ಬೆಂಗಳೂರು: ಸರ್ಕಾರ ಬೆಲೆ ಏರಿಕೆ ಅಭಿಯಾನದೊಂದಿಗೆ ಕನ್ನಡಿಗರ ಜೇಬನ್ನು ಖಾಲಿ ಮಾಡುತ್ತಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಐಪಿಎಲ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಿದಂತೆ ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡುತ್ತಿದೆ.
ಒಂದು ಮುತ್ತಿಗೆ 50 ಸಾವಿರ: ಹಣ ವಾಪಸ್ ಕೇಳಿದ್ದಕ್ಕೆ ಹನಿಟ್ರ್ಯಾಪ್ ಬೆದರಿಕೆ, ಶಿಕ್ಷಕಿ ಸೇರಿ ಮೂವರು ಅರೆಸ್ಟ್!
ರಾಜ್ಯ ಸರ್ಕಾರ ಲಿಫ್ಟ್ಗಳು, ಟ್ರಾನ್ಸ್ಫಾರ್ಮರ್ಗಳು ಮತ್ತು ಜನರೇಟರ್ಗಳ ತಪಾಸಣೆ ಮತ್ತು ನವೀಕರಣ ವೆಚ್ಚವನ್ನು ಹೆಚ್ಚಿಸಿದೆ. ಕರ್ನಾಟಕ ಕಾಂಗ್ರೆಸ್ ತನ್ನ 24/7 ಎಕ್ಸ್ಕ್ಲೂಸಿವ್ ಬೆಲೆ ಏರಿಕೆ ಅಭಿಯಾನದೊಂದಿಗೆ ಕನ್ನಡಿಗರ ಜೇಬನ್ನು ಹಾಲಿನ ಪ್ಯಾಕೆಟ್ಗಳಿಗಿಂತ ವೇಗವಾಗಿ ಖಾಲಿ ಮಾಡುತ್ತಿದೆ ಎಂದು ಬರೆದಿದ್ದಾರೆ.
ರಾಜ್ಯ ಸರ್ಕಾರ ಇತ್ತೀಚೆಗೆ ಜನರಿಗೆ ಬೆಲೆ ಏರಿಕೆ ಬಿಸಿ ನೀಡುತ್ತಲೇ ಇದೆ. ಇದರ ಪರಿಣಾಮ ಅತ್ಯಂತ ದುಬಾರಿ ಜೀವನ ನಡೆಸುವ ದುಸ್ಥಿತಿ ನಿರ್ಮಾಣವಾಗಿದೆ.