ಯಾದಗಿರಿ : ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕಾಲುವೆಗಳಿಗೆ ನೀರು ಬಂದ್ ಮಾಡಿರುವ ಸರ್ಕಾರದ ವಿರುದ್ದ ಅನ್ನದಾತರ ಆಕ್ರೋಶದ ಕಟ್ಟೆ ಹೊಡೆದಿದೆ. ನೀರು ಬಿಡದಕ್ಕೆ ರೊಚ್ಚಿಗೆದ್ದ ರೈತರು, ಕಾಲುವೆಯ ಗೇಟ್ ಗಳನ್ನೇ ಮುರಿದು ನೀರು ಹರಿಸಿಕೊಂಡಿದ್ದಾರೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರ್ ಗ್ರಾಮದ ಬಳಿ ಘಟನೆ ನಡೆದಿದೆ. ರಾತ್ರೋರಾತ್ರಿ ಬಸವಸಾಗರ ಜಲಾಶಯ ಎಡ ದಂಡೆ ಕಾಲುವೆಯ ಉಪ ಕಾಲುವೆ ನಂಬರ್ 10 A ಹಾಗೂ 11 ಗೇಟ್ ಮುರಿದಿದ್ದಾರೆ.
ಹುಕ್ಕೇರಿ ಅಟೆಂಡರ್ ಅಪಹರಣ ಪ್ರಕರಣ ; ನಾಟಕೀಯ ಟ್ವಿಸ್ಟ್ ಏನು ಗೊತ್ತಾ..?
ಕಾಲುವೆ ಮುರಿದ ವಿಷಯ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ಬಂದ ಅಧಿಕಾರಿಗಳನ್ನು ಸಹಿತ ಅಲ್ಲಿಂದ ಓಡಿಸಿದ್ದಾರೆ. ಕಳೆದ 15 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಹ ನೀರು ಹರಿಸಲಿಲ್ಲ. ಹೀಗಾಗಿ ಕೊನೆಗೆ ಕಾಲುವೆ ಗೇಟ್ ಗಳನ್ನೇ ಮುರಿದು ಜಮೀನುಗಳಿಗೆ ನೀರು ಬಿಟ್ಟುಕೊಂಡಿದ್ದಾರೆ.