಿ ವಿರಾಟ್​ ಕೊಹ್ಲಿಯ ಫೇವರಿಟ್ ಗ್ರೌಂಡ್. ಈ ಅಂಗಳದಲ್ಲಿ ಕಿಂಗ್ ಕೊಹ್ಲಿ ರನ್ ಸುನಾಮಿಯನ್ನೇ ಸೃಷ್ಟಿಸಿದ್ದಾರೆ. ಈ ಸೀಸನ್​ನಲ್ಲೂ ತನ್ನ ಫೇವರಿಟ್​ ಗ್ರೌಂಡ್​ನಲ್ಲಿ ವಿರಾಟ್ ವೀರಾವೇಶ ಮುಂದುವರಿಸಬೇಕಿದೆ. ತವರಿನ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯಿಟ್ಟಿದ್ದಾರೆ. ಆ ನಿರೀಕ್ಷೆಯನ್ನ ನಿಜವಾಗಿಸಬೇಕಿದೆ.

    ಒಟ್ಟಾರೆ ಅಂತಿಮ ರಿಸಲ್ಟ್ ಬುಧವಾರ ರಾತ್ರಿ 11pm ಒಳಗಾಗಿ ಗೊತ್ತಾಗಲಿದೆ. RCB ಅಬಿಮಾನಿಗಳು ಈ ಪಂದ್ಯಕ್ಕಾಗಿ ಕಾತುರರಾಗಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಬೆಂಗಳೂರಿಗರೇ ಗಮನಿಸಿ​​​! ನಾಳೆ ಕಾವೇರಿ ನೀರು ಸರಬರಾಜು ಬಂದ್​​!

    June 18, 2025

    ಇಂದಿನಿಂದ ಕರ್ನಾಟಕದಲ್ಲಿ ಮುಂಗಾರು ಅಬ್ಬರ: ಕರಾವಳಿಯಲ್ಲಿ ಜೋರು ಮಳೆ, ಉಳಿದೆಡೆ ಸಾಧಾರಣ ಮಳೆ!

    June 18, 2025

    ಮದ್ಯ ಹಗರಣ: ಬೆಂಗಳೂರಿನಲ್ಲಿ ಆಂಧ್ರದ YS​RCP ಮಾಜಿ ಶಾಸಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಅರೆಸ್ಟ್!

    June 18, 2025

    100, 200 ರೂಪಾಯಿ ನೋಟುಗಳ ಕುರಿತು ಬಿಗ್ ಅಪ್ಡೇಟ್ ಕೊಟ್ಟ RBI..! ಏನದು ಅಂತೀರಾ..?

    June 18, 2025

    Post Office: ಸೂಪರ್ ಸ್ಕೀಮ್.. ಪ್ರತಿ ದಿನ 333 ರೂಪಾಯಿ ಸೇವ್ ಮಾಡಿ, 17 ಲಕ್ಷ ರೂಪಾಯಿ ನಿಮ್ಮ ಕೈ ಸೇರುತ್ತೆ!

    June 18, 2025

    ಬೆಂಗಳೂರಿನಿಂದ ಲಂಡನ್ ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ರದ್ದು!

    June 17, 2025

    ಇಡಿಯಿಂದ ಸಮನ್ಸ್ ಬಂದಿದೆ, ಅವರು ಹೇಳಿದ ದಿನ ವಿಚಾರಣೆಗೆ ಹೋಗಲು ಆಗಲ್ಲ: ಡಿಕೆ ಸುರೇಶ್!

    June 17, 2025

    ಚಿನ್ನಸ್ವಾಮಿ ದುರಂತ: ಸರ್ಕಾರದ ತನಿಖೆ ಮೇಲೆ ಯಾರಿಗೂ ನಂಬಿಕೆ ಇಲ್ಲ: ಅಶೋಕ್!

    June 17, 2025

    ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ: ಬಿಲ್ಡಿಂಗ್ ಗೆ ಹೊತ್ತಿದ ಬೆಂಕಿ.. ಬಾಲಕನ ಸ್ಥಿತಿ ಗಂಭೀರ!

    June 17, 2025

    ಐಶ್ವರ್ಯ ಗೌಡ ವಂಚನೆ ಪ್ರಕರಣ ಮತ್ತು ಡಿಕೆ ಸುರೇಶ್ ನಡುವೆ ಯಾವುದೇ ಸಂಬಂಧವಿಲ್ಲ: ಡಿಕೆ ಶಿವಕುಮಾರ್

    June 17, 2025

    ಕಾಲ್ತುಳಿತ ಘಟನೆಗೆ ಜವಾಬ್ದಾರಿಯನ್ನು ಹೊತ್ತು ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಬೇಕು: ಸಿ.ಟಿ.ರವಿ

    June 17, 2025

    Smriti Mandhana: ಮಹಿಳೆಯರ ODI ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿದ ಸ್ಮೃತಿ ಮಂಧಾನ..!

    June 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.