ಮಂಡ್ಯ : ಬಿಜೆಪಿ ಹಾಗೂ ಆರ್ಎಸ್ಎಸ್ ವಿರುದ್ದ ಶಾಸಕ ಗಣಿಗ ರವಿಕುಮಾರ್ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ನಡೆದ ಬಾಬು ಜಗಜೀವನರಾಂ ಅವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಈ ವೇಳೆ 1977 ರಲ್ಲಿ ದಲಿತ ಪ್ರಧಾನಿ ಆಗದಂತೆ ತಡೆದಿದ್ದೆ ಬಿಜೆಪಿ ಹಾಗೂ ಆರ್ಎಸ್ಎಸ್ನವರು. ಬಾಂಗ್ಲಾ ವಿಮೋಚನಾ ವೇಳೆ ಜಗತ್ತಿಗೆ ಊಟ ಹಾಕಿದ ಹಸಿರು ಹರಿಕಾರ ಬಾಬು ಜಗಜೀವನರಾಂ. 1977ರಲ್ಲಿ ಕಾಂಗ್ರಸ್ ಕಟ್ಟಿ ಪ್ರಧಾನಿ ರೇಸ್ ನಲ್ಲಿ ಬಾಬು ಜಗಜೀವನರಾಂ ಇದ್ದರು. ಆಗ ಆರ್ಎಸ್ಎಸ್ ಹಾಗೂ ಬಿಜೆಪಿ ಕುತಂತ್ರದಿಂದ ದಲಿತ ಪ್ರಧಾನಿ ತಪ್ಪಿಸಿದ್ರು.
ಬೆಲೆ ಏರಿಕೆ ಖಂಡಿಸಿ ಹುಬ್ಬಳ್ಳಿಯಲ್ಲಿ ಬಿಜೆಪಿ ಪ್ರತಿಭಟನೆ ; ಸರ್ಕಾರದ ವಿರುದ್ಧ ಕಿಡಿ
ಬಾಬು ಜಗಜೀವನರಾಂ ಬದಲು ಮೊರಾರ್ಜಿ ದೇಸಾಯಿ ಹೆಸರನ್ನು ಜಯಪ್ರಕಾಶ್ ನಾರಾಯಣ್ ಅವರ ಬಾಯಲ್ಲಿ ಹೇಳಿಸಿದ್ರು. ದಲಿತ ಪಿಎಂ ಆಗೋದನ್ನ ತಪ್ಪಿಸಿದ ಕೀರ್ತಿ ಬಿಜೆಪಿ ಮತ್ತು ಆರ್ಎಸ್ಎಸ್ಗೆ ಸಲ್ಲುತ್ತೆ ಸಂವಿಧಾನವನ್ನ ಗೌರವಿಸುವವರು ಇದನ್ನ ಗಮನಿಸಬೇಕಿದೆ ಎಂದರು.