ಹುಬ್ಬಳ್ಳಿ: ನೇಹಾ ಹಿರೇಮಠ ಪ್ರಕರಣಕ್ಕೆ ಒಂದು ವರ್ಷ ತುಂಬುವಷ್ಟರಲ್ಲಿ ಮತ್ತೊಂದು ಘಟನೆ ಅದೇ ಹುಬ್ಬಳ್ಳಿಯಲ್ಲಿ ಕೇಳಿ ಬಂದಿದೆ. ಪ್ರೀತಿ ನಿರಾಕರಣೆ ಮಾಡಿದ್ದಕ್ಕೆ ಯುವಕನಿಂದ ಯುವತಿಗೆ ಟಾರ್ಚರ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಇದರಿಂದ ಮನನೊಂದು ಯುವತಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿದ್ದಾಳೆ.
ಧಾರವಾಡ ಜಿಲ್ಲೆ ಕುಂದಗೋಳ ನಿವಾಸಿ ವಿದ್ಯಾ( ಹೆಸರು ಬದಲಾವಣೆ ಮಾಡಲಾಗಿದೆ) ಎಂಬ ಯುವತಿ ಆತ್ಮಹತ್ಯೆಗೆ ಯತ್ನ ಮಾಡಲಾಗಿದ್ದು, ಕುಂದಗೋಳ ಪಟ್ಟಣದ ಸಿರಾಜ್ ಎಂಬ ಮುಸ್ಲಿಂ ಯುವಕ ಕೊಲೆಗೆ ಯತ್ನಿಸಿದ್ದಾನೆ. ವಿದ್ಯಾನಗರದ ಸುಶ್ರುತ ಕಾಲೇಜಿನಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ನಲ್ಲಿ ವಿದ್ಯಾ ಓದುತ್ತಿದ್ದು, ಸಿರಾಜ್, ವಿದ್ಯಾ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪವಿದೆ.
ಅಲ್ಲದೆ ರಂಜಾನ್ ಹಬ್ಬದಂದು ಕಾಲೇಜಿಗೆ ಬಂದು ವಿದ್ಯಾ ಮೇಲೆ ಮಾರಣಾಂತಿಕವಾಗಿ ಸಿರಾಜ್ ಹಲ್ಲೆ ನಡೆಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಸಿರಾಜ್ ಕಾಟಕ್ಕೆ ಬೇಸತ್ತು ವಿದ್ಯಾ (ಬೇರೆ ಹೆಸರು) ಆತ್ಮಹತ್ಯೆಗೆ ಯತ್ನಿಸಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಮುಸ್ಲಿಂ ಯುವಕನ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ.