ಚಿತ್ರದುರ್ಗ ಮೂಲಕದ ರೇಣುಕಾಸ್ವಾಮಿ ಕೊಲೆ ಕೇಸ್ ನ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 17 ಜನ ಆರೋಪಿಗಳು ಇಂದು ಕೋರ್ಟ್ ಗೆ ಹಾಜರಾಗಬೇಕಿತ್ತು. ಬೆಂಗಳೂರಿನ ಸಿಸಿಹೆಚ್ 57ನೇ ಕೋರ್ಟ್ಗೆ ಪವಿತ್ರಾ ಗೌಡ ಹಾಜರಾಗಿದ್ದು, ಆದ್ರೆ ದರ್ಶನ್ ಗೈರಾಗಿದ್ದಾರೆ. ಬೆನ್ನು ನೋವಿನ ಕಾರಣ ನೀಡಿ ಜಾಮೀನು ಪಡೆದಿದ್ದ ದಚ್ಚು ಇಂದು ಅದೇ ಕಾರಣ ಹೇಳಿ ಕೋರ್ಟ್ ಗೆ ಬಂದಿಲ್ಲ. ಬೆನ್ನು ನೋವಿನ ನೀಡಿ ಅವರು ವಿನಾಯಿತಿ ಕೇಳಿದ್ದಾರೆ. ಅವರ ಪರ ವಕೀಲರು ಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ.
ರೇಣುಕಾ ಸ್ವಾಮಿ ಮರ್ಡರ್ ಕೇಸ್ ನ ಎ1 ಆರೋಪಿ ಪವಿತ್ರಾ ಗೌಡ, ಇತರೆ ಆರೋಪಿಗಳಾದ ವಿನಯ್, ನಾಗರಾಜ್, ನಂದಿಶ್, ಜಗದೀಶ್, ಪವನ್, ಲಕ್ಷ್ಮಣ, ದೀಪಕ್, ಪ್ರದೋಶ್, ಕಾರ್ತಿಕ್, ಕೇಶವ ಮೂರ್ತಿ ಸೇರಿ ಎಲ್ಲಾ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ನಟ ದರ್ಶನ್ ಮಾತ್ರ ಅಬ್ಸೆಂಟ್ ಆಗಿದ್ದಾರೆ.
ʼಡೆವಿಲ್ʼ ಶೂಟಿಂಗ್ ನಲ್ಲಿ ದಾಸ ಬ್ಯುಸಿ!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹುನಿರೀಕ್ಷಿತ ಸಿನಿಮಾ ಡೆವಿಲ್ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮೂರನೇ ಹಂತದ ಚಿತ್ರೀಕರಣ ಮುಗಿಸಿಕೊಂಡು ರಾಜಸ್ಥಾನದಿಂದ ವಾಪಸ್ ಆಗಿದ್ದಾರೆ. ಶೀಘ್ರದಲ್ಲೇ ನಾಲ್ಕನೇ ಹಂತದ ಶೂಟಿಂಗ್ ಗೆ ಹೈದ್ರಾಬಾದ್ ಗೆ ಹಾರಲಿದ್ದಾರೆ. ಇನ್ನು, ಪ್ರಕಾಶ್ ವೀರ್ ನಿರ್ದೇಶನದಲ್ಲಿ ಡೆವಿಲ್ ಸಿನಿಮಾ ಮೂಡಿ ಬರುತ್ತಿದೆ.