ಬೆಂಗಳೂರು:- ಕಲ್ಲಂಗಡಿ, ಕಬಾಬ್, ಗೋಬಿ ಮಂಚೂರಿ, ಪನ್ನೀರ್, ಗೋಲ್ ಗಪ್ಪಾ ಬೆನ್ನಲ್ಲೇ ಐಸ್ಕ್ರೀಂ ಪ್ರಿಯರಿಗೆ ಆಹಾರ ಸುರಕ್ಷತಾ ಇಲಾಖೆ ಶಾಕ್ ನೀಡಿದ್ದು, ಐಸ್ಕ್ರೀಂ ಘಟಕಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಐಸ್ಕ್ರೀಂ ಸ್ಯಾಂಪಲ್ಗಳನ್ನು ಲ್ಯಾಬ್ ಗೆ ರವಾನೆ ಮಾಡಿದ್ದ ವರದಿ ಬಂದಿದೆ.
ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್ ; ಡಿವೈಎಸ್ಪಿ ಕಚೇರಿಗೆ ಮುತ್ತಿಗೆಗೆ ಯತ್ನಿಸಿದ ಬಿಜೆಪಿ ನಾಯಕರು
ಬಿಸಿಲ ಬೇಗೆ ಹೆಚ್ಚಾಗಿರುವುದರಿಂದ ಜನರು ತಂಪು ಪಾನೀಯವನ್ನ, ಐಸ್ಕ್ರೀಂ ಅನ್ನು ಜಾಸ್ತಿ ಸೇವಿಸುತ್ತಾರೆ. ಐಸ್ಕ್ರೀಂನಲ್ಲಿ ಕಲರ್ ಬಳಸಿರುವ ಕಾರಣ ಎಚ್ಚೆತ್ತುಕೊಂಡ ಅಧಿಕಾರಿಗಳು ಐಸ್ಕ್ರೀಂ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಸ್ಯಾಂಪಲ್ಗಳನ್ನು ಲ್ಯಾಬ್ಗೆ ರವಾನೆ ಮಾಡಿದ್ದರು. ಇದೀಗ ರಿಸಲ್ಟ್ ಬಂದಿದೆ.
ಕರ್ನಾಟಕದ ಸ್ಥಳೀಯ ಐಸ್ ಕ್ರೀಮ್, ಐಸ್ ಕ್ಯಾಂಡಿ ಮತ್ತು ತಂಪು ಪಾನೀಯ ಉತ್ಪಾದನಾ ಘಟಕಗಳಲ್ಲಿ ಅರ್ಧದಷ್ಟು ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಬೆರೆಸಿ ಮಾರಾಟ ಮಾಡುತ್ತಿದೆ ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ತಿಳಿಸಿದೆ. ಈ ರೀತಿ ಆಹಾರ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವ ತಯಾರಕರಿಗೆ ದಂಡ ಹಾಕಿ ಎಚ್ಚರಿಕೆ ನೀಡಿರುವುದು ಕೂಡ ಕಂಡುಬಂದಿದೆ.
ಸತತ ಎರಡು ದಿನಗಳ ಕಾಲ ಎಫ್ಡಿಎ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದ್ದು, ಐಸ್ ಕ್ರೀಮ್ ಗಳಲ್ಲಿ ಡಿಟರ್ಜೆಂಟ್ ಪುಡಿಯನ್ನು ಮತ್ತು ಮೂಳೆಗಳನ್ನು ದುರ್ಬಲಗೊಳಿಸುವ ಫಾಸ್ಪರಿಕ್ ಆಮ್ಲವನ್ನು ತಂಪು ಪಾನೀಯಗಳಲ್ಲಿ ಬಳಕೆ ಮಾಡುತ್ತಿರುವುದನ್ನು ಕಂಡು ಹಿಡಿದಿದ್ದು, ವ್ಯಾಪಾರಕರ ದುಷ್ಕೃತ್ಯವನ್ನು ಜನರ ಮುಂದಿಟ್ಟಿದೆ. ಐಸ್ ಕ್ರೀಮ್, ಮತ್ತು ತಂಪು ಪಾನೀಯಗಳ ತಯಾರಕರು ತಮ್ಮ ವೆಚ್ಚವನ್ನು ಕಡಿಮೆ ಮಾಡಿಕೊಳ್ಳಲು, ಡಿಟರ್ಜೆಂಟ್, ಯೂರಿಯಾ ಅಥವಾ ಪಿಷ್ಟದಿಂದ ತಯಾರಿಸಿದ ಸಂಶ್ಲೇಷಿತ ಹಾಲನ್ನು ಬಳಸುತ್ತಿದ್ದು, ಸಕ್ಕರೆಯ ಬದಲು, ರುಚಿ ಮತ್ತು ಬಣ್ಣ ಹೆಚ್ಚಿಸಲು ಸ್ಯಾಕರಿನ್ ಮತ್ತು ಆಹಾರಗಳಲ್ಲಿ ಬಳಕೆ ಮಾಡಲು ಅನುಮತಿ ಇರದಂತಹ ಬಣ್ಣಗಳನ್ನು ಬಳಸುತ್ತಿದ್ದಾರೆ. ಇದಲ್ಲದೆ, ಅನೇಕ ಐಸ್ ಕ್ಯಾಂಡಿ ಮತ್ತು ತಂಪು ಪಾನೀಯಗಳ ಘಟಕಗಳಲ್ಲಿ ಕಲುಷಿತವಾಗಿರುವ ಅಥವಾ ಕುಡಿಯಲು ಯೋಗ್ಯವಲ್ಲದ ನೀರನ್ನು ಬಳಸುತ್ತಿರುವುದನ್ನು ಅಧಿಕಾರಿಗಳು ಕಂಡುಹಿಡಿದಿದ್ದಾರೆ.
220 ಅಂಗಡಿಗಳಲ್ಲಿ 97 ಅಂಗಡಿಗಳಿಗೆ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ನೋಟಿಸ್ ನೀಡಿದ್ದು 38,000 ರೂ.ಗಳ ದಂಡವನ್ನು ವಿಧಿಸಿದೆ. ಜೊತೆಗೆ ತಕ್ಷಣ ಎಫ್ಡಿಎ ನಿಯಮಗಳನ್ನು ಅನುಸರಿಸಬೇಕು ಎಂದು ಎಚ್ಚರಿಕೆ ನೀಡಿದೆ. ಐಸ್ ಕ್ರೀಮ್ ಮತ್ತು ತಂಪು ಪಾನೀಯ ತಯಾರಕರಿಗೆ ದಂಡ ವಿಧಿಸಿ ಎಚ್ಚರಿಕೆ ನೀಡುವುದರ ಜೊತೆಗೆ ಕೆಲವು ರೆಸ್ಟೋರೆಂಟ್, ಮೆಸ್ ಮತ್ತು ಹೋಟೆಲ್ ಗಳಲ್ಲಿಯೂ ತಪಾಸಣೆ ನಡೆಸಿದ್ದು, 590 ಸಂಸ್ಥೆಗಳ ಪೈಕಿ 214 ಸಂಸ್ಥೆಗಳಿಗೆ ಹೆಚ್ಚುವರಿಯಾಗಿ 1,15,000 ರೂ.ಗಳ ದಂಡ ವಿಧಿಸಿದೆ.