ಯಾದಗಿರಿ : ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುವ ವಿಚಾರವಾಗಿ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಕೊನೆಗೂ ಮೌನಮುರಿದಿದ್ದಾರೆ. ರೈತರ ಮನವಿಗೆ ಸ್ಪಂದಿಸಿರುವ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಡ್ಯಾಂನಿಂದ ಕಾಲುವೆಗಳಿಗೆ ನೀರು ಬಿಡುವ ಬಗ್ಗೆ ಘೋಷಿಸಿದ್ದಾರೆ. ಹೀಗಾಗಿ ಇಂದು ರಾತ್ರಿ ಅಥವಾ ನಾಳೆ ಬೆಳಗ್ಗೆಯಿಂದಲೇ ನೀರು ಬಿಡುವ ಸಾಧ್ಯತೆ ಇದೆ.
ಈ ಬಗ್ಗೆ ಮಾತನಾಡಿರುವ ಶರಣಬಸಪ್ಪಗೌಡ ದರ್ಶನಾಪುರ ಅವರು, ರೈತರು ಆತಂಕ ಪಡುವ ಅಗತ್ಯವಿಲ್ಲ. ಸಿಎಂ ಹಾಗೂ ಡಿಸಿಎಂ ರೈತರು ಬಡವರ ಪರವಾಗಿದ್ದಾರೆ. ರೈತರ ಸಲಹೆ ಮೇರೆಗೆ ಮಾರ್ಚ್ 22 ರ ತನಕ ನೀರು ಬಿಟ್ಟು ಬಂದ್ ಮಾಡಲಾಗಿತ್ತು. ಬಳಿಕ ಇನ್ನು ಎರಡ್ಮೂರು ದಿನ ನೀರು ಬೇಕು ಅಂತ ಹೇಳಿದ್ದರಿಂದ ಮಾರ್ಚ್ 25 ರ ರಾತ್ರಿ ವರೆಗೆ ನೀರು ಬಿಡಲಾಗಿತ್ತು. ನೀರಾವರಿ ಸಲಹ ಸಮಿತಿ ನಿರ್ಧಾರದಂತೆ ನೀರು ಬಿಡಲಾಗಿತ್ತು
ನಾರಾಯಣಪುರ ಡ್ಯಾಂ ನೀರು ಹರಿಸದಂತೆ ಸ್ಠೇ ತಂದ ಸರ್ಕಾರ ; ಮಾಜಿ ಸಚಿವ ರಾಜುಗೌಡ ಕಿಡಿ
ನೀರಿನ ಅವಶ್ಯಕತೆ ಮನಗೊಂಡು ಏಫ್ರಿಲ್ 1 ರಂದು ನಾನು ಶಾಸಕರು ಹಾಗೂ ರೈತ ಮುಖಂಡರು ಡಿಸಿಎಂ ಅವರಿಗೆ ಭೇಟಿಯಾಗಿ ಮನವರಿಕೆ ಮಾಡಿದ್ದೆವು. ರೈತ ಮುಖಂಡರು ಬೆಳೆಗಳ ಸ್ಥಿತಿ ಬಗ್ಗೆ ಮನವರಿಕೆ ಮಾಡಿದ್ದಾರೆ. ಕೂಡಲೇ ಡಿಸಿಎಂ ಅವರು ಎಂಡಿ ಜೊತೆ ಮಾತಾಡಿ ಮೂರು ದಿನ ನೀರು ಬಿಡಲು ಹೇಳಿದ್ದಾರೆ. ನಿನ್ನೆ ಕೋರ್ಟ್ ಆದೇಶ ಮಾಡಿದೆ ಆದ್ರೆ ನ್ಯಾಯಾಲಯಕ್ಕೆ ಕೆಲವರು ತಪ್ಪು ಮಾಹಿತಿ ನೀಡಿದ್ದಾರೆ. ನ್ಯಾಯಾಲಯಕ್ಕೆ ಸರ್ಕಾರದಿಂದ ಸರಿಯಾದ ಮಾಹಿತಿ ನೀಡಿದ ಮೇಲೆ ತಡೆಯಾಜ್ಞೆ ನೀಡಿದೆ. ಆದರೆ ರೈತರು ಯಾರು ಗಾಬರಿ ಪಡುವ ಅವಶ್ಯಕತೆಯಿಲ್ಲ. ಡಿಸಿಎಂ ಡಿಕೆ ಶಿವಕುಮಾರ್ ಅವರು ದೆಹಲಿಯಲ್ಲಿದ್ದು ನೀರು ಬಿಡಲು ಆದೇಶ ಮಾಡಿದ್ದಾರೆ. ಮುಂದೆ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ಸರ್ಕಾರ ಕ್ರಮಕೈಗೊಳ್ಳುತ್ತೆ ಎಂದರು.