ತುಮಕೂರು : ಇಂಟರ್ ನ್ಯಾಷನಲ್ ಏರ್ ಪೋರ್ಟ್ ವಿಚಾರವಾಗಿ ಎಂಬಿ ಪಾಟೀಲ್ ಅವರ ಹೇಳಿಕೆಗೆ ತಿರುಗೇಟು ನೀಡಿದ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ ತಿರುಗೇಟು ನೀಡಿದ್ದಾರೆ.
ತುಮಕೂರಿನಲ್ಲಿ ಮಾತನಾಡಿದ ಅವರು, ಎಂಬಿ ಪಾಟೀಲ್ ಮಾತ್ರ ಸಚಿವರಲ್ಲಾ, ಇನ್ನೂ ಹಲವು ಸಚಿವರಿದ್ದಾರೆ, ಶಾಸಕರಿದ್ದಾರೆ. ಆತ್ಮೀಯರಾದ ಎಂಬಿ ಪಾಟೀಲ್ ರಿಗೆ ಮನವಿ ಮಾಡುತ್ತೇನೆ. ಒಮ್ಮೆ ಶಿರಾದಲ್ಲಿ ಬಂದು ಇಳಿದು ನೋಡಿ. ಯಾವ ಹೂಡಿಕೆದಾರರು ಒಪ್ಪುತ್ತಾರೆ ಇಲ್ಲಾ ನೋಡೋಣ. ತುಮಕೂರಿನಲ್ಲಿ ಏರ್ಪೋರ್ಟ್ ಆದರೆ ತುಮಕೂರು ಚಿತ್ರದುರ್ಗಕ್ಕೆ ಮಾತ್ರ ಅನುಕೂಲವಾಗಲಿದೆ. ಹೂಡಿಕೆದಾರರು ಬರೋದಿಲ್ಲ ಅಂದ್ರೆ ಏನು ಅರ್ಥ, 2033 ಕ್ಕೆ ಏನಾಗುತ್ತೆ..?, ಅಲ್ಲಿವರೆಗೆ ಶಿರಾ, ವಸಂತ ನರಸಾಪುರದಲ್ಲಿರುವ ಲ್ಯಾಂಡ್ ಖಾಲಿ ಇರಲು ಸಾಧ್ಯವೇ..? ಎಂದು ಪ್ರಶ್ನಿಸಿದ್ದಾರೆ.
ಬಿಡದಿಯಲ್ಲಿ 2ನೇ ವಿಮಾನ ನಿಲ್ದಾಣ!? ಯಾರ ಒತ್ತಡ ಇದ್ಯೋ ಗೊತ್ತಿಲ್ಲ ಎಂದ ಗೃಹ ಸಚಿವ!
ಬೆಂಗಳೂರಿಗೆ ತುಮಕೂರಿಗೆ ವ್ಯತ್ಯಾಸ ಇಲ್ಲಾ, ಹಾಗೇಯೇ ತುಮಕೂರು ಸಿರಾಕ್ಕೂ ವ್ಯತ್ಯಾಸವಿಲ್ಲ. ಶಿರಾ ಸೂಕ್ತವಾದ ಜಾಗವಾಗಲಿದೆ. ಅಭಿವೃದ್ದಿಯಿಂದ ವಂಚಿತವಾಗಿರುವ ಉತ್ತರ ಕರ್ನಾಟಕ ಭಾಗವನ್ನ ಕಳಕಳಿಯಿಂದ ಮಾತನಾಡುತ್ತಿದ್ದೇನೆ. ನಾನು ಸಚಿವನಾಗಿದ್ದಾಗ ಫುಡ್ ಪಾರ್ಕ್ಗಳನ್ನ ಮಾಡಿದೆ. ಇನ್ವೆಸ್ಟರ್ ಬಂದು ಪುಡ್ ಪಾರ್ಕ್ ಗೆ ಹೂಡಿಕೆ ಮಾಡಿದ್ದಾರೆ. ಅದರಿಂದ ರೈತರ ಉತ್ಪನ್ನಗಳು ವಿದೇಶಕ್ಕೆ ರಫ್ತು ಆಗ್ತಿದೆ. ಇದರಿಂದ ಹಲವು ಜಿಲ್ಲೆಯ ರೈತರಿಗೆ ಉಪಯೋಗವಾಗ್ತಿದೆ. ಹೀಗಿರುವಾಗ ಇಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿ ಅಗತ್ಯವಿದೆ ಎಂದರು.