ಬೆಂಗಳೂರು:- ಐಪಿಎಲ್ ಮ್ಯಾಚ್ ಗಳ ಟಿಕೆಟ್ ಸಿಕ್ರೆ ಅವ್ರೆ ಪುಣ್ಯವಂತರು ಅನ್ನೊ ಹಾಗಾಗಿದೆ. ಯಾಕಂದ್ರೆ ಎಷ್ಟೇ ಕಷ್ಟ ಪಟ್ರೂ ಟಿಕೆಟ್ ಗಳು ಸಿಕ್ತಿಲ್ಲ. ಅಂತದ್ರಲ್ಲಿ ಆರ್ ಸಿಬಿ ಹಾಗೂ ದೆಹಲಿ ಐಪಿಎಲ್ ಮ್ಯಾಚ್ ನ
ಟಿಕೆಟ್ ಗಳನ್ನ ದುಪ್ಪಟ್ಟು ಬೆಲೆಗೆ ಬ್ಲಾಕ್ ನಲ್ಲಿ ಮಾರಾಟ ಮಾಡುತ್ತಿದ್ದ 8 ಆರೋಪಿಗಳನ್ನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ.
ಹೀಗೆ ಮುಂದುವರಿದರೆ ನಿಮ್ಮ ಮೇಲೆ ಕ್ರಮ ಗ್ಯಾರಂಟಿ: ಜಯಮೃತ್ಯುಂಜಯ ಶ್ರೀಗೆ ಲಿಂಗಾಯತ ಪಂಚಮಸಾಲಿ ಟ್ರಸ್ಟ್ ಎಚ್ಚರಿಕೆ!
ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ, ಕಬ್ಬನ್ ಪಾರ್ಕ್ ಒಳಗೆ ಟಿಕೆಟ್ ಮಾರಾಟ ಮಾಡ್ತಿದ್ದಾಗ ಸಿಸಿಬಿ ಡಿಸಿಪಿ1 ಅಕಾಯ್ ಅಕ್ಷಯ್ ಮಚೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧನ ಮಾಡಲಾಗಿದೆ. ಇನ್ನೂ ಟಿಕೆಟ್ ಮಾರಾಡ ಮಾಡ್ತಿದ್ದವರನ್ನ ಹಿಡಿಯಲು ಸಿಸಿಬಿ ಪೊಲೀಸ್ರು ಆರ್ ಸಿವಿ ಫ್ಯಾನ್ಸ್ ಸೋಗಿನಲ್ಲಿ ಕಾಳ ಸಂತೆಯಲ್ಲಿ ಟಿಕೆಟ್ ಮಾರೋರನ್ನ ಹೆಡೆಮುರಿಕಟ್ಟೊದ್ದಾರೆ. ಮಪ್ತಿಯಲ್ಲಿ ಟಿಕೆಟ್ ಖರೀದಿಸುವ ನೆಪದಲ್ಲಿ ಕಾರ್ಯಾಚರಣೆ ನಡೆಸಿರೊ ಸಿಸಿಬಿ ಪೊಲೀಸ ಎಕ್ಸ್ ಕ್ಲೂಸಿವ್ ವಿಡಿಯೋ AIN ಕನ್ನಡ ಗೆ ಲಭ್ಯವಾಗಿದೆ.
ಸದ್ಯ ಆರೋಪಿಗಳನ್ನು ಬಂಧಿಸಿ ಕಬ್ಬನ್ ಪಾರ್ಕ್ ಪೊಲೀಸರಿಗೆ ಒಪ್ಪಿಸಿದ್ದು, ಈ ಬಗ್ಗೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇನ್ನೂ ಈ ಬ್ಲಾಕ್ ಮಾರ್ಕೇಟ್ ಹಿಂದೆ ಕೆ ಎಸ್ ಸಿಎ ಯ ಕೆಲ ಅಧಿಕಾರಿ ಸಿಬ್ಬಂದಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಸಾರ್ವಜನಿಕರು ದಿನವೀಡಿ ಕಾದ್ರು ಒಂದಿ ಟಿಕೆಟ್ ಸಿಗಲ್ಲ. ಇನ್ನೂ ಅನ್ ಲೈನ್ ನಲ್ಲಿ ಒಂದೆರಡು ನಿಮಿಷ ಬುಕ್ಕಿಂಗ್ ಓಪನ್ ಆದ್ರೆ ಹೆಚ್ಚು. ಅಂತಹದ್ರಲ್ಲಿ ಈ ಬ್ಲಾಕ್ ಟಿಕೇಟ್ ಮಾರೋರಿಗೆ ಎಲ್ಲಿಂದ ಟಿಕೆಟ್ ಸಿಗ್ತಿದೆ. ಇವ್ರಿಗೆ ಕೆಎಸ್ ಸಿಯ ಯ ಕೆಲ ಅಧಿಕಾರಿ ಸಿಬ್ಬಂದಿಗಳೇ ಟಿಕೆಟ್ ನೀಡಿ ಮಾರಾಟ ಮಾಡಿಸ್ತಿದ್ದಾರ ಅನ್ನೋ ಅನುಮಾನ ಕೂಡವಿದ್ದು,
ಬ್ಲಾಕ್ ಟಿಕೆಟ್ ಹಿಂದೆ ಯಾರಿದ್ದಾರೆ , ಟಿಕೆಟ್ ಹೇಗೆ ಸಿಕ್ತು ಎಂಬ ಬಗ್ಗೆ ಪೊಲೀಸರಿಂದ ತನಿಖೆ ನಡೀತಿದೆ. ಪ್ರಕರಣವನ್ನ ಸಿಸಿಬಿಗೆ ವರ್ಗಾಯಿಸಿಕೊಂಡಿ ಸಿಸಿಬಿ ಅಧಿಕಾರಿಗಳೇ ಟಿಕೆಟ್ ಹಿಂದಿನ ಕಳ್ಳ ಕೈಗಳನ್ನ ಪತ್ತೆ ಮಾಡಲು ಮುಂದಾಗಿದ್ದಾರೆ.