ಹಾವೇರಿ : ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಅಹೋರಾತ್ರಿ ಪ್ರತಿಭಟನೆ ನಡೆಸಲಾಯ್ತು. ಸಂಸದ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲ ನಗರದ ಮೈಲಾರ ಮಹಾದೇವಪ್ಪ ಸರ್ಕಲ್ ನಲ್ಲಿ ಪ್ರತಿಭಟನೆ ನಡೆದಿದ್ದು, ಬೆಲೆ ಏರಿಕೆಯ ಪೋಸ್ಟ್ ಕಾರ್ಡ್ ಗಳ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ಬಿ.ಸಿ ಪಾಟೀಲ್ , ಬಸವರಾಜ್ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಸೇರಿದಂತೆ ನೂರಾರು ಕಾರ್ಯಕರ್ತರು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೇ ಮಾತನಾಡಿದ ಸಂಸದ ಬಸವರಾಜ್ ಬೊಮ್ಮಾಯಿ, ಕ್ಯಾಬಿನೆಟ್ ನಲ್ಲಿ ಜಾತಿ ಗಣತಿ ವರದಿ ಮಂಡನೆ ವಿಚಾರವಾಗಿ ಮಾತನಾಡಿ, ಜಾತಿಗಣತಿ ವರದಿ ವಿಚಾರವಾಗಿ ಪ್ರತಿಕ್ರಿಯಿಸಿ, ಏನ್ ನಿರ್ಧಾರ ಮಾಡ್ತೀರಾ ಮಾಡಿ,ಎಲ್ಲಾ ಬಹಿರಂಗವಾಗಿ ಬರಲಿ. ವರದಿ ಕೊಟ್ಟು ಒಂದು ವರ್ಷ ಆಯ್ತು. ಯಾಕೆ ಮುಖ್ಯಮಂತ್ರಿ ಮುಚ್ಚಿಟ್ಟುಕೊಂಡಿದ್ದಾರೆ ನನಗೆ ಅರ್ಥ ಆಗ್ತಿಲ್ಲ. ನಾಳೆ ಅವರು ಮಂಡನೆ ಮಾಡಲಿ..ಆ ಬಳಿಕ ಪ್ರತಿಕ್ರಿಯೆ ನೀಡುವೆ ಎಂದರು.
ಕರ್ನಾಟಕ ಸರಕಾರದಿಂದ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಹಾಲಿನಿಂದ ಹಿಡಿದು ಆಲ್ಕೋಹಾಲ್ ವರೆಗೂ ಬೆಲೆ ಏರಿಕೆಯಾಗಿದೆ. ವರ್ಷನ ಪೂರ್ತಿಯಾಗಿ ಒಂದೊಂದು ಒಂದು ಬೆಲೆ ಏರಿಕೆ ಮಾಡ್ತಿದ್ದಾರೆ. ರಾಜ್ಯದಲ್ಲಿ ಸರ್ಕಾರ ಸಂಪೂರ್ಣವಾಗಿ ದಿವಾಳಿಯಾಗಿದೆ. ಮುಂದೆ ಸರ್ಕಾರಿ ನೌಕಕರಿಗೂ ಸಂಬಳ ಕೊಡಲು ಕಷ್ಟ ಆಗ್ತಿದೆ. ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣವಾಗಿ ಶೂನ್ಯವಾಗಿದೆ. ಅವರ ಶಾಸಕರೇ ಅಭಿವೃದ್ಧಿಯಾಗ್ತಿಲ್ಲ ಅಂತೇಳಿ ಡಂಗುರು ಹೊಡಿತಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ಅನ್ನೋದು ತುಂಬಿ ತುಳುಕುತಿದೆ. ಭ್ರಷ್ಟಾಚಾರಯಿದೆ ಅಂತೇಳಿ ಸಿಎಂ ರ ಆರ್ಥಿಕ ಸಲಹೆಗಾರರು ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.