ತುಮಕೂರು : ಎಂ ಎಲ್ ಸಿ ರಾಜೇಂದ್ರ ರಾಜಣ್ಣರ ಕೊಲೆಗೆ ಸುಪಾರಿ ಪ್ರಕರಣದ ವಿಚಾರಣೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಆದರೆ ಈ ಪ್ರಕರಣ ತನಿಖೆಯ ವೇಳೆ ಹಲವು ಅನುಮಾನಗಳು ಪೊಲೀಸರಿಗೆ ಮೂಡಿವೆ ಎನ್ನಲಾಗುತ್ತಿದೆ.
ರಾಜೇಂದ್ರ ಅವರಿಗೆ ಆಡಿಯೋ ನೀಡಿದ್ದ ಪುಷ್ಪಾ ಮೇಲೆ ಪೊಲೀಸರಿಗೆ ಒಂದು ಅನುಮಾನ ಶುರುವಾಗಿದೆ. ಪುಷ್ಪಾ ತನ್ನ ಗೆಳೆಯ ಸೋಮನ ವಿರುದ್ದ ಸೇಡು ತೀರಿಸಿಕೊಳ್ಳಲು ಈ ಸಂಚು ರೂಪಿಸಿದ್ದಳಾ..? ಸೋಮ ವ್ಯವಹಾರದಲ್ಲಿ ಮಾಡಿದ್ದ ಮೋಸಕ್ಕೆ ರಿವೇಂಜ್ ತೀರಿಸಿಕೊಳ್ಳಲು ಸುಪಾರಿ ಕಥೆ ಕಟ್ಟಿದಳಾ..? ಸಂಶಯ ಮೂಡಿದೆ. ಕಥೆಯಲ್ಲಿ ದೊಡ್ಡ ದೊಡ್ಡವರ ಹೆಸರು ಪ್ರಸ್ತಾಪಿಸಿದರೆ ಸೋಮ ಒಂದಿಷ್ಟು ದಿನ ಕಂಬಿ ಎಣಿಸಬಹುದು ಎಂದುಕೊಂಡಿರಬಹುದು, ಹೀಗಾಗಿ ಈ ರೀತಿ ಕಥೆ ಕಟ್ಟಿದ್ದಾಳೆ ಎನ್ನಲಾಗುತ್ತಿದೆ.
ಪುಷ್ಪಾ ಈ ಆಡಿಯೋ ನೀಡುವಾಗ ರಾಜೇಂದ್ರ ಹತ್ಯೆ ಸಂಚಿಗೆ ಸುಪಾರಿ ನೀಡಿದ್ದವರು ಈಗಾಗಲೇ ಮುಂಗಡವಾಗಿ ೫ ಲಕ್ಷ ಹಣ ಮನು ಅಕೌಂಟಿಗೆ ಹಾಕಿದ್ದಾರೆ ಎಂದಿದ್ದಳು. ಆದರೆ ಸೋಮ ಮತ್ತು ಮನು ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಯಾವುದೇ ಹಣ ಜಮಾ ಆಗಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಪೊಲೀಸರು ಪುಷ್ಪಾ ಮೇಲೆ ಗುಮಾನಿ ಮಾಡುತ್ತಿದ್ದಾರೆ.
ಇತ್ತ ಸತತ ನಾಲ್ಕನೇ ದಿನವೂ ಕೂಡ ಪುಷ್ಪಾ ವಿಚಾರಣೆ ನಡೆದಿದೆ. ಪೊಲೀಸರ ವಿಚಾರಣೆ ವೇಳೆ ಪುಷ್ಪಾ ದಿನಕ್ಕೊಂದು ಬಣ್ಣ ಬಣ್ಣದ ಕಥೆ ಕಟ್ಟುತ್ತಿದ್ದು, ಆಧಾರ ರಹಿತ ಪುಷ್ಪಾ ಕಥೆಗೆ ಪೊಲೀಸರೇ ಬೆಸ್ತು ಬಿದಿದಾರೆ. ಇನ್ನು ಉಳಿದಂತೆ ಪುಷ್ಪಾಳ ಸ್ನೇಹಿತೆ ಯಶೋಧಾ, ಸೋಮನ ಸ್ನೇಹಿತ ಮನು, ರೋಹಿತ್ ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
70 ಲಕ್ಷಕ್ಕೆ ಡೀಲ್, 5 ಲಕ್ಷ ಅಡ್ವಾನ್ಸ್ ; ರಾಜೇಂದ್ರ ಮೇಲೆ ಕೊಲೆಯತ್ನ ಕೇಸ್ನ ಸ್ಫೋಟಕ ಆಡಿಯೋ ರಹಸ್ಯ
ಇನ್ನೂ ಈ ಕೇಸಲ್ಲಿ ಧಮ್ ಇಲ್ಲ ಅಂತಾ ರಾಜೇಂದ್ರ ರಾಜಣ್ಣಗೆ ಮೊದಲೇ ಗೊತ್ತಿತ್ತಾ..? ಅನ್ನೋ ಅನುಮಾವು ದಟ್ಟವಾಗುತ್ತಿದೆ. ಜನವರಿಯಲ್ಲಿ ಕೊಲೆ ಸುಪಾರಿ ವಿಚಾರ ಗಮನಕ್ಕೆ ಬಂದಾಗ ಆರೋಪಿಗಳನ್ನು ಅನೌಪಚಾರಿಕವಾಗಿ ವಿಚಾರಣೆ ಮಾಡಲಾಗಿತ್ತು. ಸ್ವತಃ ರಾಜೇಂದ್ರ ಆ್ಯಂಡ್ ಟೀಂ ವಿಚಾರಣೆ ಮಾಡಿತ್ತು ಅನ್ನುವ ಮಾಹಿತಿ ಇದೆ. ಆ ವೇಳೆಯೇ ಈ ಕೇಸಲ್ಲಿ ಧಮ್ ಇಲ್ಲ ಎಂದು ಸುಮ್ಮನಾಗಿದ್ದರು ಎನ್ನಲಾಗ್ತಿದೆ.
ಆದರೆ ಹನಿಟ್ರ್ಯಾಪ್ ವಿಚಾರ ಮುನ್ನೆಲೆ ಬಂದಾಗ ಮತ್ತೊಮ್ಮೆ ಎಚ್ಚೆತ್ತುಕೊಂಡ ರಾಜೇಂದ್ರ ಈ ಕೊಲೆ ಸುಪಾರಿಯಲ್ಲಿ ಏನಾದರೂ ಹೂರಣ ಇರಬಹುದು ಎಂದು ಶಂಕಿಸಿ ದೂರು ನೀಡರಬಹುದು ಎಂಬ ಶಂಕೆಯೂ ಮೂಡಿದೆ.