ವಿಜಯಪುರ : ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊಲೆಗೆ ಸಂಚು ನಡೆಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಯತ್ನಾಳ್ ಕೊಲೆಗೆ ಸಂಚು ರೂಪಿಸಿದ್ದಾರೆ ಎನ್ನಲಾದ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದೆ.
ಹುಬ್ಬಳ್ಳಿಯ ಬಾನಿ ಓಣಿಯಲ್ಲಿ ನಡೆದಿದ್ದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್ ಮಾತನಾಡಿದ್ದು, ಈ ವೇಳೆ ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು.
ಇದೀಗ ಯತ್ನಾಳ್ ವಿರುದ್ಧ ಪ್ರತಿಭಟನೆ ನಡೆಸಲು ಒಗ್ಗಟ್ಟಾಗಿ ಎನ್ನುವ ಆಡಿಯೋ ವೈರಲ್ ಆಗುತ್ತಿದೆ. ಪ್ರವಾದಿ ವಿರುದ್ಧ ಮಾತನಾಡಿದ ಯತ್ನಾಳ್ ವಿರುದ್ಧ 15 ರಂದು ಮೋರ್ಚಾ ನಡೆಸಲು ವಿಜಯಪುರದಲ್ಲಿ ಸಭೆ ಮಾಡಿದ್ದೇವೆ. ಎನ್ಎಂಸಿಯಿಂದ ಮೀಟಿಂಗ್, ಸಭೆಯಲ್ಲೆ ಮುಖಂಡರು, ಉಲ್ಮಾಗಳ ಸೇರಿ ಸಭೆಯಾಗಿದೆ. ಪೈಗಂಬರ್ ವಿರುದ್ಧ ಮಾತನಾಡಿದ ಯತ್ನಾಳ ಮನೆಗೆ ರ್ಯಾಲಿ ಹೊರಡಲು ಯುವಕನ ಪ್ರಚೋದನೆ ನೀಡಿದ್ದಾನೆ.
ನೀವು.. ನಿಮ್ಮ ಗೆಳೆಯರು, ಹತ್ತಿರದ ಊರಿನ ಗೆಳೆಯರನ್ನು ಸಹ ರ್ಯಾಲಿಗೆ ಕರೆ ತನ್ನಿ.. ಈ ಬಾರಿ ಯತ್ನಾಳನ ಪೈನಲ್ ಡೇ. ಈ ಬಾರಿ ಅರೆಸ್ಟ್ ಆಗಬೇಕು ಇಲ್ಲ ಆತನ ತಲೆಯನ್ನ ಕತ್ತರಿಸಬೇಕು.. ಸರ ತನ್ ಸೇ ಜುದಾ ಎಂದು ಆಡಿಯೋದಲ್ಲಿ ಉಲ್ಲೇಖಿಸಲಾಗಿದ್ದು, ಸದ್ಯ ಈ ಆಡಿಯೋ ಇದೀಗ ವಿಜಯಪುರದಲ್ಲಿ ಆತಂಕ ಸೃಷ್ಟಿಸಿದೆ.