ಬಳ್ಳಾರಿ : ಬಳ್ಳಾರಿಯ ಕಣೇಕಲ ರಸ್ತೆಯ ರಾಣಿತೋಟ ಏರಿಯಾದಲ್ಲಿ ವ್ಯಕ್ತಿಯ ಬರ್ಬರ ಹತ್ಯೆ ನಡೆದಿದೆ. 37 ವರ್ಷದ ವೆಂಕಟೇಶ ಎಂಬಾತನನ್ನು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿದ್ದಾರೆ.
ರಾಣಿತೋಟದ ಜುಮ್ಮಾಮಸೀದಿ ಮುಂಭಾಗದಲ್ಲೇ ಘಟನೆ ನಡೆದಿದ್ದು, ಮೃತ ವೆಂಕಟೇಶ್ ಗೊಲ್ಲರ್ ಆರ್ ಜೆ ಕಾಟನ್ ಮಿಲ್ ಇಂಡಸ್ಟ್ರಿನಲ್ಲಿ ಕೆಲಸ ಮಾಡುತ್ತಿದ್ದರು. ಅವರಿಗೆ ಮೂವರು ಮಕ್ಕಳು ಇದ್ದರು ಎಂಬ ಮಾಹಿತಿ ಇದೆ.
ಇನ್ನೂ ಕೊಲೆಗೆ ಕಾರಣ ಇನ್ನೂ ಸಹ ಪತ್ತೆಯಾಗಿಲ್ಲ.ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಮುಗಿಲು ಮುಟ್ಟಿದ ಆಕ್ರಂದನ ಮುಗಿಲು ಮುಟ್ಟಿದೆ.