ಬೆಳಗಾವಿ : ಐಫೋನ್ ತಗೊಂಡಿದ್ದನ್ನ ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯಗೆ ಶರಣಾಗಿರುವ ಘಟನೆ ಬೆಳಗಾವಿಯ ನ್ಯೂ ವೈಭವ ನಗರದಲ್ಲಿ ನಡೆದಿದೆ. ಮನೆಯಲ್ಲಿ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮುಸ್ತಫೀಸ್ ಅಬ್ದುಲ್ ರಶೀದ್ ಶೇಖ್(24) ಆತ್ಮಹತ್ಯೆ. ಇಎಂಐ ಮಾಡಿಸಿ 70 ಸಾವಿರ ಬೆಲೆಯ ಐಫೋನ್ ತಂದಿದ್ದ ಮುಸ್ತಫೀಸ್ ಶೇಖ್, ಈ ವಿಚಾರ ಗೊತ್ತಾಗಿ ಇಷ್ಟೊಂದು ಹಣ ಕೊಟ್ಟು ಯಾಕೆ ಮೊಬೈಲ್ ತಗೊಂಡಿದ್ಯಾ. ಕಡಿಮೆ ದರದ ಮೊಬೈಲ್ ತಗೋಬೇಕಿತ್ತು ಎಂದು ತಂದೆ ಬುದ್ದಿ ಹೇಳಿದ್ದದ್ದಾರೆ. ಇದರಿಂದ ಮನನೊಂದು ಯುವಕ ಮನೆಯಲ್ಲೇ ರೂಮ್ ನಲ್ಲಿ ನೇಣಿಗೆ ಶರಣಾಗಿದ್ದಾನೆ.
ಈ ಸಂಬಂಧ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.