ಇದು ನನ್ನೂರು, ನನ್ನ ಗ್ರೌಂಡ್ ಕಣೋ ಅಂತಾ ನೆಲಕ್ಕೆ ಗುದ್ದಿ ವೃತ್ತ ಹಾಕಿ ಆರ್ ಸಿಬಿ ವಿರುದ್ಧ ಅಜೇಯ ದಾಖಲೆ ಬರೆದ ಕನ್ನಡದ ಮಗ ಕೆಎಲ್ ರಾಹುಲ್ ಆಟವನ್ನು ಕ್ರಿಕೆಟ್ ಪ್ರೇಮಿಗಳು ಕೊಂಡಾಡುತ್ತಿದ್ದಾರೆ. ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಹೈವೋಲ್ಟೇಜ್ ಪಂದ್ಯವಿತ್ತು. ಹೈವೋಲ್ಟೇಜ್ ಅನ್ನೋದಕ್ಕಿ ಕಾರಣ ಕನ್ನಡದ ಮಗ ಕೆಎಲ್ ರಾಹುಲ್ ಡೆಲ್ಲಿ ಕ್ಯಾಪಿಟಲ್ ಫ್ಲೇಯರ್. ವಿರಾಟ್ ಕೊಹ್ಲಿ ದೆಹಲಿ ಹುಡ್ಗ. ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ನಿರೀಕ್ಷೆ ಇತ್ತು. ಕನ್ನಡದ ಈ ಹುಡುಗ ಬೆಂಗಳೂರಿನಲ್ಲಿ 9 ವರ್ಷಗಳ ಬಳಿಕ ಅರ್ಧ ಶತಕವೊಂದನ್ನು ದಾಖಲಿಸಿ ತನ್ನ ತಂಡದ ಗೆಲುವಿಗೆ ಕಾರಣರಾದರು.
ಕೆಎಲ್ ರಾಹುಲ್ ಅದ್ಭುತ ಆಟವಾಡಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಂಡರು. ಕನ್ನಡದ ಹುಡ್ಗ ತನ್ನದೇ ನೆಲದಲ್ಲಿ ಅಬ್ಬರಿದ ರೀತಿಗೆ ಇಡೀ ಗ್ರೌಂಡ್ ಸ್ಟನ್ ಆಗಿತ್ತು. ಕೆಎಲ್ ರಾಹುಲ್ ಅವರ ಅಜೇಯ 93 ರನ್ಗಳ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಲಿಸಿತು. ತಮ್ಮ ತಂಡ ಗೆದ್ದ ಬಳಿಕ ರಾಹುಲ್ “ವೃತ್ತ ಬರೆದಾಗಿದೆ, ಈ ವೃತ್ತದಲ್ಲಿ ಇರೋದೆಲ್ಲ ನಂದೇ” ಎಂದು ಸಂದೇಶ ಕೊಟ್ಟಿದ್ದರು.
ಕನ್ನಡದ ಹುಡ್ಗ ರಾಹುಲ್ ಆರ್ಸಿಬಿಯಲ್ಲಿ ಇದ್ದಿದ್ರೆ ಕನ್ನಡಿಗರು ಇನ್ನಷ್ಟು ಖುಷಿಪಡುತ್ತಿದ್ದರು. ಆದರೆ ಅವರಿಗೆ ಆರ್ಸಿಬಿಯಲ್ಲಿ ಆಡಲು ಅವಕಾಶ ಇಲ್ಲದಂತಾಗಿದೆ. ಆರ್ ಸಿಬಿ ಮ್ಯಾನೆಜ್ಮೆಂಟ್ ಅವರನ್ನು ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಇದೆ. ಅದಕ್ಕೆ ರಾಹುಲ್ ವೃತ್ತ ಬರೆದು ಈ ವೃತ್ತದಲ್ಲಿ ಇರೋದೆಲ್ಲ ನನ್ನಂದೇ ಎಂದು ಮ್ಯಾನೆಜ್ಮೆಂಟ್ ಗೆ ಟಾಂಗ್ ಕೊಟ್ಟಿದ್ದರು ಎನ್ನಲಾಗಿತ್ತು. ರಾಹುಲ್ ಮಾಡಿದ್ದು ಸರಿ ಇದೆ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಆಟ ಆಡಿದ್ದು ಸರಿ, ಆ ರೀತಿ ಆಚರಣೆ ಅಗತ್ಯ ಇರಲಿಲ್ಲ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. ಅಸಲಿಗೆ ರಾಹುಲ್ ಹೀಗೆ ಮಾಡಲು ಕಾರಣ ಕಾಂತಾರ ಸಿನಿಮಾವಂತೆ. ಹಾಗಂತ ಅವರೇ ಹೇಳಿದ್ದಾರೆ. ನನ್ನ ಅಚ್ಚುಮೆಚ್ಚಿನ ಕನ್ನಡ ಸಿನಿಮಾ ಕಾಂತಾರ. ಅದರಲ್ಲಿ ಬರುವ ಕ್ಲೈಮ್ಯಾಕ್ಸ್ ದೃಶ್ಯವನ್ನು ತಾವು ಇಲ್ಲಿ ಮಾಡಿರುವುದಾಗಿ ತಿಳಿಸಿದ್ದಾರೆ.