ರಾಯಚೂರು : ನೀರಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಜೆಡಿಎಸ್ ನ ದೇವದುರ್ಗ ಶಾಸಕಿ ಕರೆಮ್ಮಾ ನಾಯಕ್ ಬೆಂಬಲಿ ನೀಡಿದ್ದಾರೆ. ಕೃಷ್ಣಾ ಬಲದಂಡೆ ಕಾಲುವೆಗೆ ನೀರು ಹರಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಾಯಿತು.
ಶಾಸಕಿ ಕರೆಮ್ಮಾ ನಾಯಕ್ ಅವರ ನೇತೃತ್ವದಲ್ಲಿ ಬೃಹತ್ ಪಾದಯಾತ್ರೆ ನಡೆದಿದ್ದು, ರಾಯಚೂರು ಹೊರ ಭಾಗದ ಸಾತ್ ಮೈಲ್ ಬಳಿ ಹೆದ್ದಾರಿ ತಡೆದು ಆಕ್ರೋಶವ್ಯಕ್ತಪಡಿಸಿದ್ದರು. ಶಾಸಕಿ ನೇತೃತ್ವದಲ್ಲಿ ರಸ್ತೆ ರೋಖೋ ಚಳುವಳಿ ನಡೆಸಿದರು.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಬ್ಬೂರಿನಿಂದ ರಾಯಚೂರು ಜಿಲ್ಲಾಧಿಕಾರಿ ಕಚೇರಿ ವರೆಗೂ ಪಾದಯಾತ್ರೆ ನಡೆಸಿದರು.
ನೀರು ಬಿಡದ ಅಧಿಕಾರಿಗಳು ; ಬಸವಸಾಗರ ಜಲಾಶಯ ಕಾಲುವೆ ಗೇಟ್ಗಳನ್ನೇ ಮುರಿದ ರೈತರು
ಕಾಲುವೆಗೆ ನೀರಿಲ್ಲದೇ ಬೆಳೆ ಹಾನಿ ಭೀತಿ ಎದುರಿಸುತ್ತಿರೊ ರಾಯಚೂರು, ಯಾದಗಿರಿ ಜಿಲ್ಲೆ ರೈತರಿಗೆ ಭತ್ತ,ಮೆಣಸಿನಕಾಯಿ, ಶೇಂಗಾ ಬೆಳೆ ಹಾನಿ ಭೀತಿ ಎದುರಾಗಿದೆ. ಸದ್ಯ ಕಟಾವಿನ ಹಂತಕ್ಕೆ ಬಂದಿರುವ ಬೆಳೆಗಳಿಗೆ ಏ.15 ರ ವರೆಗೆ ನೀರು ಹರಿಸುವಂತೆ ಆಗ್ರಹಿಸಿದ್ದು, ನೀರು ಹರಿಸಲು ಡೆಡ್ ಲೈನ್ ನೀಡಿದ್ದಾರೆ.