ಬಾಲಿವುಡ್ ಹಿರಿಯ ನಟ, ನಿರ್ದೇಶಕ ಮನೋಜ್ ಕುಮಾರ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಮುಂಬೈನ ಕೋಕಿಲಾಬೇನ್ ಧೀರಬಾಯಿ ಅಂಬಾನಿ ಕೊನೆಯುಸಿರೆಳದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತ ಇಡೀ ಚಿತ್ರರಂಗ ಮನೋಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದಿದೆ.
ಮನೋಜ್ ಕುಮಾರ್ ಮೂಲಕ ಹೆಸರು ಹರಿಕೃಷ್ಣನ್ ಗೋಸ್ವಾಮಿ. ಸಿನಿಮಾಗಾಗಿ ಇವರ ಹೆಸರು ಬದಲಿಸಿಕೊಂಡ ಅವರು 1957ರಲ್ಲಿ ಬಾಲಿವುಡ್ಗೆ ಎಂಟ್ರಿ ಕೊಟ್ಟಿರು. ಮನೋಜ್ ಕುಮಾರ್ ದೇಶಭಕ್ತಿ ಕುರಿತ ಚಲನಚಿತ್ರಗಳಲ್ಲಿ ಹೆಸರು ಮಾಡಿದ್ದರು. ದೇಶಭಕ್ತಿ ಪ್ರಧಾನ ಚಿತ್ರಗಳಿಂದಾಗಿಯೇ ಮನೋಜ್ ಕುಮಾರ್ ಅವರನ್ನು ‘ಭರತ್ ಕುಮಾರ್’ ಎಂದು ಕರೆಯಲಾಗುತ್ತಿತ್ತು.
1957 ರಲ್ಲಿ ಬಿಡುಗಡೆಯಾಗಿದ್ದ ‘ಫ್ಯಾಷನ್’ ಚಿತ್ರದೊಂದಿಗೆ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದರು. ‘ಕಚ್ಚಿ ಕಿ ಗುಡಿಯಾ’ 1960 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರು. ಇದು ಮನೋಜ್ ಕುಮಾರ್ಗೆ ದೊಡ್ಡ ಯಶಸ್ಸು ತಂದುಕೊಟ್ಟಿತು. ‘ಉಪ್ಕಾರ್’, ‘ಪತ್ತರ್ ಕೆ ಸನಮ್’, ‘ರೋಟಿ ಕಪ್ಡಾ ಔರ್ ಮಕಾನ್’, ‘ಸನ್ಯಾಸಿ’ ಮತ್ತು ‘ಕ್ರಾಂತಿ’ಯಂತಹ ಅದ್ಭುತ ಚಿತ್ರಗಳನ್ನು ಸಿನಿಮಾ ಇಂಡಸ್ಟ್ರೀಗೆ ಕಾಣಿಕೆಯಾಗಿ ನೀಡಿದ್ದಾರೆ.
ಮನೋಜ್ ಕುಮಾರ್ ಕೇವಲ ನಟನಾಗಿ ಅಷ್ಟೇ ಗುರುತಿಸಿಕೊಂಡಿರಲಿಲ್ಲ. 1972ರಲ್ಲಿ ತೆರೆಕಂಡ ‘ಶೋರ್’ ಸಿನಿಮಾವನ್ನು ಕೂಡ ನಿರ್ದೇಶನ ಮಾಡಿದ್ದರು. 1975ರಲ್ಲಿ ‘ರೋಟಿ, ಕಪಡಾ ಔರ್ ಮಕಾನ್’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಸಿನಿಮಾ ಫಿಲ್ಮ್ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಸಿಕ್ಕಿತ್ತು. ಮನೋಜ್ ಕುಮಾರ್ ಕಲಾ ಸೇವೆಯನ್ನು ಪರಿಗಣಿಸಿ, ಅವರಿಗೆ 1992ರಲ್ಲಿ ಪದ್ಮಶ್ರೀ ಪ್ರಶಸ್ತಿ, ಫಿಲ್ಮ್ ಫೇರ್ ಜೀವಮಾನ ಸಾಧನೆ ಪ್ರಶಸ್ತಿ, 2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಲಭಿಸಿದೆ.