ಗದಗ:- ಗದುಗಿನ ಶ್ರೀ ಜಗದ್ಗುರು ತೋಂಟದಾರ್ಯ ಜಾತ್ರಾ ಮಹೋತ್ಸವದ ಅಂಗವಾಗಿ ಜಾನುವಾರುಗಳ ಮೇಳ ನಡೆಯಿತು. ಗದಗ ಜಿಲ್ಲೆಯ ವಿವಿಧ ಭಾಗಗಳ ರೈತರು ತಮ್ಮ ಜಾನುವಾರುಗಳನ್ನ ಮೇಳದಲ್ಲಿ ಪ್ರದರ್ಶನ ಮಾಡಿದ್ರು.
ಜವಾರಿ ಹಸು, ಜರ್ಸಿ, ಎಚ್ ಎಫ್ ತಳಿ ಹಸು, ಮುರ್ರಾ ಎಮ್ಮೆ, ಧಾರವಾಡಿ, ಫಂಡರಾಪುರಿ ಎಮ್ಮೆ ಸೇರಿದಂತೆ ವಿವಿಧ ತಳಿಯ ಜಾನುವಾರುಗಳು ಮೇಳದಲ್ಲಿ ಪಾಲ್ಗೊಂಡಿದ್ದವು. ಉಳುಮೆಗೆ ಯೋಗ್ಯವಾದ ಹಸುಗಳು ಹಾಲು ಕರೆಯುವ ಹಸುಗಳ ಬಗ್ಗೆ ಮೇಳದಲ್ಲಿ ಮಾಹಿತಿ ನೀಡಲಾಯಿತು.
ನೂರಾರು ರೈತರು ಜಾನುವಾರು ಮೇಳದಲ್ಲಿ ಪಾಲ್ಗೊಂಡು ಜಾನುವಾರುಗಳ ಬಗ್ಗೆ ಮಾಹಿತಿಯನ್ನ ಪಡೆದುಕೊಂಡರು. ಬಿಸಿಎ ಪದವೀಧರ ರೈತ ನಿತಿನ್ ಒಳ್ಳೋಳ್ಳೆ ಕೆಲಸದ ಅವಕಾಶ ಬಿಟ್ಟು ಹೈನುಗಾರಿಕೆಯಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದು ಪ್ರೀತಿಯಿಂದ ಹೈನುಗಾರಿಕೆ ಮಾಡಿ ಲಾಭ ಪಡೆಯಬಹುದು ಎಂದರು.