ತುಳಸಿಯು ಭಗವಾನ್ ವಿಷ್ಣುವಿಗೆ ಅತ್ಯಂತ ಪ್ರಿಯ. ತುಳಸಿ ಗಿಡವನ್ನು ತಾಯಿ ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಯಾರ ಮನೆಯಲ್ಲಿ ತುಳಸಿ ಗಿಡವು ಹಸಿರಿನಿಂದ ಕೂಡಿರುತ್ತದೆಯೋ, ಆ ಮನೆಯವರು ಸದಾ ಸಂತೋಷದಿಂದ ಇರುತ್ತಾರೆ ಮತ್ತು ಅಂತಹ ಮನೆಗಳಲ್ಲಿ ಲಕ್ಷ್ಮಿಯೂ ಸದಾ ನೆಲೆಸುತ್ತಾಳೆ ಎಂಬ ನಂಬಿಕೆಯಿದೆ. ಹಾಗಾಗಿ ಲಕ್ಷ್ಮಿಯ ಆಶೀರ್ವಾದವು ನಿಮ್ಮ ಮನೆಯಲ್ಲಿ ಉಳಿಯಲು, ತುಳಸಿಯನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ತುಂಬಾ ಅವಶ್ಯಕ. ತುಳಸಿಯ ದಿಕ್ಕಿನ ವಿಶೇಷ ಮಹತ್ವವನ್ನು ವಾಸ್ತುವಿನಲ್ಲೂ ಹೇಳಲಾಗಿದೆ.
ರಜನಿ-ಕಮಲ್-ಅಜಿತ್-ಸೂರ್ಯ ಅಲ್ಲ.. ತಮಿಳು ಚಿತ್ರರಂಗದ ನಂಬರ್-1 ಕುಬೇರ ಯಾರು?
ತುಳಸಿಗಿಡ ಗಿಡ ಲಕ್ಷ್ಮಿ ದೇವಿಯ ರೂಪವಾದರೆ, ಇನ್ನೊಂದೆಡೆ ಇದು ವಿಷ್ಣು ದೇವನಿಗೆ ಪ್ರಿಯವಾದ ಗಿಡವಾಗಿದೆ. ಹಾಗಾಗಿ, ತುಳಸಿಯನ್ನು ಮನೆಯಲ್ಲಿ ನೆಡುವುದರಿಂದ ಸಂತೋಷ, ಸಮೃದ್ಧಿ ಮತ್ತು ಶಾಂತಿ ನೆಲೆಯಾಗುತ್ತದೆ ಎನ್ನುವ ನಂಬಿಕೆಯಿದೆ. ದೇವರ ಪೂಜೆಯಿಂದ ಹಿಡಿದು ಪ್ರಸಾದವನ್ನು ತಯಾರಿಸಿ, ದೇವರಿಗೆ ನೈವೇದ್ಯ ಅರ್ಪಿಸುವವರೆಗೂ ತುಳಸಿಯನ್ನು ವಿವಿಧ ರೂಪದಲ್ಲಿ ಬಳಸಲಾಗುತ್ತದೆ.
ತುಳಸಿಗೆ ನಮ್ಮ ಜೀವನದ ಅನೇಕ ಸಮಸ್ಯೆಗಳನ್ನು, ತೊಂದರೆಗಳನ್ನು ದೂರ ಮಾಡುವ ಶಕ್ತಿಯಿದೆ. ತುಳಸಿ ಗಿಡದಲ್ಲಿ ನಾಣ್ಯ ಇಡುವುದನ್ನು ನೀವು ಗಮನಿಸಿರಬಹುದು. ಈ ನಾಣ್ಯವನ್ನು ತುಳಸಿ ಗಿಡದ ಮಣ್ಣಿನಲ್ಲಿ ಯಾಕೆ ಹಾಕಿಡುತ್ತಾರೆ.?
. ಸುಖ, ಸಮೃದ್ಧಿ ಹೆಚ್ಚಾಗುವುದು:
ತುಳಸಿ ಗಿಡದ ಮಣ್ಣಿನಲ್ಲಿ ನಾಣ್ಯವನ್ನು ಹಾಕಿಡುವುದು ಇಂದು, ನಿನ್ನೆಯ ಪದ್ಧತಿಯಲ್ಲಿ ತುಂಬಾನೇ ಹಿಂದಿನಿಂದಲೂ ಜನರು ಈ ರೀತಿಯಾಗಿ ತುಳಸಿ ಗಿಡದ ಮಣ್ಣಿನಲ್ಲಿ ಹಾಕಿಡುತ್ತಿದ್ದಾರೆ. ತುಳಸಿ ಗಿಡದ ಮಣ್ಣಿನಲ್ಲಿ ನಾಣ್ಯವನ್ನು ಹಾಕಿಡುವುದು ಸುಖ, ಸಮೃದ್ಧಿಯ ಸಂಕೇತವಾಗಿರುತ್ತದೆ. ತುಳಸಿ ಗಿಡದ ಮಣ್ಣಿನಲ್ಲಿ ನಾಣ್ಯನಲ್ಲಿ ಹಾಕಿಡುವುದರಿಂದ ಆ ತುಳಸಿ ಗಿಡ ಬೆಳದಷ್ಟು ಚೆನ್ನಾಗಿ ಮನೆ ಅಭಿವೃದ್ಧಿಯಾಗುತ್ತದೆ. ಧನ, ಸಂಪತ್ತು ಮತ್ತು ಸಮೃದ್ಧಿ ಆ ಮನೆಯಲ್ಲಿ ತುಂಬಿರುತ್ತದೆ ಎನ್ನುವ ನಂಬಿಕೆಯಿದೆ.
