ಬೆಂಗಳೂರು: ರಾಜ್ಯದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿ ಅಥವಾ ಜಾತಿ ಗಣತಿ ವರದಿ ಜಾರಿ ತರುವ ಸಂಬಂಧ ಏಪ್ರಿಲ್ 17ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಲು ಸರ್ಕಾರ ಮುಂದಾಗಿದೆ.
ಏ.17ರಂದು ಜಾತ ಗಣತಿ ವರದಿ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ಮುಂದಿನ ಸಾಧಕ-ಬಾಧಕಗಳ ಬಗ್ಗೆ ಹೆಜ್ಜೆ ಇಡಲು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು..
ಹಿಂದುಳಿದ ವರ್ಗದ ಆಯೋಗದ ನಡೆಸಿದ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿಯನ್ನ ಕ್ಯಾಬಿನೆಟ್ನಲ್ಲಿ ಮಂಡಿಸಲಾಗಿದೆ. ಎರಡು ಬಾಕ್ಸ್ ವರದಿಯನ್ನು ನೀಡಲಾಗಿದೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ವರದಿ & ಜಾತಿವಾರು ವರದಿ ನೀಡಲಾಗಿದೆ. 50 ಸಂಪುಟಗಳ ವರದಿಯನ್ನ ಕ್ಯಾಬಿನೆಟ್ನಲ್ಲಿ ಓಪನ್ ಮಾಡಿದ್ದೇವೆ..ಅದರಲ್ಲಿ ಕೆಲವು ವಿಚಾರಗಳನ್ನ ಚರ್ಚೆ ಮಾಡಿದ್ದೇವೆ ಎಂದರು.
ಜಾತಿ ಗಣತಿಯಲ್ಲಿ ಒಟ್ಟು 5 ಕೋಟಿ 98ಲಕ್ಷ ಜನ ವರದಿಯಲ್ಲಿ ಒಳಪಟ್ಟಿದ್ದಾರೆ. 1 ಕೋಟಿ 35 ಲಕ್ಷ ಕುಟುಂಬಗಳು ಈ ವರದಿಯಲ್ಲಿ ಒಳಪಟ್ಟಿವೆ. ಈ ಸಮೀಕ್ಷೆಯಲ್ಲಿ 1 ಲಕ್ಷದ 60 ಸಾವಿರ ಅಧಿಕಾರಿಗಳು ಕೆಲಸ ಮಾಡಿದ್ದಾರೆ. 54 ಮಾನದಂಡಗಳ ಆಧಾರದ ಮೇಲೆ ಸಮೀಕ್ಷೆ ನಡೆದಿದೆ.
6 ಜನರ ತಜ್ಞರ ತಂಡ ಮಾನದಂಡಗಳನ್ನ ಸಿದ್ದಪಡಿಸಿತ್ತು. ಒಟ್ಟು 94.17% ಜನರ ಕುರಿತು ವರದಿಯನ್ನ ಪಡೆಯಲಾಗಿದೆ. ಇನ್ನೂ 37 ಲಕ್ಷ ಜನರ ಸಮೀಕ್ಷೆ ಆಗಿಲ್ಲ ಎಂದು ತಂಗಡಗಿ ತಿಳಿಸಿದ್ದಾರೆ.
ಜಾತಿ ಗಣತಿಗೆ 94.17% ಜನರ ಮಾಹಿತಿ ಸಂಗ್ರಹ: ಶಿವರಾಜ್ ತಂಗಡಗಿ ಹೇಳಿದ್ದಿಷ್ಟು..
By Author AIN