ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರಿ ಸದ್ದು ಮಾಡಿದ್ದ 40% ಕಮೀಷನ್ ಪ್ರಕರಣದ ತನಿಖೆಯನ್ನು ಎಸ್ ಐಟಿಗೆ ವಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಎಸ್ ಐಟಿಯಿಂದ ತನಿಖೆ ನಡೆಸಿ 2 ತಿಂಗಳಲ್ಲಿ ವರದಿ ಪಡೆಯಲು ತೀರ್ಮಾನಿಸಲಾಗಿದೆ.
ಸಂಪುಟ ಸಭೆ ಬಳಕ ವಿವರ ನೀಡಿದ ಕಾನೂನು ಸಚಿವ ಹೆಚ್.ಕೆ ಪಾಟೀಲ್, ಇಂದು 21 ವಿಷಯಗಳನ್ನ ಚರ್ಚಿಸಿ ಹಲವು ನಿರ್ಣಯ ತೆಗೆದುಕೊಂಡಿದ್ದೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಗುತ್ತಿಗೆದಾರರು ಮಾಡಿರೋ 40% ಕಮೀಷನ್ ಆರೋಪ ಬಗ್ಗೆ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ ನೇತೃತ್ವದಲ್ಲಿ ತನಿಖಾ ಆಯೋಗ ರಚನೆ ಮಾಡಲಾಗಿತ್ತು. ನಾಗಮೋಹನ್ ದಾಸ್ ಅವರು ಸಲ್ಲಿಸಿದ ವರದಿಯನ್ನು ಸಂಪುಟ ಸಭೆಗೆ ಸಲ್ಲಿಸಲಾಯ್ತು ಎಂದು ತಿಳಿಸಿದರು.
1729 ಕಾಮಗಾರಿಗಳಲ್ಲಿ ಅಕ್ರಮ
ನಾಗಮೋಹನ್ ದಾಸ್ ನೇನೃತ್ವದ ವಿಚಾರಣಾ ಆಯೋಗ ವಿಶೇಷ ಸಲಹೆಗಳನ್ನ ನೀಡಿದೆ.
3 ಲಕ್ಷ ಕಾಮಗಾರಿಗಳ ಪೈಕಿ 1729 ಕಾಮಗಾರಿಗಳ ಬಗ್ಗೆ ಆರೋಪ ಬಂದಿದೆ. 40% ಕಮಿಷನ್ ವಿಚಾರವನ್ನು ಸಚಿವ ಸಂಪುಟ ಗಂಭೀರವಾಗಿ ಪರಿಗಣಿಸಿದೆ. ಗುತ್ತಿಗೆದಾರರು ಕೆಲಸ ಮಾಡಿರೋ ಬಗ್ಗೆ ಸಂಶಯ ಇದೆ. ಕೆಲವು ಕಾಮಗಾರಿಗಳನ್ನ ಮಾಡದೇ ಅನುದಾನ ಬಿಡುಗಡೆ ಆಗಿದೆ. ಹೀಗಾಗಿ
SIಖಿ ತನಿಖೆ ಮಾಡಲು ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಲಾಗಿದೆ..
ಎಸ್ ಐಟಿಗೆ ಟೆಕ್ನಿಕಲ್ ಎಕ್ಸ್ ಪರ್ಟ್ ತಂಡ ಸೇರಿಸಲು ತೀರ್ಮಾನ ಮಾಡಲಾಗಿದೆ. 2 ತಿಂಗಳಲ್ಲಿ ವರದಿ & ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಕಾಮಗಾರಿ ಸಂಬಂಧಪಟ್ಟ ಇಲಾಖೆಗಳಿಂದ ವರದಿ ಪಡೆಯಲು ಅವಕಾಶ ನೀಡಲಾಗಿದೆ. ಲಂಚ ಪ್ರಸ್ತಾಪ ನಾಗಮೋಹನ್ ದಾಸ್ ಕಮಿಟಿಯಲ್ಲಿ ಇದೆ.. ಆದರೆ 40% ಕಮಿಷನ್ ಬಗ್ಗೆ ಉಲ್ಲೇಖ ಆಗಿಲ್ಲ. ಆದ್ರೆ ಲಂಚ ಪ್ರಸ್ತಾಪ ಮಾತ್ರ ವರದಿಯಲ್ಲಿ ಇದೆ ಎಂದು ಹೆಚ್.ಕೆ ಪಾಟೀಲ್ ತಿಳಸಿದರು .