ಶಾಸ್ತ್ರದಲ್ಲಿನ ಮಾಹಿತಿ:
ಇದಕ್ಕೆ ಶಾಸ್ತ್ರದಲ್ಲೂ ಅದರದ್ದೇ ಆದ ಮಹತ್ವವಿದೆ. ಶಾಸ್ತ್ರದಲ್ಲಿ ಉಲ್ಲೇಖಿಸಿರುವ ಪ್ರಕಾರ, ತುಳಸಿ ಗಿಡದ ಮಣ್ಣಿನಲ್ಲಿ ಒಂದು ರೂಪಾಯಿ ನಾಣ್ಯವನ್ನು ಹಾಕಿಡುವುದರಿಂದ ಮನೆಯಲ್ಲಿನ ಎಲ್ಲಾ ರೀತಿಯ ವಾಸ್ತು ದೋಷಗಳು ಪರಿಹಾರವಾಗುವುದು. ಯಾವುದೇ ರೀತಿಯಾದ ವಾಸ್ತು ದೋಷವು ಮನೆಯಲ್ಲಿ ತೊಂದರೆಯನ್ನು ಸೃಷ್ಟಿಸುತ್ತಿದ್ದರೆ ಅಂತಹ ಸಂದರ್ಭದಲ್ಲಿ ಮನೆಯಲ್ಲಿರುವ ತುಳಸಿ ಗಿಡದ ಮಣ್ಣಿನಲ್ಲಿ ಒಂದು ರೂಪಾಯಿ ನಾಣ್ಯವನ್ನು ಹಾಕಿಡಿ.
3. ಈ ಲೋಹದ ನಾಣ್ಯವನ್ನು ತುಳಸಿಯ ಮಣ್ಣಿನಲ್ಲಿ ಹಾಕಿಡಿ:
ಶಾಸ್ತ್ರದ ಪ್ರಕಾರ ಮನೆಯಲ್ಲಿರುವ ತುಳಸಿ ಗಿಡದ ಮಣ್ಣಿನಲ್ಲಿ ಒಂದು ರೂಪಾಯಿ ತಾಮ್ರ ಅಥವಾ ಬೆಳ್ಳಿಯ ನಾಣ್ಯವನ್ನು ಹಾಕಿಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿಗಳ ಸಂಚಾರ ಹೆಚ್ಚಾಗುತ್ತದೆ. ದೈವಿಕ ಶಕ್ತಿಯು ಮನೆಯ ಮೇಲೆ ಆಶೀರ್ವಾದವನ್ನು ಇಡುತ್ತಾರೆ. ಇದು ಕುಟುಂಬದಲ್ಲಿ ಸಂತೋಷ, ಸಮೃದ್ಧಿಯ ವಾತಾವರಣವನ್ನು ಸೃಷ್ಟಿಸುತ್ತದೆ ಎನ್ನುವ ನಂಬಿಕೆಯಿದೆ.
4. ಈ ಸಮಸ್ಯೆಗಳು ಪರಿಹಾರವಾಗುವುದು:
ತುಳಸಿ ಗಿಡದ ಮಣ್ಣಿನಲ್ಲಿ ಒಂದು ರೂಪಾಯಿ ನಾಣ್ಯವನ್ನು ಹಾಕಿಡುವುದರಿಂದ ಶನಿ ದೋಷ ಮತ್ತು ರಾಹು ದೋಷ ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಒಂದು ವೇಳೆ ನಿಮ್ಮ ಕುಟುಂಬದ ಸದಸ್ಯರ ನಡುವೆ ಆಗಾಗ್ಗೆ ಸಮಸ್ಯೆಗಳು, ಮನಸ್ಥಾಪಗಳು ಎದುರಾಗುತ್ತಿದ್ದರೆ, ಕುಟುಂಬದ ಸದಸ್ಯರ ನಡುವೆ ವೈಮನಸ್ಸು ಹುಟ್ಟಿಕೊಂಡಿದ್ದರೆ ಅಂತಹ ಸಂದರ್ಭದಲ್ಲಿ ಮನೆಯ ತುಳಸಿ ಗಿಡದ ಮಣ್ಣಿನಲ್ಲಿ ನಾಣ್ಯಗಳನ್ನು ಹಾಕಿ. ಈ ರೀತಿ ಮಾಡುವುದರಿಂದ ಕುಟುಂಬದ ಸದಸ್ಯರ ನಡುವೆ ಪ್ರೀತಿ, ಸಾಮರಸ್ಯ ಸೃಷ್ಟಿಯಾಗುವುದು.
ಮನೆಯ ತುಳಸಿ ಗಿಡದ ಮಣ್ಣಿನಲ್ಲಿ ಈ ರೀತಿ ಒಂದು ರೂಪಾಯಿ ನಾಣ್ಯವನ್ನು ಹಾಕಿಡುವುದರ ಹಿಂದೆಯೂ ಅದರದ್ದೇ ಆದ ವಿಶೇಷ ಅರ್ಥವಿದೆ. ಈ ರೀತಿ ನಾಣ್ಯವನ್ನು ಹಾಕಿಡುವುದರಿಂದ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಯಾಗುತ್ತದೆ. ಕುಟುಂಬದಲ್ಲಿನ ಎಲ್ಲಾ ರೀತಿಯ ಸಮಸ್ಯೆಗಳು ಪರಿಹಾರವಾಗುವುದು.