ಯಾದಗಿರಿ : ನಾರಾಯಣಪುರ ಡ್ಯಾಂ ನೀರು ಹರಿಸದಂತೆ ಸರ್ಕಾರ ಸ್ಟೇ ತಂದ ವಿಚಾರವಾಗಿ ಮಾಜಿ ಸಚಿವ ರಾಜುಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದು ಯಾದಗಿರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಈ ವೇಳೆ ನಿನ್ನೆ ಕಲಬುರಗಿ ಹೈಕೋರ್ಟ್ ಕಾಲುವೆಗೆ ನೀರು ಹರಿಸಲು ಆದೇಶ ಮಾಡಿತ್ತು. ರೈತರು ಟ್ರ್ಯಾಕ್ಟರ್ ರ್ಯಾಲಿ, ರೈತ ಸಂಘಟನೆಗಳು ಪ್ರತಿಭಟನೆ ಮಾಡಿದ್ದವು. ಸರ್ವ ಸಂಘಟನೆಗಳ ಒಕ್ಕೂಟದಿಂದ ಯಾದಗಿರಿ ಬಂದ್ ಮಾಡಲಾಗಿತ್ತು. ಎಲ್ಲ ರೀತಿಯ ಹೋರಾಟ ಮಾಡಿದ್ರೂ ರೈತರಿಗೆ ನ್ಯಾಯ ಸಿಗಲಿಲ್ಲ. ಹೀಗಾಗಿ ನಾವು ಹೈಕೋರ್ಟ್ ಮೊರೆ ಹೋಗಿದ್ವು. ಕಲಬುರಗಿ ಹೈಕೋರ್ಟ್ ಮೂರು ದಿನ ನೀರು ಹರಿಸಲು ಆದೇಶ ಮಾಡಿತ್ತು. ಏಪ್ರಿಲ್ 4 ರಿಂದ 6 ರವರೆಗೆ ನೀರು ಹರಿಸುವಂತೆ ಆದೇಶ ಮಾಡಿತ್ತು. ಇದರಿಂದಾಗಿ ರೈತರು ಪುಲ್ ಖುಷಿ ಆಗಿದ್ದರು. ಆದರೆ ಇದೀಗ ಸರ್ಕಾರ ದ್ವಿಸದಸ್ಯ ಪೀಠಕ್ಕೆ ಹೋಗಿ ನೀರು ಹರಿಸದಂತೆ ಸ್ಟೇ ತಂದಿದೆ. ಕೋರ್ಟ್ ನಲ್ಲಿ ತೆಲಂಗಾಣಕ್ಕೆ ನೀರು ಬಿಟ್ಟು ರೈತರಿಗೆ ಯಾಕೆ ಕೊಡಲ್ಲ ಅಂತ ಚರ್ಚೆ ಆಗಿದೆ
ನಾರಾಯಣಪುರ ಡ್ಯಾಂ ನೀರಿಗಾಗಿ ಯಾದಗಿರಿ ಬಂದ್: ಅಂಗಡಿ ಮುಗ್ಗಟ್ಟು ಕ್ಲೋಸ್!
ಸಿಎಂ ಅವರು ಮೂರು ಟಿಎಂಸಿ ನೀರು ಬಿಡಲು ಮಹಾರಾಷ್ಟ್ರಕ್ಕೆ ಲೆಟರ್ ಬರೆದಿದ್ದಾರೆ. ತೆಲಂಗಾಣದವರು ನಿಮಗೆ ನೀರು ಕೊಡಿ ಅಂತ ಪತ್ರ ಬರೆದಿದ್ರಾ..?. ಎಂಟು ಜನ ಶಾಸಕರು ಬಂದು ಮನವಿ ಮಾಡಿದಕ್ಕೆ ನೀರು ಕೊಟ್ರಿ. ಮಹಾರಾಷ್ಟ್ರಕ್ಕೆ ಲೆಟರ್ ಬರಿತೀವಿ ಅಂತ ರೈತರ ಕಣ್ಣು ಒರೆಸುವ ಕೆಲಸ ಸಿದ್ದರಾಮಯ್ಯ ಸಾಹೇಬ್ರು ಮಾಡ್ತಿದ್ದಾರೆ ಎಂದು ಕಿಡಿಕಾರಿದರು.